ಆ್ಯಪ್ನಗರ

ದಾಂಡೇಲಿ ಅಘೋಷಿತ ಬಂದ್‌

ದಾಂಡೇಲಿ :ಹಿರಿಯ ನ್ಯಾಯವಾದಿ ಅಜೀತ ನಾಯ್ಕ ಅವರ ಕೊಲೆ ಹಿನ್ನೆಲೆಯಲ್ಲಿ ನಗರದ ವ್ಯಾಪಾರಸ್ಥರು ತಮ್ಮ ವಹಿವಾಟು ಸ್ಥಗಿತಗೊಳಿದ್ದರಿಂದ ಅಘೋಷಿತ ಬಂದ್‌ನಂತಾಗಿತ್ತು.ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

Vijaya Karnataka 29 Jul 2018, 5:00 am
ದಾಂಡೇಲಿ :ಹಿರಿಯ ನ್ಯಾಯವಾದಿ ಅಜೀತ ನಾಯ್ಕ ಅವರ ಕೊಲೆ ಹಿನ್ನೆಲೆಯಲ್ಲಿ ನಗರದ ವ್ಯಾಪಾರಸ್ಥರು ತಮ್ಮ ವಹಿವಾಟು ಸ್ಥಗಿತಗೊಳಿದ್ದರಿಂದ ಅಘೋಷಿತ ಬಂದ್‌ನಂತಾಗಿತ್ತು.ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
Vijaya Karnataka Web dandeli is unannounced bandh
ದಾಂಡೇಲಿ ಅಘೋಷಿತ ಬಂದ್‌


ನ್ಯಾಯವಾದಿ ಅಜೀತ ನಾಯ್ಕ ಹತ್ಯೆ ಖಂಡಿಸಿ ನ್ಯಾಯಾಲಯ ಕಾರ್ಯಕಲಾಪಗಳನ್ನು ರದ್ದುಗೊಳಿಸಲಾಗಿತ್ತು. ದಾಂಡೇಲಿ ಬಾರ್‌ ಕೌನ್ಸಿಲ್‌ ಕಾರ್ಯದರ್ಶಿ ಸೋಮಕುಮಾರ ಅಜಿತ್‌ ನಾಯ್ಕರ ಹತ್ಯೆ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸಿ ಆರೋಪಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಮರಣೋತ್ತರ ಪರೀಕ್ಷೆ ನಂತರ ಪಾರ್ಥಿವ ಶರೀರವನ್ನು ದಾಂಡೇಲಿ ನ್ಯಾಯಾಲಯ ಆವರಣದಲ್ಲಿ ಕೆಲವು ಕಾಲ ಇಡಲಾಗಿತ್ತು.

ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗೆ ಮರಣೋತ್ತರ ಪರೀಕ್ಷೆ ನಡೆಯಿತು.ಅರಿತವಾದ ಶಸ್ತ್ರದಿಂದ ಸಾವನ್ನಪ್ಪಿದ್ದಾರೆ ಎಂದುಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜೇಶ ಪ್ರಸಾದ ತಿಳಿಸಿದ್ದಾರೆ.

ಮಧ್ಯಾಹ್ನ 12 ರ ನಂತರ ಅಂತ್ಯಕ್ರಿಯೆ ಜೆ.ಎನ್‌. ರಸ್ತೆಯ ಸ್ವಗೃಹದಿಂದ ಆರಂಭಗೊಂಡ ಅಂತ್ಯಕ್ರಿಯೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಶೀಘ್ರ ವಿಚಾರಣೆಗೆ ಆಗ್ರಹ : ಅಜೀತ ನಾಯ್ಕ ಪಾರ್ಥಿವ ಶರೀರವನ್ನು ಶವಾಗಾರದ ಎದುರಿಟ್ಟು ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್‌ ಇಲಾಖೆ ಕೈಕೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲು ಮೋಹನ ಹಲವಾಯಿ, ಕಿರ್ತೀ ಗಾಂವಕರ,ಬಿ.ಎನ್‌.ವಾಸರೆ, ದಾಂಡೇಲಿ ತಾಲೂಕು ಸಮಗ್ರ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಆರೋಪಿ ಬಂಧನಕ್ಕೆ ಇಗಾಗಲೇ ಶಿರಸಿ ಎಎಸ್‌ಪಿ.ಎಲ್‌. ನಾಗೇಶ ನೇತೃತ್ವದಲ್ಲಿ ಐದು ತಂಡ ರಚಿಸಿಲಾಗಿದೆ. ವಿಚಾರಣೆಯನ್ನು ಚುರುಕುಗೊಳಿಸಲಾಗಿದ್ದು, ಸದ್ಯ ದೊರೆತ ಸುಳುವಿನ ಆಧಾರದ ಮೇಲೆ ಇನ್ನೆರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಕಾರವಾರದ ಎಸ್‌.ಪಿ.ವಿನಾಯಕ ಪಾಟೀಲ ಅವರು ಪತ್ರಕರ್ತರಿಗೆ ತಿಳಿಸಿದರು.

ಸಾಂತ್ವನ :ಜಿಪಂ ಮಾಜಿ ಅಧ್ಯಕ್ಷ ರಮಾನಂದ ನಾಯ್ಕ, ಮಾಜಿ ಶಾಸಕ ಸುನಿಲ ಹೆಗಡೆ ವಕೀಲ ನಾಯ್ಕ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ