ಆ್ಯಪ್ನಗರ

ಸಹಕಾರ ಭಾರತಿಯ ಜಿಲ್ಲಾಪ್ರಮುಖರ ಸಭೆ

ಅಂಕೋಲಾ​ ಸಹಕಾರ ಭಾರತಿ ಅತ್ಯುತ್ತಮ ಸಂಘಟನೆ ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಸಹಕಾರ ಭಾರತಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಸತೀಶ್ಚಂದ್ರ ಹೇಳಿದರು.

Vijaya Karnataka 22 Oct 2019, 5:00 am
ಅಂಕೋಲಾ ಸಹಕಾರ ಭಾರತಿ ಅತ್ಯುತ್ತಮ ಸಂಘಟನೆ ಹಮ್ಮಿಕೊಳ್ಳುವುದರ ಮೂಲಕ ಸಮಾಜದಲ್ಲಿಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಸಹಕಾರ ಭಾರತಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಸತೀಶ್ಚಂದ್ರ ಹೇಳಿದರು.
Vijaya Karnataka Web district coordinating committee of co operative bharati
ಸಹಕಾರ ಭಾರತಿಯ ಜಿಲ್ಲಾಪ್ರಮುಖರ ಸಭೆ


ಸೋಮವಾರ ನಡೆದ ಸಹಕಾರ ಭಾರತಿಯ ಜಿಲ್ಲಾಪ್ರಮುಖರ ಸಭೆಯಲ್ಲಿಪಾಲ್ಗೊಂಡು ಅವರು ಮಾತನಾಡಿದರು. ಸಹಕಾರ ಭಾರತಿ ದೇಶದ ಹಲವಾರು ಕಡೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಂಘಟನೆಯನ್ನು ಬಲಪಡಿಸಬೇಕಿದೆ ಎಂದರು.

ರಾಜ್ಯ ಕಾರ್ಯಕಾರಣಿ ಸದಸ್ಯ ಶಂಭುಲಿಂಗಯ್ಯ ಮಾತನಾಡಿ, ಪ್ರತಿ ತಾಲೂಕಿನಲ್ಲಿ100 ಸದಸ್ಯರಾದರು ಇರಲೇಬೇಕು. ಈ ಸದಸ್ಯರಿಗೆ ನುರಿತ ಸಲಹೆಗಾರರಿಂದ ತರಬೇತಿ ನೀಡಲಾಗುವುದು. ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳನ್ನು ನೀಗಿಸಲು ಈ ಸಹಕಾರ ಭಾರತಿ ಶ್ರಮಿಸುವುದು ಎಂದರು.

ಜಿಲ್ಲಾಉಪಾಧ್ಯಕ್ಷ ಮೋಹನದಾಸ ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿ ನವೀನ ಜಿ. ಮಾತನಾಡಿದರು. ನಿವೃತ್ತ ಡಿಎಫ್‌ಓ ನಾಗರಾಜ ನಾಯಕ ತೊರ್ಕೆ, ಎಪಿಎಮ್‌ಸಿ ಅಧ್ಯಕ್ಷ ಗಣಪತಿ ನಾಯಕ ಶೀಳ್ಯಾ, ನಿಸರ್ಗ ಸೌಹಾರ್ದದ ಅಧ್ಯಕ್ಷ ಸತ್ಯಾನಂದ ನಾಯಕ ಪ್ರಮುಖರಾದ ಕೇಶವಾನಂದ ನಾಯಕ, ಸಚಿನ ಭಟ್‌್ಟ ಸಿರ್ಸಿ, ಪ್ರಶಾಂತ ರೋಕಡೆ ಸಿದ್ದಾಪುರ, ರವೀಶ ಹೆಗಡೆ ಸಿದ್ದಾಪುರ ಉಪಸ್ಥಿತರಿದ್ದರು. ಪ್ರಶಾಂತ ನಾಯಕ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ