ಆ್ಯಪ್ನಗರ

ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಕಾರಾರ‍ಯಗಾರ

ಹಳಿಯಾಳ : ಇಲ್ಲಿಯ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿಪೊ್ಲೕಮಾ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಧಾರವಾಡದ ಕೆ.ಎಚ್‌.ಕಬ್ಬೂರ ಪಾಲಿಟೆಕ್ನಿಕ್‌, ಗಂಗಾಧರ ಪಾಲಿಟೆಕ್ನಿಕ್‌, ಜೋಯಿಡಾದ ಸರಕಾರಿ ಪಾಲಿಟೆಕ್ನಿಕ್‌, ಶಿರಸಿಯ ಆರ್‌.ಎನ್‌.ಶೆಟ್ಟಿ ಪಾಲಿಟೆಕ್ನಿಕ್‌, ಹುಬ್ಬಳ್ಳಿಯ ಸರಕಾರಿ ಪಾಲಿಟೆಕ್ನಿಕ್‌ ಹಾಗೂ

Vijaya Karnataka 12 Jan 2019, 5:00 am
ಹಳಿಯಾಳ : ಇಲ್ಲಿಯ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಿಪೊ್ಲೕಮಾ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಧಾರವಾಡದ ಕೆ.ಎಚ್‌.ಕಬ್ಬೂರ ಪಾಲಿಟೆಕ್ನಿಕ್‌, ಗಂಗಾಧರ ಪಾಲಿಟೆಕ್ನಿಕ್‌, ಜೋಯಿಡಾದ ಸರಕಾರಿ ಪಾಲಿಟೆಕ್ನಿಕ್‌, ಶಿರಸಿಯ ಆರ್‌.ಎನ್‌.ಶೆಟ್ಟಿ ಪಾಲಿಟೆಕ್ನಿಕ್‌, ಹುಬ್ಬಳ್ಳಿಯ ಸರಕಾರಿ ಪಾಲಿಟೆಕ್ನಿಕ್‌ ಹಾಗೂ ತಾರಿಹಾಳ ಹುಬ್ಬಳ್ಳಿಯ ಎಸ್‌ಜಿಇಇಎಸ್‌ ಗ್ರಾಮೀಣ ಪಾಲಿಟೆಕ್ನಿಕ್‌ ಕಾಲೇಜುಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Vijaya Karnataka Web diploma holders for students
ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಕಾರಾರ‍ಯಗಾರ


ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ವಿಭಾಗದ ಶಿಕ್ಷ ಕ ಸಿಬ್ಬಂದಿ ಡಿಪೊ್ಲೕಮಾ ವಿದ್ಯಾರ್ಥಿಗಳಿಗೆ ಅಡ್ರ್ಯುನೋ ಪ್ರೋಗ್ರಾಮಿಂಗ್‌ ಮತ್ತು ವೆರಿಲಾಗ್‌-ಎಚ್‌ಡಿಎಲ್‌ ವಿಷಯಗಳ ಮೇಲೆ ತರಬೇತಿ ನೀಡಿದರು. 10 ದಿನಗಳವರೆಗೆ ಸತತವಾಗಿ ನಡೆದ ಕಾರ್ಯಾಗಾರದಲ್ಲಿ ಅಡ್ರ್ಯುನೋ ಪ್ರೋಗ್ರಾಮಿಂಗ್‌ ಮತ್ತು ವೆರಿಲಾಗ್‌- ಎಚ್‌ಡಿಎಲ್‌ ವಿಷಯದ ಕುರಿತು ರೋಹಿನಿ ಕೆ., ಸುಮಾ ಎಚ್‌., ನಿಖಿಲ್‌ ಕೆ., ವಿನಯ ಸಿ., ರಾಘವೇಂದ್ರ ಎನ್‌., ರಾಹುಲ ಎಂ., ದೀಪಕ ಎಸ್‌., ಮಂಜುನಾಥ ಎಂ. ಹಾಗೂ ಕಾರ್ತಿಕ ಕೆ. ಅವರು ಮಾಹಿತಿ ನೀಡಿದರು.

ಪ್ರಾಂಶುಪಾಲರಾದ ಡಾ.ವಿ.ವಿ.ಕಟ್ಟಿ ಅವರು ಮಾತನಾಡಿ, ಇಂದಿನ ಆಧುನಿಕ ಹಾಗೂ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನದ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಿಕೊಳ್ಳುವುದರ ಜತೆಗೆ ಪ್ರತಿ ದಿನ ಬದಲಾಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಪಡೆಯುವುದು ಅಗತ್ಯವಾಗಿದೆ. ಕಾರ್ಯಾಗಾರದ ಎಲ್ಲ ವಿಷಯಗಳನ್ನು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಅದನ್ನು ಸಮಾಜದ ಉನ್ನತಿ ಮತ್ತು ಶೈಕ್ಷ ಣಿಕ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಮನವಿ ಮಾಡಿದರು. ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ವಿಭಾಗದ ಮುಖ್ಯಸ್ಥ ಪ್ರೊ.ರವೀಂದ್ರ ಎಂ. ಅವರು ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿವರಿಸಿದರು.

ಎಂಜಿನಿಯರಿಂಗ್‌ ಸೆಮಿಸ್ಟರನ ವಿಶ್ರಾಂತಿ ಸಮಯದಲ್ಲಿ ಎಲ್ಲ ಡಿಪೊ್ಲೕಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಮತ್ತು ವಸತಿ ಸೇವೆಯನ್ನು ಒದಗಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ