ಆ್ಯಪ್ನಗರ

ಹೊಂಡದಲ್ಲಿಕಾಲು ಜಾರಿ ಬಿದ್ದು ಸಾವು

ಮುಂಡಗೋಡ : ನೀರಿನ ಹೊಂಡದಲ್ಲಿಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಮರಗಡಿ ಗ್ರಾಮದಲ್ಲಿಬುಧವಾರ ನಡೆದಿದೆ.

Vijaya Karnataka 26 Dec 2019, 5:00 am
ಮುಂಡಗೋಡ : ನೀರಿನ ಹೊಂಡದಲ್ಲಿಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ಮುಳುಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಮರಗಡಿ ಗ್ರಾಮದಲ್ಲಿಬುಧವಾರ ನಡೆದಿದೆ.
Vijaya Karnataka Web death in slippery slump
ಹೊಂಡದಲ್ಲಿಕಾಲು ಜಾರಿ ಬಿದ್ದು ಸಾವು


ಕಾತೂರ ಗ್ರಾಮದ ಮಂಜುನಾಥ ಈರಣ್ಣಾ ಕಮ್ಮಾರ (19) ಸಾವಿಗೀಡಾದ ವ್ಯಕ್ತಿ. ಈತ ಜೆಸಿಬಿ ಯಂತ್ರದಲ್ಲಿ ಕ್ಲೀನರ್‌ ಕೆಲಸ ಮಾಡುತ್ತಿದ್ದನು. ಬುಧವಾರ ಕಾತೂರಿನಿಂದ ಮರಗಡಿಗೆ ಹೋಗಿ ರೈತರೊಬ್ಬರ ಜಮೀನಿನಲ್ಲಿಜೆಸಿಬಿ ಯಂತ್ರದ ಕೆಲಸದಲ್ಲಿನಿರತನಾಗಿದ್ದನು. ಮಧ್ಯಾಹ್ನ ಸ್ನಾನ ಮಾಡುವುದಾಗಿ ಜಮೀನು ಮಾಲಿಕನಿಗೆ ತಿಳಿಸಿ ಅಲ್ಲಿಯೇ ಪಕ್ಕದಲ್ಲಿರುವ ನೀರಿನ ಹೊಂಡಕ್ಕೆ ಹೋಗಿದ್ದಾನೆ. ನೀರಿನಲ್ಲಿರುವ ಕಲ್ಲಿನ ಮೇಲೆ ನಿಂತು ಸ್ನಾನ ಮಾಡುತ್ತಿರುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿಮುಳುಗಿ ಸಾವನ್ನಪ್ಪಿದ್ದಾನೆಂದು ಹೇಳಲಾಗಿದೆ.

ತುಂಬಾ ಸಮಯ ಕಳೇದರೂ ಬಾರದೇ ಇದ್ದಾಗ ಜಮೀನಿನಲ್ಲಿದ್ದವರು ನೋಡಲು ಹೋಗಿದ್ದಾರೆ. ನೀರಿನ ಹೊಂಡದ ಮೇಲೆ ಬಟ್ಟೆ ಇದ್ದು ಆತ ಅಲ್ಲಿಕಾಣದೇ ಇದ್ದಾಗ ಹುಡುಕಾಡಿದ್ದಾರೆ. ಕೂಗಾಡಿದ್ದಾರೆ. ಅಕ್ಕ ಪಕ್ಕದವರೆಲ್ಲಾಸೇರಿ ಗಾಬರಿಗೊಂಡು ಪೊಲೀಸರಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಪಿಎಸ್‌ಐ ಪ್ರೇಮಾನಂದ ಪಾಟೀಲ ಅವರು ಸ್ಥಳಕ್ಕೆ ಹೋಗಿ ನೀರಿನಲ್ಲಿಶೋಧ ಮಾಡಿಸಿ ಶವವನ್ನು ಹೊರತೆಗೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ