ಆ್ಯಪ್ನಗರ

ಅಂಡಗಿಯಲ್ಲಿ ಸೈಕಲ್‌ ವಿತರಣೆ

ಶಿರಸಿ: ತಾಲೂಕಿನ ಅಂಡಗಿಯ ಶ್ರೀ ಬಸವೇಶ್ವರ ಪ್ರೌಢಶಾಲೆಯ 42 ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ಬೈಸಿಕಲ್‌ ವಿತರಿಸಲಾಯಿತು.

Vijaya Karnataka 21 Aug 2019, 5:00 am
ಶಿರಸಿ: ತಾಲೂಕಿನ ಅಂಡಗಿಯ ಶ್ರೀ ಬಸವೇಶ್ವರ ಪ್ರೌಢಶಾಲೆಯ 42 ವಿದ್ಯಾರ್ಥಿಗಳಿಗೆ ಸೋಮವಾರ ಉಚಿತ ಬೈಸಿಕಲ್‌ ವಿತರಿಸಲಾಯಿತು.
Vijaya Karnataka Web SRS-19SRS8


ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ದೊಡ್ಮನಿ ಸೈಕಲ್‌ ವಿತರಣಾ ಕಾರ್ಯ ನೆರವೇರಿಸಿ ಮಾತನಾಡಿ, ಸರಕಾರ ನೀಡಿದ ಈ ಸೌಲಭ್ಯದ ಪ್ರಯೋಜನ ಪಡೆದು ಮಕ್ಕಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಜನೆಯ ಅನುಕೂಲಕ್ಕೆ ನೀಡಿದ ಸೈಕಲ್‌ನ್ನು ಬೇರೆಯವರ ಉಪಯೋಗಕ್ಕೆ ನೀಡಬಾರದು ಎಂದರು.

ಹಿಂದೆಲ್ಲ ಕಲಿಕೆಗೆ ಇಷ್ಟೊಂದು ಸೌಲಭ್ಯಗಳಿರುತ್ತಿರಲಿಲ್ಲ. ದೂರದಿಂದ ನಡೆದುಕೊಂಡು ಬರುವವರ ಅನುಕೂಲಕ್ಕೆ ಸೈಕಲ್‌ ನೀಡಲಾಗಿದೆ. ಯಾರಿಗೂ ಅಪಾಯವಾಗದಂತೆ ನಿಧಾನವಾಗಿ ಸೈಕಲ್‌ ಓಡಿಸಬೇಕು ಎಂದು ಸಲಹೆ ನೀಡಿದರು. ಪ್ರಮುಖರಾದ ಸಿ.ಎಫ. ನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ ಕುಪಗಡ್ಡೆ, ಮಾಜಿ ಅಧ್ಯಕ್ಷ ರಾದ ಸಿ.ಬಿ.ಗೌಡ, ದೇವರಾಜ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ