ಆ್ಯಪ್ನಗರ

‘ನೃತ್ಯ ಸಂಭ್ರಮ-2019’ ಮಾ.2ಕ್ಕೆ

ಯಲ್ಲಾಪುರ : ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಶಿರಸಿ ಇದರ ಯಲ್ಲಾಪುರ ಹಾಗೂ ಕಲ್ಲೇಶ್ವರ ಶಾಖೆಗಳ ''ನೃತ್ಯ ಸಂಭ್ರಮ-2019'' ಕಾರ್ಯಕ್ರಮವು ಪಟ್ಟಣದ ಗಣೇಶಪುರಂನ ಹೊಟೇಲ್‌ ಅಚ್ಛಾ ಕಂಫರ್ಟ್‌ ಸಭಾಭವನದಲ್ಲಿ ಮಾ.2 ರಂದು ಸಂಜೆ 4.30 ರಿಂದ ನಡೆಯಲಿದೆ.

Vijaya Karnataka 26 Feb 2019, 5:00 am
ಯಲ್ಲಾಪುರ : ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಶಿರಸಿ ಇದರ ಯಲ್ಲಾಪುರ ಹಾಗೂ ಕಲ್ಲೇಶ್ವರ ಶಾಖೆಗಳ ''ನೃತ್ಯ ಸಂಭ್ರಮ-2019'' ಕಾರ್ಯಕ್ರಮವು ಪಟ್ಟಣದ ಗಣೇಶಪುರಂನ ಹೊಟೇಲ್‌ ಅಚ್ಛಾ ಕಂಫರ್ಟ್‌ ಸಭಾಭವನದಲ್ಲಿ ಮಾ.2 ರಂದು ಸಂಜೆ 4.30 ರಿಂದ ನಡೆಯಲಿದೆ.
Vijaya Karnataka Web dance celebration 2019 march 2nd
‘ನೃತ್ಯ ಸಂಭ್ರಮ-2019’ ಮಾ.2ಕ್ಕೆ


ಕಾರ್ಯಕ್ರಮವನ್ನು ವಿಶ್ವದರ್ಶನ ಶಿಕ್ಷ ಣ ಸಂಸ್ಥೆಯ ಗೌರವ ಕಾರ್ಯದರ್ಶಿ ನರಸಿಂಹಮೂರ್ತಿ ಭಟ್ಟ ಕೋಣೆಮನೆ ಉದ್ಘಾಟಿಸಲಿದ್ದಾರೆ. ನಾಟ್ಯಾಂಜಲಿ ಕಲಾಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗಣಪತಿ ಭಟ್‌ ಯಲ್ಲಾಪುರ, ಉದ್ಯಮಿ ಬಿ.ಸತ್ಯನ್‌, ಕಲಾಕೇಂದ್ರದ ನಿರ್ದೇಶಕಿ ಡಾ.ಸಹನಾ ಪ್ರದೀಪ್‌ ಭಟ್ಟ ಆಗಮಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ನಾಟ್ಯಾಂಜಲಿ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಚೌಕಟ್ಟಿನ ವಿವಿಧ ನೃತ್ಯ ಬಂಧಗಳ ಪ್ರದರ್ಶನ ಹಾಗೂ ''ಶ್ರೀಕೃಷ್ಣ ನವರಸ'' ವಿಶೇಷ ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ನೃತ್ಯ ಕಲಾ ಕೇಂದ್ರದ ಪ್ರದೀಪ ಭಟ್ಟ, ಡಾ.ಸಹನಾ ಭಟ್ಟ, ವಿದುಷಿ ವಿನುತಾ ಹೆಗಡೆ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ