ಆ್ಯಪ್ನಗರ

ಅಪಘಾತದಲ್ಲಿಮದುಮಗ ಸಾವು

ಯಲ್ಲಾಪುರ (ಉತ್ತರ ಕನ್ನಡ) : ಕಾರು ಹಾಗೂ ಟ್ಯಾಂಕರ್‌ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿಮದುಮಗ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಲ್ಲಿನ ಕೆ.ಮಿಲನ್‌ ಹೋಟೆಲ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿಭಾನುವಾರ ನಡೆದಿದೆ.

Vijaya Karnataka 18 Nov 2019, 5:00 am
ಯಲ್ಲಾಪುರ (ಉತ್ತರ ಕನ್ನಡ) : ಕಾರು ಹಾಗೂ ಟ್ಯಾಂಕರ್‌ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿಮದುಮಗ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಲ್ಲಿನ ಕೆ.ಮಿಲನ್‌ ಹೋಟೆಲ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 63ರಲ್ಲಿಭಾನುವಾರ ನಡೆದಿದೆ.
Vijaya Karnataka Web death of a son in an accident
ಅಪಘಾತದಲ್ಲಿಮದುಮಗ ಸಾವು


ಅಫೊ್ರೕಜ್‌ ಇಕ್ಬಾಲ್‌ ಶೇಖ ದಾಂಡೇಲಿ(27) ಎಂಬುವರೇ ಮೃತರು. ಇವರು ತಮ್ಮ ಮದುವೆಗೆಂದು ದಿಬ್ಬಣದ ಜೊತೆಗೆ ಕಾರಿನಲ್ಲಿಹಾನಗಲ್‌ ಕಡೆ ಹೋಗುತ್ತಿದ್ದ ಸಂದರ್ಭ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇವರ ಜೊತೆಗೆ ಪ್ರಯಾಣಿಸುತ್ತಿದ್ದ ಕಿರಣಕುಮಾರ್‌ ಯಲ್ಲಪ್ಪಾ ಹಂಸಿಗೇರಿ, ರುಬೀನ ಸಾದಿಕ್‌ ಶೇಖ್‌, ಅಪ್ಸಾನಾ ಇಮ್ತಿಯಾಜ್‌ ಶೇಖ್‌ ಮತ್ತು ಅರ್ಮಾನ್‌ ಇಮ್ತಿಯಾಜ್‌ ಶೇಖ್‌ ಗಾಯಗೊಂಡಿದ್ದಾರೆ. ಘಟನೆಯಲ್ಲಿಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಸಿಪಿಐ ಡಾ.ಮಂಜುನಾಥ ನಾಯಕ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹೆದ್ದಾರಿಯಲ್ಲಿವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಕುರಿತು ಯಲ್ಲಾಪುರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ