ಆ್ಯಪ್ನಗರ

ಕಾರವಾರ: ತಾಯಿ-ಮಗಳು-ಮೊಮ್ಮಗನ ಶವ ನದಿಯಲ್ಲಿ ಪತ್ತೆ, ನಾಮಕರಣದ ದಿನದಂದೇ 11 ತಿಂಗಳ ಮಗುವಿನ ದುರ್ಮರಣ!

ತಾಯಿ, ಮಗಳು ಹಾಗೂ ಮೊಮ್ಮಗ ಶುಕ್ರವಾರ(20) ಮನೆಯಿಂದ ಯಲ್ಲಾಪುರಕ್ಕೆ ಹೋಗಿ ಬರುತ್ತೇವೆ ಎಂದು ಹೊರಟವರು ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಟ ನಡೆಸಿ ಬಳಿಕ ದೂರು ನೀಡಲು ಪೊಲೀಸ್‌ ಠಾಣೆಗೆ ತೆರಳಿದ್ದಾರೆ. ಈ ವೇಳೆ ಯಲ್ಲಾಪುರ ಬಳಿಯ ನದಿಯಲ್ಲಿ ಈ ಮೂವರ ಮೃತದೇಹ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

Vijaya Karnataka Web 23 Nov 2020, 8:07 am
ಕಾರವಾರ: ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಶವಗಳು ಹಿತ್ಲಳ್ಳಿ ಸಮೀಪದ ಶಾಲ್ಮಲಾ ನದಿಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಹಿತ್ಲಳ್ಳಿ ಸಮೀಪದ ಕಲಕೊಡ್ಲಿನ ರಾಜೇಶ್ವರಿ ನಾರಾಯಣ ಹೆಗಡೆ (55), ಇವರ ಮಗಳು ವಾಣಿ ಪ್ರಕಾಶ ವೈ. (28) ಹಾಗೂ ಇವರ ಹನ್ನೊಂದು ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ.
Vijaya Karnataka Web Crime
File photo for representation purpose only


ಈ ಮೂವರೂ ಶುಕ್ರವಾರ(20) ಮನೆಯಿಂದ ಯಲ್ಲಾಪುರಕ್ಕೆ ಹೋಗಿ ಬರುತ್ತೇವೆ ಎಂದು ಹೊರಟವರು ನಾಪತ್ತೆಯಾಗಿದ್ದರು. ಆದರೆ ಒಂದು ದಿನವಾದರು ಮನೆಗೆ ಬಾರದ ಹಿನ್ನೆಲೆ ಮನೆಯವರು ಎಲ್ಲಾ ಕಡೆ ಹುಡಕಾಟ ಆರಂಭಿಸಿದರು. ಕುಟುಂಬದವರ ಮನೆಗೆ ತೆರಳಿ ವಿಚಾರಿಸಿದರು. ಆದರೆ ಅವರ ಬಗ್ಗೆ ಸುಳಿವು ಪತ್ತೆಯಾಗಿರಲಿಲ್ಲ.

ಈ ಹಿನ್ನೆಲೆ ಈ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಭಾನುವಾರ ಯಲ್ಲಾಪುರ ಪೊಲೀಸ್‌ ಠಾಣೆಗೆ ತೆರಳಿದ್ದಾರೆ. ಇದೇ ವೇಳೆಗೆ ಹಿತ್ಲಳ್ಳಿ ಸಮೀಪದ ಶಾಲ್ಮಲಾದಲ್ಲಿ ಮೃತದೇಹ ಪತ್ತೆಯಾಗಿದೆ. ಇನ್ನು ಶವವನ್ನು ಮನೆಯವರು ಗುರುತಿಸಿದ ಹಿನ್ನೆಲೆ ಮರಣೋತ್ತರ ಪರೀಕ್ಷಗೆ ಶವವನ್ನು ಕೊಂಡೊಯ್ಯಲಾಯ್ತು.

ಭೂ ಹಕ್ಕಿಗಾಗಿ ಬೃಹತ್‌ ಜಾಥಾ ನಾಳೆ

ಹೆಸರಿಡುವ ಮುಂಚೆ ಮಗು ಸಾವು
ವಾಣಿಯವರ ಗಂಡನ ಮನೆ ಶಿವಮೊಗ್ಗದಲ್ಲಿದೆ. ಅವರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಭಾನುವಾರ ನಿಗದಿ ಮಾಡಲಾಗಿತ್ತು. ಆದರೆ ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತುಹೋಗಿದೆ. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಯೋ, ಕೊಲೆಯೋ ಎಂಬ ಕುರಿತು ತನಿಖೆ ಆರಂಭವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ