ಆ್ಯಪ್ನಗರ

ಐಗಳಕುರ್ವೆ ವಿದ್ಯಾರ್ಥಿಗಳಿಗೆ ಸಾಮಗ್ರಿಗಳ ವಿತರಣೆ

ಗೋಕರ್ಣ: ಪ್ರವಾಹ ಪೀಡಿತ ಪ್ರದೇಶವಾದ ಐಗಳಕುರ್ವೆ ಪ್ರಾರ್ಥಮಿಕ ಶಾಲೆಯಲ್ಲಿವಿದ್ಯಾರ್ಥಿಗಳಿಗೆ ಪರಿಹಾರ ಸಾಮಗ್ರಿಗಳ ವಿತರಣೆ ಮತ್ತು ಜಂತು ಹುಳು ನಿರ್ಮೂಲನೆ ಅಭಿಯಾನ ನಡೆಯಿತು.

Vijaya Karnataka 18 Sep 2019, 5:00 am
ಗೋಕರ್ಣ: ಪ್ರವಾಹ ಪೀಡಿತ ಪ್ರದೇಶವಾದ ಐಗಳಕುರ್ವೆ ಪ್ರಾರ್ಥಮಿಕ ಶಾಲೆಯಲ್ಲಿವಿದ್ಯಾರ್ಥಿಗಳಿಗೆ ಪರಿಹಾರ ಸಾಮಗ್ರಿಗಳ ವಿತರಣೆ ಮತ್ತು ಜಂತು ಹುಳು ನಿರ್ಮೂಲನೆ ಅಭಿಯಾನ ನಡೆಯಿತು.
Vijaya Karnataka Web distribution of materials to aikalakurve students
ಐಗಳಕುರ್ವೆ ವಿದ್ಯಾರ್ಥಿಗಳಿಗೆ ಸಾಮಗ್ರಿಗಳ ವಿತರಣೆ


ಸ್ಕೌಟ್‌ ಶಿಕ್ಷಕ ರಾಜು ನಾಯ್ಕ ನೇತೃತ್ವ ವಹಿಸಿದ್ದರು. ಜಿಲ್ಲಾಸ್ಕೌಟ್‌ ಸ್ಥಾನಿಕ ಆಯುಕ್ತರು ಎಸ್‌.ಎಸ್‌.ಭಟ್‌ ಲೋಕೇಶ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಸದಸ್ಯರಾದ ಗೋಪಾಲ ಪಟಗಾರ ಅಧ್ಯಕ್ಷತೆ ವಹಿಸಿದ್ದರು.

ಜನತಾ ವಿದ್ಯಾಲಯ ಮಿರ್ಜಾನ್‌ ಪ್ರೌಢ ಶಾಲೆಯ ಸ್ಕೌಟ್‌ ಮತ್ತು ಗೈಡ್‌ ವಿದ್ಯಾರ್ಥಿಗಳು ಐಗಳಕುರ್ವೆ ಪ್ರಾರ್ಥಮಿಕ ಶಾಲೆ ಮಕ್ಕಳಿಗೆ ಪಟ್ಟಿ, ಪೆನ್ನು, ಹಣ್ಣು, ಸಿಹಿ ವಿತರಿಸಿದರು. ಶಾಲೆಯ ಶಿಕ್ಷಕಿ ಲತಾ ಪಟಗಾರ ಸ್ಕೌಟ, ಗೈಡ್‌ ಸೇವಾ ಮನೋಭಾವದ ಕುರಿತು ತಿಳಿಸಿದರು. ಶಿಕ್ಷಕ ರಾಜು ನಾಯ್ಕ ಜಂತು ಹುಳುವಿನಿಂದಾಗುವ ದುಷ್ಪರಿಣಾಮದ ಕುರಿತು ಮಾತನಾಡಿದರು. ಮಂಜುನಾಥ ಸ್ವಾಗತಿಸಿದರು. ನಾಗಶ್ರೀ ವಂದಿಸಿದರು. ಚಂದನಾ ನಾಯ್ಕ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ