ಆ್ಯಪ್ನಗರ

ಸಿದ್ದಿ ಯುವಕರ ಮೃತದೇಹ ಪತ್ತೆ

ಹಳಿಯಾಳ:ತಟ್ಟಿಹಳ್ಳ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಸಿದ್ದಿ ಯುವಕರ ಮೃತದೇಹ ಬುಧವಾರ ರಾತ್ರಿ ಪತ್ತೆಯಾಗಿದೆ.

Vijaya Karnataka 1 Aug 2019, 5:00 am
ಹಳಿಯಾಳ:ತಟ್ಟಿಹಳ್ಳ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಸಿದ್ದಿ ಯುವಕರ ಮೃತದೇಹ ಬುಧವಾರ ರಾತ್ರಿ ಪತ್ತೆಯಾಗಿದೆ.
Vijaya Karnataka Web dead body of siddhi youth found
ಸಿದ್ದಿ ಯುವಕರ ಮೃತದೇಹ ಪತ್ತೆ


ಭಾಗವತಿ ಗ್ರಾಮದ ಖಾದರಲಿ ಹಸನಸಾಬ ಜಾಂಗಳೆ (30) ಹಾಗೂ ತತ್ವಣಗಿ ಗ್ರಾಮದ ದಾವುದಸಾಬ ಹಸನಸಾಬ ಮುಜಾವರ (25) ಮೃತರು. ಇಬ್ಬರು ಸ್ನೇಹಿತರು ತಟ್ಟಿಹಳ್ಳ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಸೋಮವಾರ ತೆಪ್ಪದ ಸಹಾಯದಿಂದ ಮೀನು ಹಿಡಿಯಲು ಹೋಗಿದ್ದರು. ಇದನ್ನು ಗಮನಿಸಿದ್ದ ಕೆಲವರು ಇವರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ. ಜನರ ಎಚ್ಚರಿಕೆಯನ್ನು ಲಘುವಾಗಿ ಪರಿಗಣಿಸಿದ ಯುವಕರು ಅಂತಿಮವಾಗಿ ನೀರು ಪಾಲಾಗಿದ್ದರು. ತಾಲೂಕು ಆಡಳಿತದ ನಿರ್ದೇಶನದಲ್ಲಿ ಪೊಲೀಸ್‌ ಮತ್ತು ಅಗ್ನಿ ಶಾಮಕ ದಳದವರು ಸೋಮವಾರ ಸಂಜೆಯಿಂದ ಶೋಧ ಕಾರ್ಯ ನಡೆಸಿದ್ದರು. ಬುಧವಾರ ಬೆಳಗ್ಗೆಯಿಂದ ಸ್ಥಳೀಯ ಮುಳುಗು ತಜ್ಞರು ಹಾಗೂ ಮೀನುಗಾರರು ಹುಡುಕಾಟ ನಡೆಸಿ ರಾತ್ರಿ ಮೃತದೇಹಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.ಮೃತದೇಹಗಳನ್ನು ದಡಕ್ಕೆ ತಂದಾಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ