ಆ್ಯಪ್ನಗರ

ಅರಣ್ಯ ರಕ್ಷಣೆಗೆ ಹಗಲಿರುಳು ಶ್ರಮ

ಹಳಿಯಾಳ : ಪಶ್ಚಿಮಘಟ್ಟ ಅರಣ್ಯ ಪ್ರದೇಶವು ಅತ್ಯಮೂಲ್ಯ ಅರಣ್ಯ ಸಂಪತ್ತು ಹಾಗೂ ಸೂಕ್ಷ ್ಮ ಜೀವಿ ವೈವಿಧ್ಯತೆಯ ತಾಣವಾಗಿದೆ. ಈ ಪಶ್ಚಿಮಘಟ್ಟದ ಭಾಗವಾಗಿರುವ ಹಳಿಯಾಳ ವಿಭಾಗದ ಅರಣ್ಯ ಪ್ರದೇಶದಲ್ಲಿ ಜೀವ ವೈವಿಧ್ಯತೆಯು ಅಪಾರ ಪ್ರಮಾಣದಲ್ಲಿದೆ. ವಿಭಾಗವು 1.9 ಲಕ್ಷ ಹೆಕ್ಟೇರ್‌ ಅಂದರೆ 2.65 ಲಕ್ಷ ಎಕರೆಗಳಷ್ಟು ಪ್ರದೇಶ ಹೊಂದಿದ್ದು, ಲಕ್ಷಾಂತರ ಕೋಟಿ ರೂ. ಬೆಲೆ ಬಾಳುವ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಸಂಪತ್ತಿನ ಸಂರಕ್ಷ ಣೆಯ ಜತೆಗೆ ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆಯು ಹಗಲಿರುಳು ಬೆವರು ಹರಿಸುತ್ತಿದ್ದು, ಹಲವಾರು ಕ್ರಮಗಳನ್ನು ಕೈಗೊಂಡಿದೆ.

Vijaya Karnataka 16 Mar 2019, 5:00 am
ಹಳಿಯಾಳ : ಪಶ್ಚಿಮಘಟ್ಟ ಅರಣ್ಯ ಪ್ರದೇಶವು ಅತ್ಯಮೂಲ್ಯ ಅರಣ್ಯ ಸಂಪತ್ತು ಹಾಗೂ ಸೂಕ್ಷ ್ಮ ಜೀವಿ ವೈವಿಧ್ಯತೆಯ ತಾಣವಾಗಿದೆ. ಈ ಪಶ್ಚಿಮಘಟ್ಟದ ಭಾಗವಾಗಿರುವ ಹಳಿಯಾಳ ವಿಭಾಗದ ಅರಣ್ಯ ಪ್ರದೇಶದಲ್ಲಿ ಜೀವ ವೈವಿಧ್ಯತೆಯು ಅಪಾರ ಪ್ರಮಾಣದಲ್ಲಿದೆ. ವಿಭಾಗವು 1.9 ಲಕ್ಷ ಹೆಕ್ಟೇರ್‌ ಅಂದರೆ 2.65 ಲಕ್ಷ ಎಕರೆಗಳಷ್ಟು ಪ್ರದೇಶ ಹೊಂದಿದ್ದು, ಲಕ್ಷಾಂತರ ಕೋಟಿ ರೂ. ಬೆಲೆ ಬಾಳುವ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಸಂಪತ್ತಿನ ಸಂರಕ್ಷ ಣೆಯ ಜತೆಗೆ ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಅರಣ್ಯ ಇಲಾಖೆಯು ಹಗಲಿರುಳು ಬೆವರು ಹರಿಸುತ್ತಿದ್ದು, ಹಲವಾರು ಕ್ರಮಗಳನ್ನು ಕೈಗೊಂಡಿದೆ.
Vijaya Karnataka Web KWR-15 HLY 1 FOREST FIRE


ಅಮೂಲ್ಯ ಸಸ್ಯ ಸಂಪತ್ತು : ತೇಗ, ಬೀಟೆ, ಹೊನ್ನೆ, ನಂದಿ ಮುಂತಾದ ಅಪರೂಪದ ಹಾಗೂ ಇನ್ನಿತರ ಸಸ್ಯ ಪ್ರಭೇದಗಳು, ಔಷಧೀಯ ಸಸ್ಯಗಳನ್ನು ಒಳಗೊಂಡ ಬೆಲೆ ಕಟ್ಟಲಾಗದಂತಹ ಅರಣ್ಯ ಸಂಪನ್ಮೂಲಗಳು ಹಳಿಯಾಳ ಸುತ್ತಮುತ್ತಲಿನ ಅರಣ್ಯದಲ್ಲಿವೆ. ಹುಲಿ, ಕರಿಚಿರತೆ, ಆನೆ, ಕಾಡುಕೋಣ, ಜಿಂಕೆ, ನವಿಲು, ಹಾರ್ನಬಿಲ್‌, ಕಾಡು ಹಂದಿ, ಚಿಪ್ಪು ಹಂದಿ ಸೇರಿದಂತೆ ಇನ್ನಿತರ ವಿವಿಧ ವನ್ಯಜೀವಿ ಸಂಕುಲಗಳು ಇಲ್ಲಿದ್ದು, ಕಾಡಿಗೆ ಬೆಂಕಿ ಬಿದ್ದರೆ ಇವುಗಳ ಸಂತತಿ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಮನಗಂಡು ಅರಣ್ಯಕ್ಕೆ ಬೆಂಕಿ ಬೀಳದಂತೆ ಹಲವಾರು ಮುನ್ನೆಚ್ಚರಿಕೆಯ ಮತ್ತು ಸೂಕ್ತವಾದ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ.

ಬೆಂಕಿ ರೇಖೆ ನಿರ್ಮಾಣ : ಅರಣ್ಯಕ್ಕೆ ಬೆಂಕಿ ಬಿದ್ದರೆ ಅರಣ್ಯ ಸಂಪತ್ತು ಸುಟ್ಟು ಭಸ್ಮವಾಗುವುದರ ಜತೆಗೆ ಕೋಟ್ಯಂತರ ರೂ. ಹಾನಿಯು ಸಂಭವಿಸುತ್ತದೆ. ಅದಕ್ಕಾಗಿ ಅರಣ್ಯ ಇಲಾಖೆ ಹಳಿಯಾಳ ವಿಭಾಗದವರು ಮುನ್ನೆಚ್ಚರಿಕೆಯ ಕ್ರಮವಾಗಿ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿಯೇ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಿದ್ದಾರೆ. ಹಳಿಯಾಳ ವಿಭಾಗದ ಅಧಿಕಾರಿಗಳು ಗ್ರಾಮ ಅರಣ್ಯ ಸಮಿತಿಗಳ ಸದಸ್ಯರೊಂದಿಗೆ ಸಮಾಲೋಚನೆಗಳನ್ನು ನಡೆಸಿ, ಬೆಂಕಿಯಿಂದ ಅರಣ್ಯವನ್ನು ಕಾಪಾಡುವ ಪ್ರಕ್ರಿಯೆಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ. ಅರಣ್ಯ ರಕ್ಷ ಣೆಯಲ್ಲಿ ಅವರ ಜವಾಬ್ದಾರಿಗಳನ್ನು ತಿಳಿಸಿ, ಅರಿವು ಮೂಡಿಸುತ್ತಿದ್ದಾರೆ.

ಜಾಥಾ, ಕಿರು ಮತ್ತು ಬೀದಿ ನಾಟಕಗಳ ಪ್ರದರ್ಶನ ಜತೆಗೆ ಬೆಂಕಿ ಬಿದ್ದಾಗ ಅದನ್ನು ಆರಿಸುವ ಬಗೆಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಲಾಗಿದ್ದು, ಅರಣ್ಯದಂಚಿನ ಗ್ರಾಮವಾಸಿಗಳ ಮನೆ ಮನೆಗೆ ತೆರಳಿ ಅರಣ್ಯದಲ್ಲಿ ಬೆಂಕಿ ಬೀಳದಂತೆ ನಿಗಾ ವಹಿಸಲು ಸೂಚನೆ ನೀಡುವುದರ ಜೊತೆಗೆ ಮನವಿ ಮಾಡಲಾಗಿದೆ.

ದೇವರ ಹೆಸರಿನಲ್ಲಿ ಪ್ರಮಾಣ ವಚನ : ಸಾಮಾಜಿಕ ಹೊಣೆಗಾರಿಕೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಲು ರಚಿಸಿದ ಗ್ರಾಮ ಅರಣ್ಯ ಸಮಿತಿ(ವಿಎಫ್‌ಸಿ) ಪಾತ್ರವು ಅರಣ್ಯ ಸಂಪನ್ಮೂಲಗಳ ಸಂರಕ್ಷ ಣೆಯಲ್ಲಿ ಹಿರಿದಾಗಿದೆ. ಕಳೆದ 5 ವರ್ಷಗಳಿಂದ ವಿಎಫ್‌ಸಿ ಹಾಗೂ ಸಾರ್ವಜನಿಕರ ಸಹಕಾರದಿಂದ ಕಾಡಿಗೆ ಬೆಂಕಿ ಬೀಳುವುದನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಇದನ್ನು ಮುಂದುವರೆಸಲು ಅರಣ್ಯ ಇಲಾಖೆಯು ವಿಭಾಗದಲ್ಲಿರುವ 108 ವಿಎಫ್‌ಸಿಗಳ ಸಾವಿರಾರು ಸದಸ್ಯರಿಗೆ ದೇವರ ಹೆಸರಿನಲ್ಲಿ ಪ್ರಮಾಣವಚನ ಭೋದಿಸಿದ್ದು, ಇದರಲ್ಲಿ ಕೆಲ ವಿಎಫ್‌ಸಿಗಳು ವಿಶೇಷ ಪೂಜೆ ಮಾಡುವ ಮೂಲಕ ಕಾಡಿಗೆ ಬೆಂಕಿ ಬೀಳದಂತೆ ದೇವರ ಮೊರೆ ಹೋಗಿದ್ದಾರೆ.


ಅರಣ್ಯದಲ್ಲಿ 'ಶೂನ್ಯ ಬೆಂಕಿ' : ಹಳಿಯಾಳ ವಿಭಾಗದ ಅರಣ್ಯದಲ್ಲಿ ಬೆಂಕಿ ಬೀಳದಂತೆ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸುವ ಮೂಲಕ ಅರಣ್ಯದಲ್ಲಿ 'ಶೂನ್ಯ ಬೆಂಕಿ' ಎಂಬ ವಿಚಾರವನ್ನು ಪಾಲಿಸಲು ಮುಂದಾಗಿದೆ. ಇದಕ್ಕಾಗಿ ಎತ್ತರದ ಪ್ರದೇಶಗಳಲ್ಲಿ ವಾಚ್‌ ಟಾವರ್‌ಗಳನ್ನು ನಿರ್ಮಿಸಿ ಇಲಾಖೆಯ ನುರಿತ ಸಿಬ್ಬಂದಿಯನ್ನು ನೇಮಿಸಿ ದಿನದ 24 ತಾಸು ಬೆಂಕಿ ಬೀಳದಂತೆ ನಿಗಾ ವಹಿಸಲು ಕ್ರಮ ಜರುಗಿಸಲಾಗಿದೆ. ಅಲ್ಲದೇ ಬೆಂಕಿ ಕಾಣಿಸಿಕೊಂಡಾಗ ತಕ್ಷ ಣ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿ ನಂದಿಸುವ ಕಾರ್ಯದಲ್ಲಿ ನಿರತರಾಗುವಂತೆ ಮಾಡಲು ನೂರಾರು ಸಿಬ್ಬಂದಿ ನೇಮಕ ಮಾಡಲಾಗಿದ್ದು, ಎಲ್ಲ ವಲಯಗಳ ಅರಣ್ಯಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ 'ಶೂನ್ಯ ಬೆಂಕಿ'ಗಾಗಿ ಹಗಲಿರುಳು ಶ್ರಮಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ