ಆ್ಯಪ್ನಗರ

ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

ಹಳಿಯಾಳ : ಕೊರೊನಾ ಪರಿಣಾಮ ಲಾಕ್‌ ಡೌನ್‌ ಘೋಷಣೆಯಾಗಿದ್ದರಿಂದ ಹೊರ ರಾಜ್ಯಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಹಳಿಯಾಳ ಪಟ್ಟಣಕ್ಕೆ ದುಡಿಯಲು ಆಗಮಿಸಿದ್ದ ಕಟ್ಟಡ ಕಾರ್ಮಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ದಿನಸಿ ಮತ್ತು ತರಕಾರಿಗಳ ಕಿಟ್‌ಗಳನ್ನು ವಿತರಿಸಲಾಯಿತು.

Vijaya Karnataka 25 Apr 2020, 5:00 am
ಹಳಿಯಾಳ : ಕೊರೊನಾ ಪರಿಣಾಮ ಲಾಕ್‌ ಡೌನ್‌ ಘೋಷಣೆಯಾಗಿದ್ದರಿಂದ ಹೊರ ರಾಜ್ಯಗಳು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಹಳಿಯಾಳ ಪಟ್ಟಣಕ್ಕೆ ದುಡಿಯಲು ಆಗಮಿಸಿದ್ದ ಕಟ್ಟಡ ಕಾರ್ಮಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ದಿನಸಿ ಮತ್ತು ತರಕಾರಿಗಳ ಕಿಟ್‌ಗಳನ್ನು ವಿತರಿಸಲಾಯಿತು.
Vijaya Karnataka Web distribution of food kit for building workers
ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ


ತಾಲೂಕಿನ ತೇರಗಾಂವದ ಹೊಲದಲ್ಲಿಸಿಕ್ಕಿ ಹಾಕಿಕೊಂಡಿರುವ ಮಹಾರಾಷ್ಟ್ರದ ಕಬ್ಬು ಕಟಾವು ಮಾಡುವ 6 ಕುಟುಂಬಗಳು, ಉತ್ತರ ಪ್ರದೇಶದ 12, ಬಿಹಾರದ 3, ಕಲಬುರ್ಗಿಯ 2, ಕೆಸರೊಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿಇಟ್ಟಂಗಿ ಕೆಲಸ ಮಾಡುವ ವಿಜಯಪುರದ 2, ಅಳ್ನಾವರ ಪಟ್ಟಣದ ಎಪಿಎಂಸಿ ಪ್ರಾಗಂಣದಲ್ಲಿದ್ದ ಅಲೆಮಾರಿ 15 ಹಾಗೂ ಸಿಕ್ಕಿ ಹಾಕಿಕೊಂಡ ಲಕ್ಷೇಶ್ವರ ಮತ್ತು ಗದಗಿನ 29 ಕಾರ್ಮಿಕ ಕುಟುಂಬಗಳಿಗೆ ರೇಶನ್‌ ಕಿಟ್‌, ತರಕಾರಿಗಳನ್ನು ಸಹ ವಿತರಿಸಲಾಯಿತು.

ತಹಸೀಲ್ದಾರ್‌ ವಿದ್ಯಾಧರ ಗುಳಗುಳಿ, ತಾಪಂ ಇಒ ಪ್ರವೀಣಕುಮಾರ ಸಾಲಿ, ಸಿಪಿಐ ಬಿ.ಎಸ್‌.ಲೋಕಾಪೂರ, ಮುಖ್ಯಾಧಿಕಾರಿ ಕೇಶವ ಚೌಗುಲೆ,ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ, ಅಳ್ನಾವರ ತಹಸೀಲ್ದಾರ್‌ ಅಮರೇಶ ಪರಮಾರ, ಪಿಎಸ್‌ಐ ಎಸ್‌.ಆರ್‌.ಕಣವಿ ಮತ್ತು ಗದ್ದಿಗೌಡರ ಮತ್ತು ಧರ್ಮಸ್ಥಳ ಸಂಘದ ಅಧಿಕಾರಿ ಮಂಜುಳಾ ನುಚ್ಚಂಬ್ಲಿಕಿಟ್‌ಗಳನ್ನು ಹಸ್ತಾಂತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ