ಆ್ಯಪ್ನಗರ

ಮೌಢ್ಯ ಅಳಿಸುವಲ್ಲಿ ಶ್ರಮಿಸಿದ ದಾಸಿಮಯ್ಯ

ಶಿರಸಿ : ಸಮಾಜದ ಮೌಢ್ಯಗಳನ್ನು ಅಳಿಸುವಲ್ಲಿ ಶ್ರಮ ವಹಿಸಿದ್ದ ದೇವರ ದಾಸಿಮಯ್ಯ ಅವರು ಸಮಾಜದಲ್ಲಿ ಸಜ್ಜನಿಕೆಯ, ಸೌಮ್ಯ ಭಾವನೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎಂದು ತಹಸೀಲ್ದಾರ ಎಂ.ಆರ್‌ ಕುಲಕರ್ಣಿ ಹೇಳಿದರು.

Vijaya Karnataka 11 Apr 2019, 5:00 am
ಶಿರಸಿ : ಸಮಾಜದ ಮೌಢ್ಯಗಳನ್ನು ಅಳಿಸುವಲ್ಲಿ ಶ್ರಮ ವಹಿಸಿದ್ದ ದೇವರ ದಾಸಿಮಯ್ಯ ಅವರು ಸಮಾಜದಲ್ಲಿ ಸಜ್ಜನಿಕೆಯ, ಸೌಮ್ಯ ಭಾವನೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು ಎಂದು ತಹಸೀಲ್ದಾರ ಎಂ.ಆರ್‌ ಕುಲಕರ್ಣಿ ಹೇಳಿದರು.
Vijaya Karnataka Web dasimayya who worked hard to eradicate silence
ಮೌಢ್ಯ ಅಳಿಸುವಲ್ಲಿ ಶ್ರಮಿಸಿದ ದಾಸಿಮಯ್ಯ


ತಾಲೂಕು ಆಡಳಿತದಿಂದ ಇಲ್ಲಿಯ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ದೇವರ ದಾಸಿಮಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸೀರೆ ನೇಯುವ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಶ್ರೀ ದೇವರ ದಾಸೀಮಯ್ಯ ಸಮಾಜದಲ್ಲಿ ರಾಮನಾಥ ನಾಮಾಂಕಿತರಾಗಿ ದೇವ ಬ್ರಾಹ್ಮಣರಿಗೆ ಕುಲ ಗುರುಗಳಾಗಿಯೂ ಪ್ರಸಿದ್ಧಿ ಪಡೆದಿದ್ದರು. ಭಕ್ತಿ ಸಾಧನೆಯಲ್ಲಿ ತೊಡಗಿಕೊಂಡು ಮಾನವನ ಸಹಜ ಮನೋಭಾವ ಆಸ್ತಿ ಗಳಿಕೆಯಿಂದ ಅವರು ದೂರ ಉಳಿದಿದ್ದರು. ಜೀವನದುದ್ದಕ್ಕೂ ದೇವರ ಸ್ಮರಣೆಯಲ್ಲಿ ತೊಡಗಿಕೊಂಡಿದ್ದರು ಎಂದರು.

ಲೋಕಸಭಾ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರಸಿದ್ಧ ಶರಣರ ಜೀವನ ಮೌಲ್ಯಗಳನ್ನು ಜನತೆಗೆ ಸುಲಭವಾಗಿ ದೊರಕುವಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ ಎಂದರು. ಪ್ರಮುಖರಾದ ವಸಂತ ಭಂಡಾರಿ, ಕಂದಾಯ ಇಲಾಖೆ ಸಿಬ್ಬಂದಿ ಬಿ.ಎಲ್‌ ದಾಸರ್‌ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ