ಆ್ಯಪ್ನಗರ

ದಾಂಡಿಯಾ, ಭಜನ ಮಾದರಿ ಕಾರ‍್ಯ

ಶಿರಸಿ : ಮನೆಮನೆಯಲ್ಲಿಯೂ ನವರಾತ್ರಿ ಹಬ್ಬವನ್ನು ಆಚರಿಸುತ್ತೇವೆ. ಆದರೆ ರಾಜಸ್ಥಾನ ವಿಷ್ಣು ಸಮಾಜದವರು ಮೂಲದ ಸಂಸ್ಕೃತಿ ಮುಂದಿನ ಮಕ್ಕಳಲ್ಲಿಬೆಳೆಯಬೇಕೆಂದು ದಾಂಡಿಯಾ, ಭಜನ ಕಾರ್ಯಕ್ರಮವನ್ನು ತಾವು ನೆಲೆಸಿರುವ ಎಲ್ಲಊರುಗಳಲ್ಲಿನಡೆಸಿಕೊಂಡು ಬರುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Vijaya Karnataka 11 Oct 2019, 5:00 am
ಶಿರಸಿ : ಮನೆಮನೆಯಲ್ಲಿಯೂ ನವರಾತ್ರಿ ಹಬ್ಬವನ್ನು ಆಚರಿಸುತ್ತೇವೆ. ಆದರೆ ರಾಜಸ್ಥಾನ ವಿಷ್ಣು ಸಮಾಜದವರು ಮೂಲದ ಸಂಸ್ಕೃತಿ ಮುಂದಿನ ಮಕ್ಕಳಲ್ಲಿಬೆಳೆಯಬೇಕೆಂದು ದಾಂಡಿಯಾ, ಭಜನ ಕಾರ್ಯಕ್ರಮವನ್ನು ತಾವು ನೆಲೆಸಿರುವ ಎಲ್ಲಊರುಗಳಲ್ಲಿನಡೆಸಿಕೊಂಡು ಬರುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ರಾಜ್ಯ ವಿಧಾನಸಭಾ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
Vijaya Karnataka Web dandia bhajan model functions
ದಾಂಡಿಯಾ, ಭಜನ ಮಾದರಿ ಕಾರ‍್ಯ


ಅವರು ನಗರದ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿಸ್ಥಳೀಯ ಶ್ರೀ ರಾಜಸ್ಥಾನ ವಿಷ್ಣು ಸಮಾಜದಿಂದ ಆಯೋಜಿಸಿದ್ದ ನವರಾತ್ರಿ ದಾಂಡಿಯಾ, ಸತ್ಸಂಗ ಹಾಗೂ ಭವ್ಯ ರಾತ್ರಿ ಜಾಗರಣ ಕಾರ್ಯಕ್ರಮದಲ್ಲಿಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.

ನಮ್ಮ ದೇಶದ ಸಂಸ್ಕೃತಿ ವಿವಿಧತೆಯಲ್ಲಿಏಕತೆಯಾಗಿದೆ. ನಮ್ಮ ಸಮಾಜದ ವಿಶೇಷತೆ, ಸಂಸ್ಕೃತಿ ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯ ಎಂದರು.

ಈ ವೇಳೆ ನಗರದಲ್ಲಿನೆಲೆಸಿರುವ ಶ್ರೀ ರಾಜಸ್ಥಾನ ವಿಷ್ಣು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಗಣಪತಿ ನಾಯ್ಕ, ಭೀಮಜಿ ಪಟೇಲ್‌ ಶಿವಮೊಗ್ಗಾ, ಬಿಕಾರಾಮ್ಜಿ, ಶ್ರೀ ಮಾರಿಕಾಂಬಾ ದೇವಾಲಯದ ಉಪಾಧ್ಯಕ್ಷ ಮನೋಹರ ಮಲ್ಮನೆ, ಜಿ.ಪಂ. ಸದಸ್ಯೆ ಉಷಾ ಹೆಗಡೆ, ರಮಾಕಾಂತ ಭಟ್ಟ, ರಾಘವೇಂದ್ರ ಶೆಟ್ಟಿ, ಗೋಪಾಲ ದೇವಾಡಿಗ, ಬಾಬುಲಾಲ್ಜಿ ಪಟೇಲ್‌, ಸೇವಾಲಾಲಜೀ ಪಟೇಲ್‌ ಸಿದ್ದಾಪುರ, ವಿಜಯ ಚೌಧರಿ, ಹುಬ್ಬಳ್ಳಿ, ಲಕ್ಷ್ಮಣ ಚೌಹಾಣ್‌ ಹಾಗೂ ಇತರರು ಉಪಸ್ಥಿತರಿದ್ದರು. ಸ್ಥಳೀಯ ಶ್ರೀ ರಾಜಸ್ಥಾನ ವಿಷ್ಣು ಸಮಾಜದ ಅಧ್ಯಕ್ಷ ಹಸ್ತಿಮಲ್‌ ಚೌಧರಿ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ