ಆ್ಯಪ್ನಗರ

ಕ್ರಿಯಾಶೀಲ ಸಂಘ ಸಂಸ್ಥೆಗಳಿಂದ ಊರಿನ ಅಭಿವೃದ್ಧಿ

ಹೊನ್ನಾವರ: ಸಮಾಜ ಸೇವಾ ಕಾರ್ಯಕ್ರಮಗಳಲ್ಲಿಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದ್ದು, ಕ್ರಿಯಾಶೀಲ ಸಂಘ ಸಂಸ್ಥೆಗಳಿಂದ ಊರಿನ ಅಭಿವೃದ್ಧಿ ಸಾಧ್ಯ ಎಂದು ಪಿಸಿಎಆರ್‌ಡಿ ಬ್ಯಾಂಕ್‌ ಅಧ್ಯಕ್ಷ ಪಿ.ಟಿ.ನಾಯ್ಕ ಹೇಳಿದರು.

Vijaya Karnataka 10 Sep 2019, 5:00 am
ಹೊನ್ನಾವರ: ಸಮಾಜ ಸೇವಾ ಕಾರ್ಯಕ್ರಮಗಳಲ್ಲಿಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದ್ದು, ಕ್ರಿಯಾಶೀಲ ಸಂಘ ಸಂಸ್ಥೆಗಳಿಂದ ಊರಿನ ಅಭಿವೃದ್ಧಿ ಸಾಧ್ಯ ಎಂದು ಪಿಸಿಎಆರ್‌ಡಿ ಬ್ಯಾಂಕ್‌ ಅಧ್ಯಕ್ಷ ಪಿ.ಟಿ.ನಾಯ್ಕ ಹೇಳಿದರು.
Vijaya Karnataka Web development of the village by active association organizations
ಕ್ರಿಯಾಶೀಲ ಸಂಘ ಸಂಸ್ಥೆಗಳಿಂದ ಊರಿನ ಅಭಿವೃದ್ಧಿ


ತಾಲೂಕಿನ ಮೂಡ್ಕಣಿಯಲ್ಲಿಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀ ಶಂಭುಲಿಂಗೇಶ್ವರ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಜಂಟಿ ಆಶ್ರಯದಲ್ಲಿನಡೆದ 32ನೇ ವರ್ಷದ ಗಣೇಶೋತ್ಸವ ಸಭಾ ಕಾರ‍್ಯಕ್ರಮದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಊರಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ಹೊಂದಬೇಕು ಎಂದರು.

ಪ್ರಶಾಂತ ಹೆಗಡೆ ಮೂಡಲಮನೆ ಮಾತನಾಡಿ, ಒಂದು ಸಂಘಟನೆ ಯಶಸ್ವಿಯಾಗಿ ಸಾಗಬೇಕಾದರೆ ಸಂಘಟಕರ ಪಾತ್ರ ಅತಿ ಮುಖ್ಯ. ಎಲ್ಲಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಕ್ರಿಯಾಶೀಲವಾಗಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಪ್ರತಿಭಾ ಪುರಸ್ಕಾರ ಇನ್ನಿತರ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಸಂಘಟನೆ ಇದಾಗಿದೆ ಎಂದರು.

2019ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಪಡೆದ ಕವಿತಾ ಗಣಪಯ್ಯ ಗೌಡ ಹಾಗೂ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದ ರಮ್ಯಾ ಮಂಜುನಾಥ ನಾಯ್ಕ ಹಾಗೂ ಕಳೆದ 21 ವರ್ಷಗಳಿಂದ ಅಡ್ಕಾರ ಶಾಲೆಯಲ್ಲಿಸೇವೆ ಸಲ್ಲಿಸಿದ ವಿದ್ಯಾ ಎಂ. ಹೆಗಡೆ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿಟಿ.ಟಿ.ನಾಯ್ಕ, ರಾಜು ನಾಯ್ಕ, ಕಮಲಾಕರ ಅಂಭಿಗ, ಜಿ.ಟಿ.ನಾಯ್ಕ, ಎಮ್‌.ಟಿ.ಹೆಗಡೆ. ಪಿ.ಎಮ್‌.ನಾಯ್ಕ, ಶಿವರಾಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ವಾಲಿಬಾಲ್‌, ಗುಂಡು ಎಸೆತ, ಹಗ್ಗ ಜಗ್ಗಾಟ, ಥ್ರೋಬಾಲ್‌, ಭಕ್ತಿ ಗೀತೆ ಸ್ಪರ್ಧೆಗಳಲ್ಲಿವಿಜೇತ ಯುವಕ ಯುವತಿಯರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಸಮಿತಿಯ ಅಧ್ಯಕ್ಷ ಉದಯ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ದೀಲಿಪ ನಾಯ್ಕ ಸ್ವಾಗತಿಸಿದರು, ವಿನಾಯಕ ನಾಯ್ಕ ವಂದಿಸಿದರು. ಮಾದೇವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ