ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

ಕುಮಟಾ : ನೆರೆ ಸಂತ್ರಸ್ತರಿಗಾಗಿ ಹುಬ್ಬಳ್ಳಿ ವಿದ್ಯಾರ್ಥಿ ಸಂಘ ಸಂಗ್ರಹಿಸಿ ನೀಡಿದ ಪರಿಹಾರ ಸಾಮಗ್ರಿಗಳನ್ನು ಜಿ.ಪಂ. ಆರೋಗ್ಯ ಮತ್ತು ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಹೆಗಡೆಯ ತಾರಿಬಾಗಿಲು, ತಾಡುಕೊಪ್ಪ, ಚಿಟ್ಟಿಕಂಬಿ ಇತರೆ ಪ್ರದೇಶಗಳ ಜನರಿಗೆ ವಿತರಿಸಿದರು.

Vijaya Karnataka 14 Aug 2019, 5:00 am
ಕುಮಟಾ : ನೆರೆ ಸಂತ್ರಸ್ತರಿಗಾಗಿ ಹುಬ್ಬಳ್ಳಿ ವಿದ್ಯಾರ್ಥಿ ಸಂಘ ಸಂಗ್ರಹಿಸಿ ನೀಡಿದ ಪರಿಹಾರ ಸಾಮಗ್ರಿಗಳನ್ನು ಜಿ.ಪಂ. ಆರೋಗ್ಯ ಮತ್ತು ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಹೆಗಡೆಯ ತಾರಿಬಾಗಿಲು, ತಾಡುಕೊಪ್ಪ, ಚಿಟ್ಟಿಕಂಬಿ ಇತರೆ ಪ್ರದೇಶಗಳ ಜನರಿಗೆ ವಿತರಿಸಿದರು.
Vijaya Karnataka Web KWR-PHT 13 KMT 1


ಅಘನಾಶಿನಿ ನದಿಯ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ನೆರೆಗೆ ತುತ್ತಾದ ಸಂತ್ರಸ್ತರಿಗೆ ಅನುಕೂಲವಾಗಲೆಂದು ಹುಬ್ಬಳ್ಳಿ ವಿದ್ಯಾರ್ಥಿ ಸಂಘವು ದಿನ ಬಳಕೆಯ ಸಾಮಗ್ರಿಗಳನ್ನು ಸಂಗ್ರಹಿಸಿ, ಸಂತ್ರಸ್ತರಿಗೆ ನೀಡುವಂತೆ ಜಿ.ಪಂ. ಆರೋಗ್ಯ ಮತ್ತು ಶಿಕ್ಷ ಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಅವರಿಗೆ ಹಸ್ತಾಂತರಿಸಿತ್ತು. ಬಟ್ಟೆ, ನೀರು, ಲಘು ಆಹಾರ, ಔಷಧ, ಸೋಪ್‌, ಎಣ್ಣೆ, ಬೆಡ್‌ಶೀಟ್‌, ಟವೆಲ್‌ ಸೇರಿದಂತೆ ಹಲವು ದಿನ ಬಳಕೆ ಸಾಮಗ್ರಿಗಳನ್ನು ರತ್ನಾಕರ ನಾಯ್ಕ ಅವರು ಸಂತ್ರಸ್ತರಿಗೆ ವಿತರಿಸಿದರು.

ರತ್ನಾಕರ ನಾಯ್ಕ ಮಾತನಾಡಿ, ಹುಬ್ಬಳ್ಳಿಯ ಹುಬ್ಬಳ್ಳಿಲೇ ಎಂಬ ವಿದ್ಯಾರ್ಥಿ ಸಂಘದವರ ಕಾರ್ಯ ಅತ್ಯಂತ ಶ್ಲಾಘನೀಯ. ಜೀವನಾವಶ್ಯಕ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ನೆರೆ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಾಂತ್ವನಕ್ಕಿಂತ ಸಹಾಯ ಮುಖ್ಯವಾಗಿರುತ್ತದೆ. ಸಂಘದವರು ಇಂತಹ ಜನಪರ ಕಾರ್ಯವನ್ನು ಹೊರತುಪಡಿಸಿ ಅರಣ್ಯ ರಕ್ಷಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸದ ಸಂಗತಿ. ನೆರೆ ಸಂತ್ರಸ್ತರಿಗೆ ಹಾನಿಯಾದ ಬಗ್ಗೆ ಇನ್ನೂ ಸಮರ್ಪಕ ಸರ್ವೇ ಆಗಿಲ್ಲ. ಆದರೆ ಉಪವಿಭಾಗಾಧಿಕಾರಿ ಅವರು ಸೋಮವಾರವೇ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ನನ್ನ ಗಮನಕ್ಕೆ ಬಂದ ತಕ್ಷ ಣ, ಉಪವಿಭಾಗಾಧಿಕಾರಿ ಅವರ ಜತೆಗೆ ಮಾತನಾಡಿ, ಹೆಚ್ಚುವರಿ ಎರಡು ದಿನಗಳ ಕಾಲಾವಕಾಶ ನೀಡುವಂತೆ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದರು.

ಸಂಘದ ನಿಖಿಲ್‌, ಸಂದೇಶ, ಗ್ರಾಮಸ್ಥರಾದ ಅನಂತ ನಾಯಕ, ನಾಗರಾಜ ನಾಯ್ಕ, ಮಂಜುನಾಥ ನಾಯ್ಕ, ರಾಘು ನಾಯ್ಕ, ಈಶ್ವರ ಪಟಗಾರ, ರವಿ ನಾಯ್ಕ, ಉಲ್ಲಾಸ, ಶ್ರೀನಿವಾಸ, ಹರೀಶ್‌, ಪ್ರಶಾಂತ, ಲಕ್ಷ್ಮೀಕಾಂತ, ದಿನೇಶ, ಗಂಗಾಧರ, ನಂದೀಶ್‌ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ