ಆ್ಯಪ್ನಗರ

ಜಿಲ್ಲಾ ಆಹಾರ ಸುರಕ್ಷ ತೆ, ನಗರಸಭೆ ಅಧಿಕಾರಿಗಳು ದಾಳಿ

ಶಿರಸಿ : ಟೇಸ್ಟಿಂಗ್‌ ಪೌಡರ್‌ ಹಾಗೂ ಬಣ್ಣ ಹಾಕಿ ಎಗ್‌ ರೈಸ್‌ ಹಾಗೂ ಕಬಾಬ್‌ ತಯಾರಿಸುವ ಅಂಗಡಿಗಳಿಗೆ ದಾಳಿ ನಡೆಸಿದ ಜಿಲ್ಲಾ ಆಹಾರ ಸುರಕ್ಷ ತಾ ಹಾಗೂ ನಗರಸಭೆ ಅಧಿಕಾರಿಗಳು ಏಳು ಅಂಗಡಿಗಳನ್ನು ಸೋಮವಾರ ಸೀಜ್‌ ಮಾಡಿದ್ದಾರೆ.

Vijaya Karnataka 25 Dec 2018, 5:00 am
ಶಿರಸಿ : ಟೇಸ್ಟಿಂಗ್‌ ಪೌಡರ್‌ ಹಾಗೂ ಬಣ್ಣ ಹಾಕಿ ಎಗ್‌ ರೈಸ್‌ ಹಾಗೂ ಕಬಾಬ್‌ ತಯಾರಿಸುವ ಅಂಗಡಿಗಳಿಗೆ ದಾಳಿ ನಡೆಸಿದ ಜಿಲ್ಲಾ ಆಹಾರ ಸುರಕ್ಷ ತಾ ಹಾಗೂ ನಗರಸಭೆ ಅಧಿಕಾರಿಗಳು ಏಳು ಅಂಗಡಿಗಳನ್ನು ಸೋಮವಾರ ಸೀಜ್‌ ಮಾಡಿದ್ದಾರೆ.
Vijaya Karnataka Web SRS-24SIRSI3
ಶಿರಸಿಯಲ್ಲಿ ಕೆಲವು ಎಗ್‌ ರೈಸ್‌ ಹಾಗೂ ಕಬಾಬ ಅಂಗಡಿಗಳನ್ನು ನಗರಸಭೆ ಹಾಗು ಆರೋಗ್ಯ ಸುರಕ್ಷ ತಾ ಅಧಿಕಾರಿಗಳು ಸೀಜ್‌ ಮಾಡಿರುವುದು.


ಆರೋಗ್ಯ ಸುರಕ್ಷ ತಾ ಅಧಿಕಾರಿ ಕಾಶಿ ಭಟ್ಟ ಹಾಗೂ ನಗರಸಭೆ ಆರೋಗ್ಯ ನಿರೀಕ್ಷ ಕ ಆರ್‌.ಎಂ.ವೇರ್ಣೆಕರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕಳೆದ ಕೆಲ ದಿನಗಳ ಹಿಂದೆ ನಗರದ ಹಳೆ ಬಸ್‌ ನಿಲ್ದಾಣ ಸುತ್ತಮುತ್ತ ಸೇರಿದಂತೆ ವಿವಿಧೆಡೆ ಎಗ್‌ ರೈಸ್‌ ಹಾಗೂ ಕಬಾಬ್‌ ತಯಾರಿಸುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಅಂಗಡಿ, ವಾಹನಗಳಲ್ಲಿ ಆಹಾರ ಮಾರಾಟ ಮಾಡುವವರ 17ಕಡೆಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಆರೋಗ್ಯಕ್ಕೆ ಹಾನಿಕರವಾದ ಟೇಸ್ಟಿಂಗ್‌ ಪೌಡರ್‌ನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಬಳಸುತ್ತಿರುವ ಬಗ್ಗೆ ಗಮನಿಸಿ ಆರೋಗ್ಯ ಸುರಕ್ಷ ತಾ ಅಧಿಕಾರಿಗಳು ವರದಿ ನೀಡಿದ್ದರು. ಇದರನ್ವಯ ಏಳು ಅಂಗಡಿಗಳನ್ನು ಸೀಜ್‌ ಮಾಡಿದ್ದೇವೆ ಎಂದು ನಗರಸಭೆ ಅಧಿಕಾರಿ ವೇರ್ಣೆಕರ್‌ ಮಾಹಿತಿ ನೀಡಿದರು.

ಸಾಮಾನ್ಯವಾಗಿ ಬಣ್ಣ ಹಾಕಿದ ಪದಾರ್ಥವನ್ನು ಎಣ್ಣೆಯಲ್ಲಿ ಕರಿಯಬಾರದು ಎನ್ನುವ ನಿಯಮವಿದೆ. ಇಂತಹ ಆಹಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದೆಲ್ಲವೂ ಇಲ್ಲಿ ನಡೆಯುವುದು ಗಮನಕ್ಕೆ ಬಂದ

ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಿಂತ ಮುಖ್ಯವಾಗಿ ಪರಿಶೀಲನೆ ಸಂದರ್ಭದಲ್ಲಿ ಎಗ್‌ರೈಸ್‌ ಮುಂತಾದ ಆಹಾರ ಮಾರಾಟ ಮಾಡುವ ಕೆಲ ಅಂಗಡಿಯವರು ನಗರ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯದಿರುವುದು ಗಮನಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

17ಅಂಗಡಿಗಳಲ್ಲಿ ಏಳು ಅಂಗಡಿ ಸೀಜ್‌ ಮಾಡಲಾಗಿದೆ. ಇನ್ನುಳಿದ 10ಸಂಚಾರಿ ಅಂಗಡಿಗಳಾಗಿದ್ದು ಅವೆಲ್ಲವೂ ವಾಹನದಲ್ಲೇ ಕಾರ್ಯಚರಿಸುತ್ತಿವೆ. ಅವುಗಳನ್ನು ಸಹ ಕೆಲ ಇಲಾಖೆಗಳ ಸಹಕಾರ ಪಡೆದು ಸೀಜ್‌ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ