ಆ್ಯಪ್ನಗರ

12ರಂದು ಮುಂಡಗೋಡಗೆ ದಲೈಲಾಮಾ

ಮುಂಡಗೋಡ (ಉತ್ತರ ಕನ್ನಡ)​: ಟಿಬೇಟಿಯನ್ನರ ಧರ್ಮಗುರು ದಲೈಲಾಮಾ ಅವರು ಡಿ. 12 ರಂದು ಮುಂಡಗೋಡ ತಾಲೂಕಿನ ಟಿಬೇಟಿಯನ್‌ ಬಡಾವಣೆಗೆ ಆಗಮಿಸಿ 12 ದಿನ ಇಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿಟಿಬೇಟಿಯನ್ನರು ತಮ್ಮ ಬಡಾವಣೆಗಳನ್ನು ಮದುವಣಗಿತ್ತಿಯಂತೆ ಶೃಂಗರಿಸುತ್ತಿದ್ದಾರೆ.

Vijaya Karnataka 10 Dec 2019, 5:00 am
ಮುಂಡಗೋಡ (ಉತ್ತರ ಕನ್ನಡ): ಟಿಬೇಟಿಯನ್ನರ ಧರ್ಮಗುರು ದಲೈಲಾಮಾ ಅವರು ಡಿ. 12 ರಂದು ಮುಂಡಗೋಡ ತಾಲೂಕಿನ ಟಿಬೇಟಿಯನ್‌ ಬಡಾವಣೆಗೆ ಆಗಮಿಸಿ 12 ದಿನ ಇಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿಟಿಬೇಟಿಯನ್ನರು ತಮ್ಮ ಬಡಾವಣೆಗಳನ್ನು ಮದುವಣಗಿತ್ತಿಯಂತೆ ಶೃಂಗರಿಸುತ್ತಿದ್ದಾರೆ.
Vijaya Karnataka Web dalai lama to mundagoda on the 12th
12ರಂದು ಮುಂಡಗೋಡಗೆ ದಲೈಲಾಮಾ


ಎರಡು ವರ್ಷದ ಹಿಂದೆ ದಲೈಲಾಮಾ ಇಲ್ಲಿಗೆ ಬಂದಿದ್ದರು. ಈಗ ಮತ್ತೆ ಭೇಟಿ ನೀಡುತ್ತಿರುವ ಕಾರಣ ಟಿಬೇಟಿಯನ್ನರ ಸಂತೋಷ ಇಮ್ಮಡಿಗೊಂಡಿದೆ. ವ್ಯಾಪಾರ ನಿಮಿತ್ತ ದೇಶ, ವಿದೇಶದಲ್ಲಿರುವ ಟಿಬೇಟಿಯನ್ನರು ಪ್ರತಿ ವರ್ಷ ಜನವರಿ 15ರ ನಂತರ ಮರಳಿ ಬರುತ್ತಿದ್ದರು. ಆದರೆ ಈಗ ತಮ್ಮ ಧರ್ಮ ಗುರುವಿನ ದರ್ಶನಕ್ಕಾಗಿ ಹಿಮಾಚಲ ಪ್ರದೇಶ, ಲಡಾಕ್‌, ಬೈಲಕುಪ್ಪೆ ಭಾಗಗಳಿಂದ ಇಲ್ಲಿಗೆ ಬರಲಿದ್ದಾರೆ.

ಮಂದಿರಗಳಿಗೆ ಅಲಂಕಾರ: ಡ್ರೆಪುಂಗ್‌ ಲೊಸಲಿಂಗ್‌ ಮೋನ್ಯಾಸ್ಟ್ರಿ, ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರ ಸೇರಿದಂತೆ ವಿವಿಧ ಮಂದಿರಗಳನ್ನು ಅಲಂಕರಿಸಲಾಗುತ್ತಿದೆ. ಬೌದ್ಧ ವಿದ್ಯಾಲಯ ಮತ್ತು ಡ್ರೆಪುಂಗ್‌ ಗೊಮಾಂಗ್‌ ಕೋರ್ಟ್‌ ಯಾರ್ಡ್‌ಗಳಲ್ಲಿಅಂತಿಮ ಹಂತದ ಕೆಲಸ ಭರದಿಂದ ಸಾಗಿದೆ. ಪಟ್ಟಣದ ಅಮ್ಮಾಜಿ ಕೆರೆಯಿಂದ ಲಾಮಾಕ್ಯಾಂಪ್‌ ನಂ.6 ರವರೆಗೆ 35ಕ್ಕೂ ಹೆಚ್ಚು ಸ್ವಾಗತ ಕಮಾನುಗಳನ್ನು ಹಾಕಲಾಗುತ್ತದೆ ಎಂದು ನೂರಪ್‌ ಟೇಸಿ ಹೇಳುತ್ತಾರೆ.

ನಾನಾ ಕಾರ್ಯಕ್ರಮ:
ಡಿ. 12 ರಂದು ದಲೈಲಾಮಾ ಆಗಮನ, 13 ರಂದು ರಷಿಯನ್‌ ನ್ಯುರೋ ಸೈಂಟಿಸ್ಟ್‌ ತಂಡದೊಂದಿಗೆ ಚರ್ಚೆ. 14 ರಂದು ಡ್ರೆಪುಂಗ್‌ ಗೊಮಾಂಗ್‌ ಕೋರ್ಟ್‌ ಯಾರ್ಡ್‌ ಉದ್ಘಾಟನೆ. ಡಿ. 15, 16, 17 ರಂದು ಸಬಲೀಕರಣ ಕುರಿತು ವಿಸ್ತೃತ ಚರ್ಚೆ. 19ಕ್ಕೆ ನಾಗಾರ್ಜುನ ಬೋಧನ ಚರ್ಚೆ, 20ಕ್ಕೆ ಜೀವನ ಚಿಂತನೆ ಮತ್ತು ಪರಂಪರೆ ಕುರಿತು ಬೋಧನೆ. 21ಕ್ಕೆ ಬೌದ್ಧ ಮುಖಂಡ ಜೆ ಸೊಂಗಖಪಾ ಅವರ 600ನೇ ವರ್ಷಾಚರಣೆಯಲ್ಲಿಭಾಗಿಯಾಗಲಿದ್ದು, 22 ರಂದು ಲಾಂಗ್‌ ಲೈಫ್‌ ಪೂಜೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ