ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ವಿವಿಧ ಸಂಘ, ಸಂಸ್ಥೆಗಳವರು ಶುಕ್ರವಾರ ಸಹಾಯ ಮಾಡಿದರು...

Vijaya Karnataka 18 Aug 2019, 5:00 am
ವಿತರಣೆ : ಮುಂಡಗೋಡ: ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ವಿವಿಧ ಸಂಘ, ಸಂಸ್ಥೆಗಳವರು ಶುಕ್ರವಾರ ಸಹಾಯ ಮಾಡಿದರು.
Vijaya Karnataka Web distribution of ammunition to neighboring victims
ನೆರೆ ಸಂತ್ರಸ್ತರಿಗೆ ಸಾಮಗ್ರಿ ವಿತರಣೆ


ಸಾಧನಾ ನೆರೆ ಸಂತ್ರಸ್ತರ ಪರಿಹಾರ ತಂಡ, ತಾಲೂಕಾಡಳಿತ, ಲೋಯೋಲ ವಿಕಾಸ ಕೇಂದ್ರ, ಪೊಲೀಸ್‌ ಇಲಾಖೆ, ಹೋಲಿಕ್ರಾಸ್‌ ಸಂಸ್ಥೆಯವರು ಜಂಟಿಯಾಗಿ ತಾಲೂಕಿನ ಕೆಂದಲಗೇರಿ, ಯರೇಬೈಲ್‌, ಉಗ್ನಿಕೇರಿ, ಶಿಡ್ಲಗುಂಡಿ, ಮೈನಳ್ಳಿ ಗ್ರಾಮದ ನೆರೆ ಸಂತ್ರಸ್ತರಿಗೆ ನೆರವು ನೀಡಿದರು.

ಬಟ್ಟೆ, ಆಹಾರ ಸಾಮಗ್ರಿ, ಔಷಧಿ, ದನಕರುಗಳಿಗೆ ಆಹಾರ ಹೀಗೆ ಮುಂತಾದ ವಸ್ತುಗಳನ್ನು ವಿತರಿಸಿದರು. ಸಂಘ ಸಂಸ್ಥೆಯವರ ಸಹಾಯಕ್ಕೆ ಸಂತ್ರಸ್ತರು ಧನ್ಯವಾದ ಸಲ್ಲಿಸಿದರು.

ಈ ವೇಳೆ ಪ್ರಭಾರಿ ಸಿಡಿಪಿಓ ದೀಪಾ ಬಾರಕೇರ, ಹೋಲಿಕ್ರಾಸ್‌ ಸಂಸ್ಥೆಯ ರೀಟಾ, ಸಾಧನಾ ಸಂಸ್ಥೆಯ ಇಸಾಬೆಲ್ಲ, ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ‍್ಯದರ್ಶಿ ಶ್ರೀಧರ ಡೋರಿ, ನ್ಯಾಯಬೆಲೆ ಪಡಿತರ ಅಂಗಡಿಗಳ ಸಂಘದ ತಾಲೂಕಾ ಉಪಾಧ್ಯಕ್ಷ ರಾಧಾಕೃಷ್ಣ ರಾಯ್ಕರ ಸೇರಿದಂತೆ ಮುಂತಾದವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ