ಆ್ಯಪ್ನಗರ

ಬದುಕಿನ ಬಂಡಿ ಸಾಗಲು ಅಡ್ಡಿ

ಅಂಕೋಲಾ : ತಾಲೂಕಿನ ಆಟೋ ರಿಕ್ಷಾ ಚಾಲಕರ ಸ್ಥಿತಿ ಆಟುಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮೀತಿ ಮೀರಿದ ಎಲ್‌ಪಿಜಿ ದರ ಏರಿಕೆ, ಪ್ರಯಾಣಿಕರ ಕೊರತೆಯಿಂದ ಆಟೋದವರ ಸ್ಥಿತಿ ಆಯೋಮಯವಾಗಿ ಬದುಕಿನ ಬಂಡಿ ಸಾಗಲು ಅಡೆತಡೆಯಾಗುತ್ತಿದೆ.

Vijaya Karnataka 18 Oct 2018, 5:00 am
ಅಂಕೋಲಾ : ತಾಲೂಕಿನ ಆಟೋ ರಿಕ್ಷಾ ಚಾಲಕರ ಸ್ಥಿತಿ ಆಟುಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮೀತಿ ಮೀರಿದ ಎಲ್‌ಪಿಜಿ ದರ ಏರಿಕೆ, ಪ್ರಯಾಣಿಕರ ಕೊರತೆಯಿಂದ ಆಟೋದವರ ಸ್ಥಿತಿ ಆಯೋಮಯವಾಗಿ ಬದುಕಿನ ಬಂಡಿ ಸಾಗಲು ಅಡೆತಡೆಯಾಗುತ್ತಿದೆ.
Vijaya Karnataka Web disruption of the cars life
ಬದುಕಿನ ಬಂಡಿ ಸಾಗಲು ಅಡ್ಡಿ


ಅಂಕೋಲಾದ ಪಟ್ಟಣ ಭಾಗದಲ್ಲಿ 500 ಕ್ಕೂ ಹೆಚ್ಚು ಆಟೋಗಳಿವೆ. ಬುಹುತೇಕ ಅಟೋಗಳೀಗ ಮಾಲಿನ್ಯ ರಹಿತವಾಗುವ ಮೂಲಕ ಪರಿಸರಕ್ಕೆ ಕೊಡುಗೆ ನೀಡುತ್ತಿದೆ. ಆದರೆ ಪೆಟ್ರೋಲ್‌ ಹಾಗೂ ಎಲ್‌ಪಿಜಿ ದರ ಏರಿಕೆ ಆಟೋದವರ ಕೈ ಸುಡುವಂತಾಗಿದೆ.

ಏರಿದ ಇಂಧನದ ದರ :

ಪೆಟ್ರೋಲ್‌ 84 ದರ ಹಾಗೆ ಎಲ್‌ಪಿಜಿ ದರ 51.42 ರೂ. ಕೆಜಿ ಗೆ ದರ ಇದೆ. ಆದರೆ ಅಂಕೋಲಾದಲ್ಲಿ ಸ್ಪರ್ಧಾತ್ಮಕತೆ ಪರಿಣಾಮ ಆಟೋದವರು ಪ್ರಯಾಣಿಕರಿಂದ ಪಡೆಯುವ ಬಾಡಿಗೆಯ ಮೇಲೆ ಬಿದ್ದಿದೆ. ಅಂಕೋಲಾದಿಂದ ಬೇಲೆಕೇರಿಗೆ 10 ಕಿಮೀ ಅಂತರವಿದೆ. ಸಾರಿಗೆ ಬಸ್‌ನವರು ಪ್ರಯಾಣಿಕರಿಂದ 10 ರೂ. ಟಿಕೆಟ್‌ ಹಣ ಪಡೆಯುತ್ತಾರೆ. ರಿಕ್ಷಾದವರು ಸಹ ಪ್ರತಿ ಪ್ರಯಾಣಿಕನಿಂದ 10 ರೂ. ಪಡೆಯುತ್ತಾರೆ. ದಿನಕ್ಕೆ ಕನಿಷ್ಟ 3 ಟ್ರಿಪ್‌ ಆಗಲಾರದ ಪರಿಸ್ಥಿತಿ ರಿಕ್ಷಾದವರದ್ದಾಗಿದೆ. ಇದರಲ್ಲಿಯೆ ಇಂಧನ, ವಿಮೆ, ಮೆಂಟೆನನ್ಸ್‌ ಮಾಡುವದು ರಿಕ್ಷಾದವರ ಪಾಲಿಗೆ ಅನಿವಾರ್ಯವಾಗಿದೆ.

7 ವರ್ಷದ ಹಿಂದಿನ ಬಾಡಿಗೆ :

ದಿನದಿಂದ ದಿನಕ್ಕೆ ಇಂಧನದ ದರ ಏರುತ್ತ ಸಾಗುತ್ತಿದೆ. ಆದರೆ ಇಲ್ಲಿನ ರಿಕ್ಷಾದವರು ಮಾತ್ರ 7 ವರ್ಷದ ಹಿಂದಿನ ದರದಲ್ಲಿಯೆ ತಮ್ಮ ಬಾಡಿಗೆಯನ್ನು ಮುಂದುವರಿಸಿದ್ದಾರೆ. ರಿಕ್ಷಾದವರು ಪಡೆಯುವ ಬಾಡಿಗೆಯಿಂದ ಪ್ರಯಾಣಿಕರಿಗೆ ಹೊರೆಯಾಗದಿದ್ದರೂ, ರಿಕ್ಷಾದವರ ಕುಟುಂಬದ ನಿರ್ವಹಣಗೆ ತೊಡಕಾಗಿ ನಿಂತಿದೆ.

ರಿಕ್ಷಾಗಳ ಸಂಖ್ಯೆ ಹೆಚ್ಚಳ :

ಪ್ರಸ್ತುತ ಯುವ ಸಮೂದಾಯ ಸರಳ ಉದ್ಯೋಗವನ್ನು ಅರಸುತ್ತ ಸಾಗುತ್ತಾರೆ. ರಿಕ್ಷಾದ ಉದ್ಯೋಗದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಮಜಿರೆ ಮಜಿರೆಗಳಲ್ಲಿ ರಿಕ್ಷಾ ಖರೀದಿಯು ಹೆಚ್ಚಾಗಿದೆ. ವಿಪರ್ಯಾಸ ಎನೆಂದರೆ ರಿಕ್ಷಾ ತೆಗೆದುಕೊಂಡ ಅದರ ನಿರ್ವಹಣೆಯ ದಾರಿಯ ದುರ್ಗಮತೆ ಅರ್ಥವಾಗಿ ರಿಕ್ಷಾ ಮಾರುತ್ತಲೆ, ಕೈ ಕೈ ಬದಲಾಯಿಸುತ್ತಿರುವ ಸನ್ನಿವೇಶ ಕಾಣಸಿಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ