ಆ್ಯಪ್ನಗರ

ಕಡ್ನೀರು ಶಾಲೆಯಲ್ಲಿ ನಿತ್ಯ ಬಾಳೆ ಎಲೆ ಊಟ

ಹೊನ್ನಾವರ (ಉತ್ತರ ಕನ್ನಡ) : ತಾಲೂಕಿನ ಕಡ್ನೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ನೀರಿನ ತೀವ್ರ ಕೊರತೆ ಉಂಟಾಗಿದ್ದು, ಬಿಸಿಯೂಟ ಮಾಡಿದ ಪ್ಲೇಟ್‌ ತೊಳೆಯಲು ನೀರಿಲ್ಲದೇ ಮಕ್ಕಳು ಬಾಳೆ ಎಲೆ ಊಟಕ್ಕೆ ಶರಣಾಗಿದ್ದಾರೆ.

Vijaya Karnataka 6 Jun 2019, 5:00 am
ಹೊನ್ನಾವರ (ಉತ್ತರ ಕನ್ನಡ) : ತಾಲೂಕಿನ ಕಡ್ನೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ನೀರಿನ ತೀವ್ರ ಕೊರತೆ ಉಂಟಾಗಿದ್ದು, ಬಿಸಿಯೂಟ ಮಾಡಿದ ಪ್ಲೇಟ್‌ ತೊಳೆಯಲು ನೀರಿಲ್ಲದೇ ಮಕ್ಕಳು ಬಾಳೆ ಎಲೆ ಊಟಕ್ಕೆ ಶರಣಾಗಿದ್ದಾರೆ.
Vijaya Karnataka Web daily banana leaf meal at the drinking water
ಕಡ್ನೀರು ಶಾಲೆಯಲ್ಲಿ ನಿತ್ಯ ಬಾಳೆ ಎಲೆ ಊಟ


ಈ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ ಒಟ್ಟೂ 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಪ್ರಾರಂಭಕ್ಕೂ ಮುನ್ನವೇ ಬಾವಿಯಲ್ಲಿನ ನೀರು ಬರಿದಾಗಿದೆ. ಬಿಸಿಯೂಟಕ್ಕೂ ನೀರಿನ ಕೊರತೆ ಉಂಟಾಗಿದೆ. ಚಂದಾವರ ಗ್ರಾಪಂ ವತಿಯಿಂದ ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಈ ನೀರು ವಿದ್ಯಾರ್ಥಿಗಳಿಗೆ ಕುಡಿಯಲು ಮತ್ತು ಬಿಸಿಯೂಟಕ್ಕೆ ಮಾತ್ರ ಸಾಕಾಗುತ್ತಿದೆ. ಊಟದ ಬಟ್ಟಲು, ಲೋಟ ತೊಳೆಯಲು ಸಾಕಾಗುತ್ತಿಲ್ಲ. ಹೀಗಾಗಿ ಶಿಕ್ಷ ಕರು ವಿದ್ಯಾರ್ಥಿಗಳಿಗೆ ಬಾಳೆ ಎಲೆ ಬಳಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಶಾಲಾ ಅರಂಭೋತ್ಸವದ ದಿನದಿಂದಲೇ ಪ್ರತಿನಿತ್ಯ ಮನೆಯಿಂದ ಬರುವಾಗ 4-5 ಬಾಳೆ ಎಲೆಗಳನ್ನು ತರುತ್ತಿದ್ದಾರೆ. ಪಾಲಕರು ನಿತ್ಯ ತೋಟಗಳಲ್ಲಿನ ಬಾಳೆ ಎಲೆ ಕೊಯ್ದು ತಂದುಕೊಡುತ್ತಿದ್ದು, ಮಕ್ಕಳು ಸ್ಕೂಲ್‌ ಬ್ಯಾಗ್‌ ಜತೆಗೆ ಬಾಳೆ ಎಲೆಯನ್ನೂ ಕೊಂಡೊಯ್ಯುತ್ತಿದ್ದಾರೆ. ಇದರಿಂದ ತಕ್ಕಮಟ್ಟಿಗೆ ನೀರಿನ ಕೊರತೆ ನೀಗಿದೆ.

ಶಾಲೆಗೆ ಕುಡಿಯುವ ನೀರಿನ ಬಾವಿ ಇದೆ. ಇಷ್ಟು ವರ್ಷ ನೀರಿನ ಕೊರತೆ ಉಂಟಾಗಿರಲಿಲ್ಲ. ಅಕ್ಕ ಪಕ್ಕದ ಮನೆಗಳ ಜನರೂ ನೀರಿನ ಕೊರತೆ ಆದಾಗ ಶಾಲೆಯ ಬಾವಿಯ ನೀರನ್ನು ಒಯ್ಯುತ್ತಿದ್ದರು. ಆದರೆ ಈ ವರ್ಷ ಶಾಲೆ ಆರಂಭವಾಗುವ ಮುನ್ನವೇ ಬಾವಿ ಬರಿದಾಗಿದೆ.

.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ