ಆ್ಯಪ್ನಗರ

'ಗೆದ್ದವರಿಗೆ ಬಹುಮಾನ, ಸೋತವರ ಬಗ್ಗೆ ಹೈಕಮಾಂಡ್ ಗಮನ': ಮಂತ್ರಿಗಿರಿ ಪಕ್ಕಾ ಅಂದ್ರು ಅಶ್ವಥ್ ನಾರಾಯಣ

‘ಉಪ ಚುನಾವಣೆಯ ಬಳಿಕ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರು. ಈಗ ಅವರೇ ರಾಜೀನಾಮೆ ಕೊಡುವಂತಾಗಿದೆ’ - ಸಿದ್ದರಾಮಯ್ಯಗೆ ಕುಟುಕಿದ ಡಿಸಿಎಂ ಅಶ್ವತ್ಥನಾರಾಯಣ

Vijaya Karnataka Web 10 Dec 2019, 7:40 pm
ಕಾರವಾರ (ಉತ್ತರ ಕನ್ನಡ): ಉಪ ಚುನಾವಣೆಯಲ್ಲಿ ಜಯಶಾಲಿಯಾದ ಎಲ್ಲ 'ಅರ್ಹ' ಶಾಸಕರಿಗೂ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಮಂಗಳವಾರ ಇಲ್ಲಿನ ಮೆಡಿಕಲ್‌ ಕಾಲೇಜು ಮತ್ತು ಸರಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗೆದ್ದ ಎಲ್ಲ ಅಭ್ಯರ್ಥಿಗಳಿಗೂ ಸೂಕ್ತ ಬಹುಮಾನವಿದೆ ಎನ್ನುವ ಮೂಲಕ ಮಂತ್ರಿ ಸ್ಥಾನವನ್ನು ಖಚಿತಪಡಿಸಿದರು. ಸೋತ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್‌ ಆದೇಶದಂತೆ ಮುಂದಿನ ಹೆಜ್ಜೆ ಇಡಲಾಗುತ್ತದೆ’ ಎಂದರು.
Vijaya Karnataka Web ಗೆದ್ದವರಿಗೆ ಬಹುಮಾನ, ಸೋತವರ ಬಗ್ಗೆ ಹೈಕಮಾಂಡ್ ಗಮನ: ಮಂತ್ರಿಗಿರಿ ಪಕ್ಕಾ ಅಂದ್ರು ಅಶ್ವಥ್ ನಾರಾಯಣ


‘ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ 15 ಕ್ಷೇತ್ರಗಳನ್ನೂ ಗೆಲ್ಲುವ ವಿಶ್ವಾಸವಿತ್ತು. ಇದೀಗ 12 ಗೆದ್ದಿರುವುದು ಸಂತಸ ತಂದಿದೆ. ಮತದಾರರು ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ಪಷ್ಟವಾಗಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ರಾಜೀನಾಮೆ ಸ್ವಾಗತಾರ್ಹ: ‘ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕತ್ವಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ ಗುಂಡೂರಾವ್‌ ಅವರು ರಾಜೀನಾಮೆ ನೀಡಿರುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಉತ್ತಮ ನಡೆಯಾಗಿದೆ’ ಎಂದು ಅಶ್ವತ್ಥನಾರಾಯಣ ಹೇಳಿದ್ಧಾರೆ.

'ವಿಶ್ವನಾಥ್, ಎಂಟಿಬಿಗೆ ಅನ್ಯಾಯವಾಗಿದೆ! ಗೆದ್ದವರು, ಸೋತವರೆಲ್ಲ ಸಭೆ ಮಾಡ್ತೀವಿ': ರಮೇಶ್ ಜಾರಕಿಹೊಳಿ

‘ಉಪ ಚುನಾವಣೆಯ ಬಳಿಕ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದರು. ಈಗ ಅವರೇ ರಾಜೀನಾಮೆ ಕೊಡುವಂತಾಗಿದೆ’ ಎಂದು ಅಶ್ವತ್ಥನಾರಾಯಣ ಕುಟುಕಿದರು.

'ಬುರುಡೆ ಸಿದ್ದರಾಮಯ್ಯ ತೆಗೆದು ಹಾಕಲು ಕಾಂಗ್ರೆಸ್ ಮೀಟಿಂಗ್': ಸರ್ಕಾರ ಸುಭದ್ರ ಅಂದ್ರು ಅಶೋಕ್

ಗಡಿ ವಿವಾದ ರಾಜಕೀಯ ಪ್ರೇರಿತ: ಮಹಾರಾಷ್ಟ್ರದ ಕೆಲ ಮುಖಂಡರು ಕರ್ನಾಟಕದ ಹಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ವತ್ಥ ನಾರಾಯಣ, ‘ಈ ರೀತಿಯ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ಇಂಥ ಬಾಲಿಶ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

'ಜಾತಿ ಒಡೆದ ಸಿದ್ದರಾಮಯ್ಯರಿಂದ ಕನಕದಾಸರಿಗೆ ಅವಮಾನ, ಈಗ ಫ್ರೀ ಹೌಸ್‌ ಅರೆಸ್ಟ್‌': ಸೊಗಡು ಶಿವಣ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ