ಆ್ಯಪ್ನಗರ

ಮಕ್ಕಳಲ್ಲಿಸ್ಪರ್ಧಾತ್ಮಕ ಮನೋಭಾವ ಬೆಳೆಸಿ

ಶಿರಸಿ : ಬಾಲ್ಯದಿಂದಲೇ ಸಾಂಸ್ಕೃತಿ ಹಾಗೂ ಸಾಹಿತ್ಯಿಕವಾಗಿ ಉತ್ತೇಜನ ನೀಡುವುದು ಪ್ರತಿಭಾ ಕಾರಂಜಿ ಉದ್ದೇಶ ಎಂದು ಜಿಪಂ ಸದಸ್ಯ ಜಿ.ಎನ್‌.ಹೆಗಡೆ ಮುರೇಗಾರ ಹೇಳಿದರು.

Vijaya Karnataka 21 Sep 2019, 5:00 am
ಶಿರಸಿ : ಬಾಲ್ಯದಿಂದಲೇ ಸಾಂಸ್ಕೃತಿ ಹಾಗೂ ಸಾಹಿತ್ಯಿಕವಾಗಿ ಉತ್ತೇಜನ ನೀಡುವುದು ಪ್ರತಿಭಾ ಕಾರಂಜಿ ಉದ್ದೇಶ ಎಂದು ಜಿಪಂ ಸದಸ್ಯ ಜಿ.ಎನ್‌.ಹೆಗಡೆ ಮುರೇಗಾರ ಹೇಳಿದರು.
Vijaya Karnataka Web develop a positive attitude towards children
ಮಕ್ಕಳಲ್ಲಿಸ್ಪರ್ಧಾತ್ಮಕ ಮನೋಭಾವ ಬೆಳೆಸಿ


ನೇಗಾರ್‌ ಹಿರಿಯ ಪ್ರಾಥಮಿಕ ಶಾಲೆ ನೇತೃತ್ವದಲ್ಲಿನಡೆದ ಸಾಲ್ಕಣಿ ಕ್ಲಸ್ಟರ್‌ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಹೊರತರಲು ಪ್ರತಿಭಾ ಕಾರಂಜಿ ಅವಕಾಶ ಕಲ್ಪಿಸುತ್ತದೆ. ವಿದ್ಯಾರ್ಥಿಗಳಲ್ಲಿವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ ರೂಪಿಸಲು ಪೋ್ರತ್ಸಾಹಿಸುತ್ತದೆ ಎಂದರು.

ಶಿಕ್ಷಣ ಇಲಾಖೆಯ ಈಶ್ವರ ನಾಯ್ಕ, ಸಂಯೋಜಕ ಮಂಜುನಾಥ ನಾಯ್ಕ, ಬಿಆರ್‌ಸಿ ಎಂ.ಎಸ್‌.ನಾಯ್ಕ, ಪಿ.ಕೆ.ನಾಯ್ಕ, ಡಿ.ಪಿ.ಹೆಗಡೆ, ಮಹಾದೇವ ಸಾಂಬಾಜಿ, ನರಸಿಂಹ ಹರಿಕಂತ್ರ, ಸಾಲಕಣಿ ಗ್ರಾಪಂ ಅಧ್ಯಕ್ಷೆ ಅನಸೂಯಾ ಹೆಗಡೆ ಉಪಸ್ಥಿತರಿದ್ದರು.

ನಾಗರತ್ನಮ್ಮ ಸ್ವಾಗತಿಸಿದರು. ಶಿಕ್ಷಕಿ ಗೀತಾಂಜಲಿ ಭಟ್ಟ ನಿರೂಪಿಸಿದರು. ಮುಖ್ಯಶಿಕ್ಷಕ ಎಸ್‌.ಕೆ.ನಾಯ್ಕ ವಂದಿಸಿದರು. ಶಿಕ್ಷಕಿ ಪೂರ್ಣಿಮಾ ಹೆಗಡೆ ಸಹಕರಿಸಿದರು. ಡೊಳ್ಳುಕುಣಿತ ಹಾಗೂ ಯಕ್ಷಗಾನ ವೇಷಧಾರಿ, ಭಾರತ ಮಾತೆ ರೂಪಕದ ಮೆರವಣಿಗೆ ನಡೆಸಲಾಯಿತು.

ವಿದ್ಯಾರ್ಥಿಗಳು ವಿವಿಧ ಭಾಷೆಗಳ ಕಂಠಪಾಠ ಸ್ಪರ್ಧೆ, ಧಾರ್ಮಿಕ ಶ್ಲೋಕ (ಸಂಸ್ಕೃತ ಮತ್ತು ಅರೇಬಿಕ್‌), ಸುಗಮ ಸಂಗೀತ, ಫ್ಯಾನ್ಸಿ ಉಡುಗೆ, ಚಿತ್ರಕಲೆ, ಕಥೆಯನ್ನು ಹೇಳುವುದು, ಮಣ್ಣಿನ ಆಕೃತಿ ಮಾಡುವುದು, ಯೋಗಾಸನ, ಜಾನಪದ ನೃತ್ಯ, ದೇಶಭಕ್ತಿ ಗೀತೆಗಳು, ಕೋಲಾಟ, ರಸಪ್ರಶ್ನೆ ಸ್ಪರ್ಧೆಯಲ್ಲಿಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ