ಆ್ಯಪ್ನಗರ

ಆಧುನಿಕತೆಯಿಂದ ಸಂಸ್ಕೃತಿ, ಸಂಸ್ಕಾರ ದೂರ

ಕುಮಟಾ : ಅತಿಯಾದ ಆಧುನಿಕತೆಯಿಂದ ನಮ್ಮ ಸಂಸ್ಕಾರ ದೂರ ಸರಿಯುತ್ತಿದ್ದು, ಅದನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾಗಿದೆ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮಿಜೀಯವರು ನುಡಿದರು.

Vijaya Karnataka 10 Feb 2019, 5:00 am
ಕುಮಟಾ : ಅತಿಯಾದ ಆಧುನಿಕತೆಯಿಂದ ನಮ್ಮ ಸಂಸ್ಕಾರ ದೂರ ಸರಿಯುತ್ತಿದ್ದು, ಅದನ್ನು ಮುಂದಿನ ತಲೆಮಾರಿಗೆ ಉಳಿಸಿಕೊಳ್ಳಬೇಕಾಗಿದೆ ಎಂದು ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಸ್ವಾಮಿಜೀಯವರು ನುಡಿದರು.
Vijaya Karnataka Web KWR-PHT 9 KMT 2


ಪಟ್ಟಣದ ಹೊಸ ಹೆರವಟ್ಟಾದ ದೈವಜ್ಞ ಬ್ರಾಹ್ಮಣ ಶ್ರೀಲಕ್ಷ್ಮೀನಾರಾಯಣ ದೇವ ಬಗ್ಗೋಣ ಮಠದ ಶ್ರೀ ಲಕ್ಷ್ಮೀನಾರಾಯಣ ಹಾಗೂ ಪರಿವಾರ ದೇವರುಗಳ ಪುನರ್‌ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ಆಧುನಿಕತೆ ಬೆಳೆದಂತೆ ಸಮಾಜದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ದೂರವಾಗುತ್ತಿವೆ. ಇದು ಕಳವಳಕಾರಿ ಸಂಗತಿಯಾಗಿದೆ. ಜನರಲ್ಲಿ ದೇವರ ಧ್ಯಾನ ಮತ್ತು ಅಧ್ಯಾತ್ಮಿಕ ಚಿಂತನೆ ಕಡಿಮೆಯಾಗುತ್ತಿದೆ. ಹಿರಿಯರು ಮತ್ತು ಪಾಲಕರು ತಮ್ಮ ಮಕ್ಕಳಲ್ಲಿ ಆಧ್ಯಾತ್ಮಿಕ ಭಾವನೆಯನ್ನು ಚಿಕ್ಕಂದಿನಿಂದಲೇ ಬಿತ್ತುವ ಕಾರ್ಯ ಮಾಡಬೇಕು. ದೇವರ ಕೃಪೆಯಿಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿನಿತ್ಯ ದೇವರ ಧ್ಯಾನವನ್ನು ಮಾಡುವ ಮೂಲಕ ಸತ್ಕಾರ್ಯ ಕೈಗೊಳ್ಳಬೇಕು. ಎಲ್ಲರ ಜೊತೆ ಸಹಬಾಳ್ವೆಯಿಂದ ಸಾಮರಸ್ಯ ಮೆರೆಯಬೇಕು. ಶುದ್ಧ ಮನಸ್ಸಿನಿಂದ ಕೈಗೊಳ್ಳುವ ಕಾರ್ಯಗಳು ಶೀಘ್ರ ಯಶಸ್ಸುಗೊಳ್ಳುತ್ತವೆ. ಹೀಗಾಗಿ ಎಲ್ಲ ಭಕ್ತರ ಸಹಕಾರದಿಂದ ದೇವಸ್ಥಾನ ಭವ್ಯವಾಗಿ ನಿರ್ಮಾಣಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನ ಕಾಮಗಾರಿಗೆ ಆರ್ಥಿಕ ನೆರವು ನೀಡಿದ ದಾನಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನ ಹಾಗೂ ವಿದ್ಯಾರ್ಥಿಗಳನ್ನು ಶ್ರೀಗಳು ಸನ್ಮಾನಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಗಿಬ್‌ ವೃತ್ತದಲ್ಲಿ ಭವ್ಯವಾಗಿ ಸ್ವಾಗತಿಸಿ, ಬೈಕ್‌ ರಾರ‍ಯಲಿ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನದ ವರೆಗೆ ಕರೆತರಲಾಯಿತು. ಗೃಹಿಣಿಯರ ಪೂರ್ಣ ಕುಂಭ ಸ್ವಾಗತ ಮೆರವಣಿಗೆಗೆ ಮೆರಗು ನೀಡಿತ್ತು. ಬೆಳಗ್ಗೆ ಅಷ್ಠೊತ್ತರ ಶತಕಲಶ ಪೂರ್ವಕ ಪ್ರಧಾನ ಹೋಮ, ವಿಷ್ಣು ಯಾಗ, ಶ್ರೀಗಳಿಂದ ಕಲಶಾಭೀಷೇಕ, ಶ್ರೀಗಳ ಪಾದ ಪೂಜೆ, ಪೂರ್ಣಾಹುತಿ, ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಪಲ್ಲಕಿ ಉತ್ಸವ, ಹೂವಿನ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮಠದ ಅಧ್ಯಕ್ಷ ರಾಜೇಶ ಶೇಟ್‌, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮಧುಸೂದನ ಶೇಟ್‌, ಯವಕ ಸಂಘದ ಅಧ್ಯಕ್ಷ ರಾಘವೇಂದ್ರ ವಿ. ಶೇಟ್‌, ಮಹಿಳಾ ಮಂಡಳಾಧ್ಯಕ್ಷೆ ವಂದನಾ ಎಂ ದಿವಾಕರ್‌, ಸಮಾಜದ ಪ್ರಮುಖರಾದ ಮಹಾಭಲೇಶ್ವರ ಶೇಟ್‌, ರತ್ನಾಕರ ಶೇಟ್‌, ಶ್ರೀಧರ ಶೇಟ್‌ ಮೂರೂರು, ರಾಮದಾಸ ಶೇಟ್‌, ಕುಮಾರ ಶೇಟ್‌, ದನಂಜಯ ಶೇಟ್‌, ದತ್ತಾತ್ರಯ ಶೇಟ್‌, ಪ್ರಶಾಂತ ಶೇಟ್‌, ಶ್ರೀಪಾದ ಶೇಟ್‌, ಗಣಪತಿ ದಿವಾಕರ, ಸುಬ್ರಹ್ಮಣ್ಯ ಶೇಟ್‌, ಮಂಜುನಾಥ ಶೇಟ್‌, ರಾಜೇಶ ಶೇಟ್‌, ಮಾರುತಿ ಶೇಟ್‌, ಸತೀಶ ಸಾನು ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು ಸೇರಿದಂತೆ ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ