ಆ್ಯಪ್ನಗರ

ರಾಮನಗರದಲ್ಲಿ ಸಿಲಿಂಡರ್‌ ವಿತರಣೆ

ಜೋಯಿಡಾ : ರಾಜ್ಯ ಸರಕಾರ ಎಲ್ಲ ಯೋಜನೆಗಳನ್ನು ತಾನು ಮಾಡಿದ್ದು ಎಂದು ಹೇಳಿ ಬೀಗುತ್ತಿದೆ. ಆದರೆ ಉಜ್ವಲಾ, ಮುದ್ರಾ ಇತ್ಯಾದಿ ಅನೇಕ ಯೋಜನೆಗಳು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಎಂದು ಬಡವರಿಗೆ ತಿಳಿದೇ ಇಲ್ಲ. ಆದ್ದರಿಂದಲೇ ಇಂದು ನಾನು ಕೇಂದ್ರ ಸರಕಾರ ಬಡವರಿಗೆ ನೀಡುತ್ತಿರುವ ಈ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡಲು ಬಂದಿದ್ದೇನೆ ಎಂದರು.

Vijaya Karnataka 17 Dec 2018, 5:00 am
ಜೋಯಿಡಾ : ರಾಜ್ಯ ಸರಕಾರ ಎಲ್ಲ ಯೋಜನೆಗಳನ್ನು ತಾನು ಮಾಡಿದ್ದು ಎಂದು ಹೇಳಿ ಬೀಗುತ್ತಿದೆ. ಆದರೆ ಉಜ್ವಲಾ, ಮುದ್ರಾ ಇತ್ಯಾದಿ ಅನೇಕ ಯೋಜನೆಗಳು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಎಂದು ಬಡವರಿಗೆ ತಿಳಿದೇ ಇಲ್ಲ. ಆದ್ದರಿಂದಲೇ ಇಂದು ನಾನು ಕೇಂದ್ರ ಸರಕಾರ ಬಡವರಿಗೆ ನೀಡುತ್ತಿರುವ ಈ ಗ್ಯಾಸ್‌ ಸಿಲಿಂಡರ್‌ ವಿತರಣೆ ಮಾಡಲು ಬಂದಿದ್ದೇನೆ ಎಂದರು.
Vijaya Karnataka Web distribution of cylinders in ramanagar
ರಾಮನಗರದಲ್ಲಿ ಸಿಲಿಂಡರ್‌ ವಿತರಣೆ


ಅವರು ಜೋಯಿಡಾ ತಾಲೂಕಿನ ರಾಮನಗರದ ಸಮುದಾಯ ಭವನದಲಿ ್ಲಉಜ್ವಲಾ ಯೋಜನೆಯ ಸಿಲಿಂಡರ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮನಗರದಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿನ ಹಲವಾರು ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಾಗಿಲ್ಲ, ನೀರಿನಲ್ಲಿ ಕ್ಲೋರೈಡ ಸಮಸ್ಯೆ ಇದೆ. ಅಲ್ಲದೇ ಹಲವಾರು ಜನರಿಗೆ ಕುಡಿಯಲು ನೀರೇ ಇಲ್ಲ, ಇಲ್ಲಿಯ ನೀರು ಸರಬರಾಜು ಅಧಿಕಾರಿ ನೀರಿನ ವ್ಯವಸ್ಥೆ ಸರಿಯಾಗಿ ನೀಡದೇ ಮೋಸ ಮಾಡಿದ್ದಾರೆ, ಕನಿಷ್ಠ ಪಕ್ಷ ನೀರಿನ ವ್ಯವಸ್ಥೆಯಾದರೂ ರಾಮನಗರದ ಜನರಿಗೆ ಸರಿಯಾಗಿ ಇದ್ದರೆ, ಇಲ್ಲಿನ ಜನರು ಹಿತವಾಗಿ ಬದುಕುತ್ತಿದ್ದರು ಎಂದರು.

ಕೇಂದ್ರ ಸರಕಾರದಿಂದ ಅನೇಕ ಯೋಜನೆಗಳು ಬಡವರ ಪರವಾಗಿಯೇ ಇದೆ. ಆಸ್ಪತ್ರೆ, ರೇಷನ್‌, ಬ್ಯಾಂಕ್‌ ಹೀಗೆ ಮುಂತಾದ ಕಡೆಗಳಲ್ಲಿ ಬಡ ಜನರಿಗೆ ಸಹಾಯವಾಗುವ ಹಾಗೆ ಕೇಂದ್ರ ಸರಕಾರ ಕೆಲಸ ಮಾಡಿದೆ.

ಚುನಾವಣೆ ಪೂರ್ವದಲ್ಲಿ ಶಾಸಕರಾದ ದೇಶಪಾಂಡೆಯವರು ಇಲ್ಲಿನ ರಾಮನಗರ ಜನತೆಗೆ ತಾನೂ ಚುನಾವಣೆಯ ನಂತರ ಇಲ್ಲಿ ಕೈಗಾರಿಕಾ ಕಾರ್ಖಾನೆಯನ್ನು ನಿರ್ಮಿಸಿ ಇಲ್ಲಿನ ನಿರುದ್ಯೋಗಿ ಜನರಿಗೆ ಕೆಲಸ ಒದಗಿಸುತ್ತೇನೆ ಎಂದರು. ಚುನಾವಣೆ ಮುಗಿದು ಇಷ್ಟು ದಿನಗಳಾದರೂ ಇವರ ಯಾವುದೇ ಜನಪರ ಭರವಸೆ ಈಡೇರಲೇ ಇಲ್ಲ. ಇಲ್ಲಿನ ಜನರು ಪಕ್ಕದ ಗೋವಾ ರಾಜ್ಯಕ್ಕೆ ಕೆಲಸಕ್ಕೆ ಹೋಗುವ ಹಾಗೆ ಆಗಿದೆ ಎಂದರು.

ಮುಂದಿನ ಚುನಾವಣೆಯ ನಂತರ ನಾನೂ ಗೆದ್ದು ಆ ಭರವಸೆಯನ್ನು ನಾನು ಪೂರ್ಣ ಮಾಡುತ್ತೇನೆ ಎಂದು ವ್ಯಂಗ್ಯ ಮಾಡಿದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯ ಶರತ ಗುರ್ಜರ, ಗ್ರಾ.ಪಂ. ಸದಸ್ಯ ಶಿವಾಜಿ ಗೋಸಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಹಾಗೂ ಇನ್ನಿತರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ