ಆ್ಯಪ್ನಗರ

ತಾಯ್ನೆಲದ ಸೇವೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಹೇಳಿಕೆ

ಶಿರಸಿ : ಕಳೆದ 70ವರ್ಷ ಆಡಳಿತ ನಡೆಸಿದ್ದ ಆಳರಸರು ದೇಶದ ಪೌರುಷದ ಇತಿಹಾಸವನ್ನು ಕಿತ್ತೆಸೆದು ದೇಶದ ಸಾಮರ್ಥ್ಯ‌ವನ್ನೇ ಗೌಣವಾಗಿಸಿದ್ದರು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.

Vijaya Karnataka 27 Feb 2019, 5:00 am
ಶಿರಸಿ : ಕಳೆದ 70ವರ್ಷ ಆಡಳಿತ ನಡೆಸಿದ್ದ ಆಳರಸರು ದೇಶದ ಪೌರುಷದ ಇತಿಹಾಸವನ್ನು ಕಿತ್ತೆಸೆದು ದೇಶದ ಸಾಮರ್ಥ್ಯ‌ವನ್ನೇ ಗೌಣವಾಗಿಸಿದ್ದರು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವಾಗ್ದಾಳಿ ನಡೆಸಿದರು.
Vijaya Karnataka Web SRS-26SRS12


ನಗರದ ಅರಣ್ಯ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ತಾಯ್ನೆಲದ ಸೇವೆಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿಯಂಥವರು ಮಹಾಪುರುಷರಾಗಿಲ್ಲ. ಆದರೆ ಅಕ್ಬರ್‌, ಔರಂಗಜೇಬ್‌, ಲಾರ್ಡ್‌ ಕರ್ಜನ್‌ ಅವರನ್ನು ಹಿರೋ ಎಂಬಂತೆ ಬಿಂಬಿಸಲಾಯಿತು. ಜಗತ್ತಿನಲ್ಲಿ ಭಾರತೀಯ ಸೇನೆ ತೋರಿದ ಸಾಹಸ, ಎರಡನೇ ಮಹಾ ಯುದ್ದದಲ್ಲಿ ತೋರಿದ ಸಾಮರ್ಥ್ಯ‌ ನಾವು ಎತ್ತಿ ಹೇಳಲೇ ಇಲ್ಲ. ಇಸ್ರೆಲ್‌ನಂತಹ ದೇಶವೇ ನಮ್ಮ ಸೈನ್ಯವನ್ನು ಹೊಗಳುತ್ತದೆ. ಆದರೆ, ಕಳೆದ ಎಪ್ಪತ್ತು ವರ್ಷದಲ್ಲಿ ನಾವು ನಮ್ಮ ಶಕ್ತಿ ಹೇಳಲೇ ಇಲ್ಲ. ದೇಶಕ್ಕೆ, ಭಾರತೀಯರಿಗೆ ಸ್ವಾಭಿಮಾನ ತೋರಲೇ ಇಲ್ಲ. ಆದರೆ, ಮೋದಿ ಹೊಸ ಬೆಳಕಿನ ಶಕ್ತಿ ತೋರಿದರು ಎಂದರು.

70 ವರ್ಷದ ಹಿಂದೆ ಕೊಟ್ಟ ಸೋಗಲಾಡಿತನದ ಇಂಜಕ್ಷ ನ್‌ ಅಮಲು ಇನ್ನೂ ನಮಗೆ ಇಳಿದಿಲ್ಲ. ಈ ಕಾರಣದಿಂದ ರಾಜಕಾರಣ ಎಂದರೆ ಏನು ಎಂಬುದು ಸ್ಪಷ್ಟ ಆಗಿಲ್ಲ. ಓಟು ಕೊಡ್ತೆವೆ ಕೆಲಸ ಮಾಡಬೇಕು ಎಂಬುದಷ್ಟೇ ಗೊತ್ತು. ರಾಜಕಾರಣ ಎಂದರೆ ಕೊಡುಗೆ ಕೊಡೋದು. ರಾಜಕೀಯ ತಂತ್ರಗಾರಿಕೆ ಬಿಟ್ಟು ದೇಶಕ್ಕೆ ನಾಯಕತ್ವ ಕೊಡುವುದು. ರಾಜಕಾರಣ ಹೇಗಿರಬೇಕು ಎಂಬುದು ಮೋದಿ ತೋರಿಸಿದ್ದಾರೆ ಎಂದರು.

ಅನಂತಕುಮಾರ ಹೆಗಡೆ ಆ್ಯಪ್‌ ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ಅನಂತ ಚಿನಿವಾರ, ಇಂಥ ಆ್ಯಪ್‌ಗಳಲ್ಲಿ ಬರುವ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಆಗಬೇಕು. ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ಸಿದ್ಧವಾಗಬೇಕು ಎಂದರು.

ಪ್ರಮುಖರಾದ ವಿನೋದ ಪ್ರಭು, ಕೃಷ್ಣ ಎಸಳೆ, ಚಂದ್ರು ದೇವಡಿಗ, ಗಣಪತಿ ನಾಯ್ಕ, ಆರ್‌.ವಿ.ಹೆಗಡೆ ಚಿಪಗಿ, ಎಸ್‌. ವಿ.ವೆಂಕಟೇಶ ಉಪಸ್ಥಿತರಿದ್ದರು.

ರೇಖಾ ಹೆಗಡೆ ವಂದೇ ಮಾತರಂ ಹಾಡಿದರು. ಚಂದ್ರಕಲಾ ಭಟ್ಟ ನಿರೂಪಿಸಿದರು. ಇದೇ ವೇಳೆ ವಿಕಾಸ ಪಥ ಕರ ಪತ್ರ ಬಿಡುಗಡೆಗೊಳಿಸಲಾಯಿತು.

ಸಮಾಜ ತೋರಿದ ದಾರಿಯಲ್ಲಿ... : ಎಷ್ಟೋ ಮನೆಯ ಕೈ ತುತ್ತು ತನ್ನನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಅದು ತೀರಿಸಲಾಗದ ಋುಣ. ಸಮಾಜ ಯಾವ ದಿಕ್ಕು ತೋರಿಸಿತ್ತೋ ಆ ದಿಕ್ಕಿನಲ್ಲಿ ಸಾಗಿದ್ದೇನೆ. ಜನ ನನ್ನನ್ನು ನೋಡಿ ಓಟು ಕೊಟ್ಟಿಲ್ಲ. ಕಾರ್ಯಕರ್ತರ ಪರಿಶ್ರಮದ ಪರಿಣಾಮ ಓಟು ಕೊಟ್ಟಿದ್ದಾರೆ ಎಂದು ಸಂಸದ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ತೆರಿಗೆ ತುಂಬುವವರ ಸಂಖ್ಯೆ ದುಪ್ಪಟ್ಟು... : ದೇಶ ಕಟ್ಟುವ ಕೆಲಸಕ್ಕೆ ಇಡೀ ದೇಶದ ಜನ ಒಂದಾಗಿದ್ದಾರೆ. ಗ್ಯಾಸ್‌ ಸಬ್ಸಿಡಿ ತಮಗೆ ಬೇಡ ದೇಶದ ಅಭಿವೃದ್ಧಿಗೆ ಬಳಸಿ ಎಂದು 3.5ಕೋಟಿ ಮಂದಿ ಇದನ್ನು ತೆಗೆದುಕೊಳ್ಳುತ್ತಿಲ್ಲ. ಜಿಎಸ್‌ಟಿ ಜಾರಿಯಾಗುವ ಮೊದಲು 2 ಕಾಲು ಕೋಟಿ ಮಂದಿ ತೆರಿಗೆ ತುಂಬುತ್ತಿದ್ದರು. ಆದರೆ ಈಗ ತೆರಿಗೆ ತುಂಬುವವರ ಸಂಖ್ಯೆ ದುಪ್ಪಟ್ಟು ಹೆಚ್ಚಳವಾಗಿದೆ ಎಂದು ಸಚಿವ ಅನಂತಕುಮಾರ ಹೆಗಡೆ ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ