ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ
ಭಟ್ಕಳ : ಕರ್ನಾಟಕ ಪ್ರೌಢ ಶಿಕ್ಷ ಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸಿದ 2018ರ ಚಿತ್ರಕಲಾ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಭಟ್ಕಳದ ಝೇಂಕಾರ ಚಿತ್ರಕಲಾ ಶಾಲೆಯ ವಿದ್ಯಾರ್ಥಿ ಶಶಾಂಕ ಗಣೇಶ ಹೆಬ್ಬಾರ 539 (90%) ಅಂಕಗಳೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ.
Vijaya Karnataka 4 Aug 2019, 5:00 am
ಭಟ್ಕಳ : ಕರ್ನಾಟಕ ಪ್ರೌಢ ಶಿಕ್ಷ ಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸಿದ 2018ರ ಚಿತ್ರಕಲಾ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಭಟ್ಕಳದ ಝೇಂಕಾರ ಚಿತ್ರಕಲಾ ಶಾಲೆಯ ವಿದ್ಯಾರ್ಥಿ ಶಶಾಂಕ ಗಣೇಶ ಹೆಬ್ಬಾರ 539 (90%) ಅಂಕಗಳೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾನೆ.
ಈ ಪರೀಕ್ಷೆಗೆ ರಾಜ್ಯದ ವಿವಿಧೆಡೆಯಿಂದ 36112 ವಿದ್ಯಾರ್ಥಿಗಳು ಹಾಜರಾಗಿದ್ದರು. ಲೋವರ್ ಗ್ರೇಡ್ ವಿಭಾಗದಲ್ಲಿ ದರ್ಶನ ವೆಂಕಟೇಶ ನಾಯ್ಕ 507 (85%) ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ರಾರಯಂಕ ಗಳಿಸಿದ್ದಾನೆ. ಅಲ್ಲದೇ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮೀರಜ್ ಇವರು ನಡೆಸಿದ ಈ ಬಾರಿಯ ಭರತನಾಟ್ಯ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಝೇಂಕಾರ ಸಂಸ್ಥೆಗೆ 100% ಫಲಿತಾಂಶ ಬಂದಿದೆ. ಪ್ರಾರಂಭಿಕ ಪರೀಕ್ಷೆಯಲ್ಲಿ ನವ್ಯ ಸುನೀಲ ಕುಮಾರ ಕಣ್ಣನ 84%, ಪ್ರಾವೇಶಿಕ ಪ್ರಥಮ ಪರೀಕ್ಷೆಯಲ್ಲಿ ಚೇತನಾ ವಸಂತ ವೈದ್ಯ 93%, ಪ್ರಾವೇಶಿಕ ಪೂರ್ಣ ಪರೀಕ್ಷೆಯಲ್ಲಿ ಮಾನ್ಯ ಸತೀಶ ನಾಯ್ಕ 94%, ಪ್ರತೀಕ್ಷಾ ಪ್ರದೀಪ ದೇವಾಡಿಗ 92%, ಪೂಜಾ ದೀಪಕ ಕಾಮತ 90%, ಮಧ್ಯಮ ಪ್ರಥಮ ಪರೀಕ್ಷೆಯಲ್ಲಿ ವಿಶ್ರುತಾ ವೆಂಕಟ್ರಮಣ ಭಂಡಾರ್ಕರ 160 ಅಂಕಗಳ ಮೂಲಕ ಉನ್ನತ ಶ್ರೇಣಿ, ಮಧ್ಯಮ ಪೂರ್ಣ ಪರೀಕ್ಷೆಯಲ್ಲಿ ರಚನಾ ಕರ್ಕಿ 80% ಅಂಕ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷ ಕ ಸಂಜಯ ಗುಡಿಗಾರ, ಭರತನಾಟ್ಯ ಶಿಕ್ಷ ಕಿ ನೃತ್ಯವಿದೂಷಿ ನಯನಾ ಪ್ರಸನ್ನ ಇವರಿಗೆ ಝೇಂಕಾರ ಸಂಸ್ಥೆ ಅಧ್ಯಕ್ಷ ಪ್ರಸನ್ನ ಪ್ರಭು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಪರೀಕ್ಷೆಗೆ ರಾಜ್ಯದ ವಿವಿಧೆಡೆಯಿಂದ 36112 ವಿದ್ಯಾರ್ಥಿಗಳು ಹಾಜರಾಗಿದ್ದರು. ಲೋವರ್ ಗ್ರೇಡ್ ವಿಭಾಗದಲ್ಲಿ ದರ್ಶನ ವೆಂಕಟೇಶ ನಾಯ್ಕ 507 (85%) ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ರಾರಯಂಕ ಗಳಿಸಿದ್ದಾನೆ. ಅಲ್ಲದೇ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮೀರಜ್ ಇವರು ನಡೆಸಿದ ಈ ಬಾರಿಯ ಭರತನಾಟ್ಯ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಝೇಂಕಾರ ಸಂಸ್ಥೆಗೆ 100% ಫಲಿತಾಂಶ ಬಂದಿದೆ. ಪ್ರಾರಂಭಿಕ ಪರೀಕ್ಷೆಯಲ್ಲಿ ನವ್ಯ ಸುನೀಲ ಕುಮಾರ ಕಣ್ಣನ 84%, ಪ್ರಾವೇಶಿಕ ಪ್ರಥಮ ಪರೀಕ್ಷೆಯಲ್ಲಿ ಚೇತನಾ ವಸಂತ ವೈದ್ಯ 93%, ಪ್ರಾವೇಶಿಕ ಪೂರ್ಣ ಪರೀಕ್ಷೆಯಲ್ಲಿ ಮಾನ್ಯ ಸತೀಶ ನಾಯ್ಕ 94%, ಪ್ರತೀಕ್ಷಾ ಪ್ರದೀಪ ದೇವಾಡಿಗ 92%, ಪೂಜಾ ದೀಪಕ ಕಾಮತ 90%, ಮಧ್ಯಮ ಪ್ರಥಮ ಪರೀಕ್ಷೆಯಲ್ಲಿ ವಿಶ್ರುತಾ ವೆಂಕಟ್ರಮಣ ಭಂಡಾರ್ಕರ 160 ಅಂಕಗಳ ಮೂಲಕ ಉನ್ನತ ಶ್ರೇಣಿ, ಮಧ್ಯಮ ಪೂರ್ಣ ಪರೀಕ್ಷೆಯಲ್ಲಿ ರಚನಾ ಕರ್ಕಿ 80% ಅಂಕ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ಚಿತ್ರಕಲಾ ಶಿಕ್ಷ ಕ ಸಂಜಯ ಗುಡಿಗಾರ, ಭರತನಾಟ್ಯ ಶಿಕ್ಷ ಕಿ ನೃತ್ಯವಿದೂಷಿ ನಯನಾ ಪ್ರಸನ್ನ ಇವರಿಗೆ ಝೇಂಕಾರ ಸಂಸ್ಥೆ ಅಧ್ಯಕ್ಷ ಪ್ರಸನ್ನ ಪ್ರಭು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.