ಆ್ಯಪ್ನಗರ

ಬಾವಿ ಹೂಳೆತ್ತಲು ಸ್ಥಳಿಯರ ಅಡ್ಡಿ

ಗೋಕರ್ಣ : ಗೋಕರ್ಣದ ಬಿಜ್ಜೂರಿನಲ್ಲಿ ಗ್ರಾಮ ಪಂಚಾಯಿತಿ ನಿರ್ಮಿಸಿದ್ದ ಬಾವಿ ಹೂಳೆತ್ತಲು ಸ್ಥಳಿಯರು ಅಡ್ಡಪಡಿಸಿದ ಘಟನೆ ಮಂಗಳವಾರ ನಡೆದಿದೆ. ಗ್ರಾಮ ಪಂಚಾಯಿತಿ ಬಿಜ್ಜೂರಿನಲ್ಲಿ ಬಾವಿ ನಿರ್ಮಿಸಿ ಕುಡಿಯುವ ನೀರಿನ ತೊಂದರೆ ಇದ್ದ ಗ್ರಾಮಗಳಿಗೆ ಪೂರೈಕೆ ಮಾಡುತಿತ್ತು. ಆದರೆ ಹಲವಾರು ವರ್ಷಗಳಿಂದ ಈ ಬಾವಿಯ ಹೂಳೆತ್ತಲು ಸಾಧ್ಯವಾಗುತ್ತಿರಲಿಲ್ಲ. ಗೋಕರ್ಣದ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಸಿ.ಟಿ.ನಾಯ್ಕ ಅವರು ಹೂಳೆತ್ತುವ ಕೆಲಸ ಆರಂಭಿಸಿದರು. ಕೆಲಸ ಆರಂಭ ಮಾಡಿದ ಎರಡನೇ ದಿನಕ್ಕೆ ಸ್ಥಳಿಯರು ಇಲ್ಲಿಯ ನೀರನ್ನ ಈ ಭಾಗದ ಜನರಿಗೆ ಮಾತ್ರ ಪೂರೈಕೆ ಮಾಡಬೇಕು ಎಂದು ತಕರಾರು ಮಾಡಿದ್ದರು. ಇದನ್ನು ಲೆಕ್ಕಿಸದ ಗ್ರಾ.ಪಂ ಅಧಿಕಾರಿಗಳು ಪೋಲೀಸ್‌ ಸಹಾಯದ ಮೇರೆಗೆ ಮತ್ತೆ ಕೆಲಸ ಆರಂಭಿಸಿದ್ದರು.ಆದರೆ ನಾಲ್ಕನೇ ದಿನಕ್ಕೆ ಜನರೆಲ್ಲ ಸೇರಿ ಮತ್ತೆ ತಕರಾರು ಮಾಡಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

Vijaya Karnataka 3 Apr 2019, 5:00 am
ಗೋಕರ್ಣ : ಗೋಕರ್ಣದ ಬಿಜ್ಜೂರಿನಲ್ಲಿ ಗ್ರಾಮ ಪಂಚಾಯಿತಿ ನಿರ್ಮಿಸಿದ್ದ ಬಾವಿ ಹೂಳೆತ್ತಲು ಸ್ಥಳಿಯರು ಅಡ್ಡಪಡಿಸಿದ ಘಟನೆ ಮಂಗಳವಾರ ನಡೆದಿದೆ. ಗ್ರಾಮ ಪಂಚಾಯಿತಿ ಬಿಜ್ಜೂರಿನಲ್ಲಿ ಬಾವಿ ನಿರ್ಮಿಸಿ ಕುಡಿಯುವ ನೀರಿನ ತೊಂದರೆ ಇದ್ದ ಗ್ರಾಮಗಳಿಗೆ ಪೂರೈಕೆ ಮಾಡುತಿತ್ತು. ಆದರೆ ಹಲವಾರು ವರ್ಷಗಳಿಂದ ಈ ಬಾವಿಯ ಹೂಳೆತ್ತಲು ಸಾಧ್ಯವಾಗುತ್ತಿರಲಿಲ್ಲ. ಗೋಕರ್ಣದ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಸಿ.ಟಿ.ನಾಯ್ಕ ಅವರು ಹೂಳೆತ್ತುವ ಕೆಲಸ ಆರಂಭಿಸಿದರು. ಕೆಲಸ ಆರಂಭ ಮಾಡಿದ ಎರಡನೇ ದಿನಕ್ಕೆ ಸ್ಥಳಿಯರು ಇಲ್ಲಿಯ ನೀರನ್ನ ಈ ಭಾಗದ ಜನರಿಗೆ ಮಾತ್ರ ಪೂರೈಕೆ ಮಾಡಬೇಕು ಎಂದು ತಕರಾರು ಮಾಡಿದ್ದರು. ಇದನ್ನು ಲೆಕ್ಕಿಸದ ಗ್ರಾ.ಪಂ ಅಧಿಕಾರಿಗಳು ಪೋಲೀಸ್‌ ಸಹಾಯದ ಮೇರೆಗೆ ಮತ್ತೆ ಕೆಲಸ ಆರಂಭಿಸಿದ್ದರು.ಆದರೆ ನಾಲ್ಕನೇ ದಿನಕ್ಕೆ ಜನರೆಲ್ಲ ಸೇರಿ ಮತ್ತೆ ತಕರಾರು ಮಾಡಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
Vijaya Karnataka Web KWR-2 GKN 1 C



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ