ಆ್ಯಪ್ನಗರ

ದಾಂಡೇಲಿ ನಿರುದ್ಯೋಗಿ ಯುವಕರಿಗೆ ನೌಕರಿ ನೀಡಿ

ದಾಂಡೇಲಿ : ನಗರದ ಜೀವನಾಡಿಯಾದ ಕಾಗದ ಕಾರ್ಖಾನೆಯಲ್ಲಿ ದಾಂಡೇಲಿಯ ನಿರುದ್ಯೋಗಿ ಯುವಕರಿಗೆ ಮೊದಲ ಆದ್ಯತೆಯಡಿ ನೌಕರಿ ನೀಡುವಂತೆ ನಗರಸಭಾ ಸದಸ್ಯ ದಶರಥ ಬಂಡಿವಡ್ಡರ ನೇತೃತ್ವದಲ್ಲಿ ನಗರದ ನಿರುದ್ಯೋಗಿ ಯುವಕರ ತಂಡ ಕಾಗದ ಕಾರ್ಖಾನೆಯನ್ನು ಆಗ್ರಹಿಸಿದೆ.

Vijaya Karnataka 10 Jul 2019, 5:00 am
ದಾಂಡೇಲಿ : ನಗರದ ಜೀವನಾಡಿಯಾದ ಕಾಗದ ಕಾರ್ಖಾನೆಯಲ್ಲಿ ದಾಂಡೇಲಿಯ ನಿರುದ್ಯೋಗಿ ಯುವಕರಿಗೆ ಮೊದಲ ಆದ್ಯತೆಯಡಿ ನೌಕರಿ ನೀಡುವಂತೆ ನಗರಸಭಾ ಸದಸ್ಯ ದಶರಥ ಬಂಡಿವಡ್ಡರ ನೇತೃತ್ವದಲ್ಲಿ ನಗರದ ನಿರುದ್ಯೋಗಿ ಯುವಕರ ತಂಡ ಕಾಗದ ಕಾರ್ಖಾನೆಯನ್ನು ಆಗ್ರಹಿಸಿದೆ.
Vijaya Karnataka Web dandeli give employment to unemployed youths
ದಾಂಡೇಲಿ ನಿರುದ್ಯೋಗಿ ಯುವಕರಿಗೆ ನೌಕರಿ ನೀಡಿ


ದಶರಥ ಬಂಡಿವಡ್ಡರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ನಿರುದ್ಯೋಗಿ ಯುವಕ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉದ್ಯೋಗವಿಲ್ಲದೇ ಹಪಹಪಿಸುವಂತಾಗಿದೆ. ಕಾಗದ ಕಾರ್ಖಾನೆಯಲ್ಲಿ ಕಾರ್ಮಿಕ ಸಂಘಟನೆ ಮಾಡಿಕೊಂಡ ಪರವೂರಿನವರೊಬ್ಬರು ಅವರೂರಿನ ಯುವಕರಿಗೆ ಮತ್ತು ಅವರ ಜಾತಿಯವರಿಗೆ ಉದ್ಯೋಗ ಕೊಡಿಸಲು ಒತ್ತಡ ತರುವುದರಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗುವುದು ಕಷ್ಟಕರವಾಗಿದೆ. ಈ ಕಾರ್ಮಿಕ ಮುಖಂಡರು ಉದ್ಯೋಗ ಮಾತ್ರವಲ್ಲದೇ ಕಾಗದ ಕಾರ್ಖಾನೆಯಲ್ಲಿ ತಮ್ಮವರಿಗೆ ಗುತ್ತಿಗೆಯನ್ನು ಸಹ ಕೊಡಲು ಒತ್ತಡ ತರುತ್ತಿದ್ದಾರೆಂದು ದಶರಥ ಬಂಡಿವಡ್ಡರ ಅವರು ಆರೋಪಿಸಿದ್ದಾರೆ.

ಕಾಗದ ಕಾರ್ಖಾನೆ ದಾಂಡೇಲಿಯ ಆಸ್ತಿ. ಈ ಆಸ್ತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ದಾಂಡೇಲಿಯ ಯುವಕರಿಗೆ ಆದ್ಯತೆಯಲ್ಲಿ ನೌಕರಿ ಕೊಡಿಸಬೇಕೆಂದು ಆಗ್ರಹಿಸಿದ ದಶರಥ ಬಂಡಿವಡ್ಡರ ಅವರು ಶೀಘ್ರ ನಗರದ ನಿರುದ್ಯೋಗಿ ಯುವಕರಿಗೆ ನೌಕರಿ ಕೊಡಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿರುದ್ಯೋಗಿ ಯುವಕರ ಭವಿಷ್ಯ ನಿರ್ಮಾಣಕ್ಕಾಗಿ ಉಗ್ರ ಹೋರಾಟ ಮಾಡುವುದು ಅನಿವಾರ‍್ಯ ಎಂದು ಗುಡುಗಿದ್ದಾರೆ.

ನಿರುದ್ಯೋಗಿ ಯುವಕರ ತಂಡದ ಸದಸ್ಯರಾದ ಸೂರಜ ಶಿವಾನಂದ ನಾಯ್ಕ ಹಳೆದಾಂಡೇಲಿ, ಸಾಗರ ವಡ್ಡರ, ಅಶೀಸ್‌ ಸಾಳೊಂಕೆ, ಅವಿನಾಶ ನಂದಿಕೋಲ, ಶ್ರೀಕಾಂತ, ಆನಂದ, ಮಂಜುನಾಥ, ಸಿ.ಕೆ.ಚಂದ್ರಕಾಂತ, ಮಣಿಕಂಠ ಗೌಡರ, ರಾಹುಲ್‌ ಮಡಿವಾಳ, ಗಣೇಶ ಬಂಡಿವಡ್ಡರ ಹೀಗೆ 30 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ