ಆ್ಯಪ್ನಗರ

ಬಾಕಿ ಅನುದಾನ ಶೀಘ್ರ ಬಿಡುಗಡೆಗೆ ಆಗ್ರಹ

ಶಿರಸಿ : ಕಳೆದ ವರ್ಷ ಅತಿವೃಷ್ಟಿಯ ಕಾರಣದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಬಾಕಿ ಉಳಿದ ಪರಿಹಾರ ನೆರವು ವರ್ಷವಾದರೂ ಬಿಡುಗಡೆ ಯಾಗಿಲ್ಲ. ಸರಕಾರದ ನಿರ್ಲಕ್ಷ ಭಾವನೆಯಿಂದ ಮನೆ ಇಲ್ಲದ ಸಂತ್ರದ್ತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ನಿರಾಶ್ರಿತರಿಗೆ ಅತೀ ಶೀಘ್ರದಲ್ಲಿಬಾಕಿ ಉಳಿದಿರುವ ಮನೆ ನಿರ್ಮಾಣದ ಅನುದಾನ ಬಿಡುಗಡೆಮಾಡುವಂತೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಮುಖ್ಯಮಂತ್ರಿಯನ್ನು ಅಗ್ರಹಿಸಿದ್ದಾರೆ.

Vijaya Karnataka 3 Jul 2020, 5:00 am
ಶಿರಸಿ : ಕಳೆದ ವರ್ಷ ಅತಿವೃಷ್ಟಿಯ ಕಾರಣದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿ ಬಾಕಿ ಉಳಿದ ಪರಿಹಾರ ನೆರವು ವರ್ಷವಾದರೂ ಬಿಡುಗಡೆ ಯಾಗಿಲ್ಲ. ಸರಕಾರದ ನಿರ್ಲಕ್ಷ ಭಾವನೆಯಿಂದ ಮನೆ ಇಲ್ಲದ ಸಂತ್ರದ್ತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ನಿರಾಶ್ರಿತರಿಗೆ ಅತೀ ಶೀಘ್ರದಲ್ಲಿಬಾಕಿ ಉಳಿದಿರುವ ಮನೆ ನಿರ್ಮಾಣದ ಅನುದಾನ ಬಿಡುಗಡೆಮಾಡುವಂತೆ ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಮುಖ್ಯಮಂತ್ರಿಯನ್ನು ಅಗ್ರಹಿಸಿದ್ದಾರೆ.
Vijaya Karnataka Web demand for the quick release of pending grants
ಬಾಕಿ ಅನುದಾನ ಶೀಘ್ರ ಬಿಡುಗಡೆಗೆ ಆಗ್ರಹ


ಕಳೆದ ವರ್ಷದ ಮುಂಗಾರು ಮಳೆಯಲ್ಲಿಮನೆ ಬಿದ್ದುಹೋದ ನಿರಾಶ್ರಿತರ ಕುಟುಂಬಗಳಿಗೆ ಭೇಟಿಕೊಟ್ಟು ಅವರು ಮಾತನಾಡಿದರು.

ಪ್ರವಾಹದಿಂದ ಹಾನಿಗೀಡಾದ ಎ ಮತ್ತು ಬಿ ವರ್ಗದ ಮನೆಗಳ ಪುನರ್‌ನಿರ್ಮಾಣಕ್ಕೆ ರಾಜ್ಯ ಸರಕಾರ ಐದು ಲಕ್ಷ ನೆರವು ಘೋಷಿಸಿ, ಅದರಲ್ಲಿಒಂದು ಲಕ್ಷ ರೂ. ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿತ್ತು. ಉಳಿದ ನಾಲ್ಕು ಲಕ್ಷ ರೂ. ಅನುದಾನ ನಿರ್ಮಾಣವಾಗುತ್ತಿರುವ ಮನೆಯ ಹಂತವಾರು ಜಿಪಿಎಸ್‌ ಚಾರಿತ್ರತ್ರ್ಯಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಹೀಗಾಗಿ ಕೂಡಲೇ ಮನೆ ನಿರ್ಮಾಣ ಪ್ರಾರಂಭಿ ಪೂರ್ಣಗೋಳಿಸಬೇಕು ಎಂದು ಸ್ವತಃ ಮುಖ್ಯಮಂತ್ರಿ ಸಹಿವುಳ್ಳ ಪತ್ರವನ್ನು ಸಂತ್ರಸ್ತರಿಗೆ ಕಳೆದ ವರ್ಷದ ಡಿಸೆಂಬರ್‌ 13ರಂದು ನೀಡಲಾಗಿತ್ತು. ಆದರೆ ಸಂತ್ರಸ್ತರು 1 ಲಕ್ಷದ ರೂ.ವೆಚ್ಚದಲ್ಲಿಪ್ರಥಮ ಹಂತದ ಮನೆ ಕಾಮಗಾರಿ ಮುಗಿಸಿದರೂ ಉಳಿದ ಹಣ ಸರಕಾರದಿಂದ ಪಾವತಿ ಆಗದೇ ಜಿಲ್ಲಾದ್ಯಂತ ನಿರಾಶ್ರಿತರ ಕುಟುಂಬಗಳು ಪ್ರಸಕ್ತ ವರ್ಷದ ಮಳೆಗಾಲದಲ್ಲಿಜೋಪಡಿ ಮನೆಯಲ್ಲಿಉಳಿದುಕೊಳ್ಳುವ ಪ್ರಸಂಗ ಬಂದಿದೆ ಎಂದು ಅವರು ದೂರಿದ್ದಾರೆ.

ಅಡಕೆ ಕೊಳೆಗೆ ಪರಿಹಾರ ನೀಡಿ... ಕಳೆದ ವರ್ಷದ ಅತೀವೃಷ್ಟಿಯಿಂದ ಅಡಿಕೆ ಕ್ಷೇತ್ರ ಜಿಲ್ಲೆಯಲ್ಲಿ31,124 ಹೆಕ್ಟರ್‌ ತೋಟದಲ್ಲಿ18,946 ಹೆಕ್ಟರ್‌ ತೋಟ ಕೊಳೆರೋಗ ಬಂದು 313.29 ಕೋಟಿ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯಿಂದ ಸರಕಾರಕ್ಕೆ ವರದಿ ಸಲ್ಲಿಸಿದ್ದರೂ, ಇಲ್ಲಿಯವರೆಗೂ ಪರಿಹಾರ ರೈತರಿಗೆ ಸಿಗದಿರುವುದು ಖಂಡನಾರ್ಹ. ತಕ್ಷಣ ಸರಕಾರ ಈ ದಿಶೆಯಲ್ಲಿಗಂಭೀರವಾಗಿ ಚಿಂತನೆ ಮಾಡಬೇಕು ಎಂದು ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.

ದೊಡ್ನಳ್ಳಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಇಬ್ರಾಹಿಂ ನಬಿಸಾಬ ಸೈಯದ್‌, ಅತಿಕ್ರಮಣ ಹೋರಾಟ ಸಮಿತಿಯ ಸಂಚಾಲಕ ತಿಮ್ಮ ಮರಾಠಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ