ಆ್ಯಪ್ನಗರ

ನಾಳೆಯಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.22 ಮತ್ತು 23 ರಂದು ಪಟ್ಟಣದ ವೈ.ಟಿ.ಎಸ್‌.ಎಸ್‌. ಕಾಲೇಜಿನ ಮೈದಾನದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಡಾ. ಸೈಯ್ಯದ್‌ ಝಮೀರುಲ್ಲಾ ಷರೀಫ್‌ ಅವರ ಸರ್ವಾಧ್ಯಕ್ಷ ತೆಯಲ್ಲಿ ನಡೆಯಲಿದೆ.

Vijaya Karnataka 21 Dec 2018, 5:00 am
ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.22 ಮತ್ತು 23 ರಂದು ಪಟ್ಟಣದ ವೈ.ಟಿ.ಎಸ್‌.ಎಸ್‌. ಕಾಲೇಜಿನ ಮೈದಾನದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಡಾ. ಸೈಯ್ಯದ್‌ ಝಮೀರುಲ್ಲಾ ಷರೀಫ್‌ ಅವರ ಸರ್ವಾಧ್ಯಕ್ಷ ತೆಯಲ್ಲಿ ನಡೆಯಲಿದೆ.
Vijaya Karnataka Web district sahitya sammelan by tomorrow
ನಾಳೆಯಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ


ಡಿ.22 ರಂದು ಬಬೆಳಗ್ಗæ್ಗ 8 ಗಂಟೆಗೆ ಸಮ್ಮೇಳನದ ಅಂಗಳದಲ್ಲಿ ಶಾಸಕ ಶಿವರಾಮ ಹೆಬ್ಬಾರ ರಾಷ್ಟ್ರಧ್ವಜಾರೋಹಣ ಮಾಡಲಿದ್ದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. 8.30ಕ್ಕೆ ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌.ಆರ್‌.ಹೆಗಡೆ ಸಮ್ಮೇಳನಾಧ್ಯಕ್ಷ ರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 10 ಗಂಟೆಗೆ ಸಮ್ಮೇಳನವವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನಾಧ್ಯಕ್ಷ ಸೈಯದ್‌ ಝಮೀರುಲ್ಲಾ ಷರೀಫ್‌ ಅವರಿಗೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮಾಸ್ಕೇರಿ ಎಂ.ಕೆ.ನಾಯಕ ಅವರು ಕನ್ನಡ ಧ್ವಜ ಹಸ್ತಾಂತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಶಾಸಕರಾದ ಶಿವರಾಮ ಹೆಬ್ಬಾರ, ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಮಳಿಗೆಯನ್ನು ತಾ.ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ವ್ಯಂಗ್ಯಚಿತ್ರ ಪ್ರದರ್ಶನ ಮಳಿಗೆಯನ್ನು ನೀರ್ನಳ್ಳಿ ಗಣಪತಿ ಅವರು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕವಿ ವನರಾಗ ಶರ್ಮ ಅವರ 'ಬಾಗಿಲಿಲ್ಲದ ಗೋಡೆಯಿಲ್ಲ' ಮಕ್ಕಳ ಕಥಾ ಸಂಕಲನವನ್ನು ಕಥೆಗಾರ ಬಿ.ಪಿ.ಶಿವಾನಂದರಾವ್‌ ಹಾಗೂ ಡಾ.ಸುರೇಶ್‌ ನಾಯ್ಕ ಸಂಪಾದಿಸಿದ ''ಶಾಮಿಯಾನ'' ಕೃತಿಯನ್ನು ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಎನ್‌.ಎಸ್‌.ಹೆಗಡೆ ಕುಂದರಗಿ ಅವರು ಬಿಡುಗಡೆ ಮಾಡಲಿದ್ದಾರೆ.

ಮಕ್ಕಳ ಕಾವ್ಯೋತ್ಸವ : ಮಧ್ಯಾಹ್ನ 2.30ಕ್ಕೆ ತಮ್ಮಣ್ಣ ಬೀಗಾರ ಅಧ್ಯಕ್ಷ ತೆಯಲ್ಲಿ ಮಕ್ಕಳ ಕಾವ್ಯೋತ್ಸವ ನಡೆಯಲಿದೆ. ಡಾ. ಶ್ರೀಪಾದ ಭಟ್ಟ ಆಶಯ ನುಡಿ ಆಡಲಿದ್ದಾರೆ. ಈ ಗೋಷ್ಠಿಯಲ್ಲಿ ರಕ್ಷಿತ್‌ ಹರಪನಹಳ್ಳಿ ದೀಪ್ತಿ ಗೋಪಾಲ ನಾಯ್ಕ, ಎಂ.ಎಸ್‌.ಶೋಬಿತ್‌, ನಿತೀಶ ಚಿದಾನಂದ ಕೋವಿ, ಸಹನಾ ಹೆಗಡೆ, ಗಾಯತ್ರಿ ಗಡಿಗೆಹೊಳೆ, ಶಶಿಧರ ಮಹಾಲೆ, ಶೋಬಿತಾ ಲಕ್ಷ ್ಮಣ ನಾಯ್ಕ, ತೇಜಾ ಜಗನ್ನಾಥ ನಾಯ,್ಕ ಸೌಂದರ್ಯ ವಿನೋದ ವೆರ್ಣೇಕರ್‌, ಲಲಿತಾ ಗಿರಿಧರ ನಾಯ್ಕ, ಸ್ವಾತಿ ಶಂಕರ ನಾಯ್ಕ, ದಿವ್ಯಾ ಭಾಗವತ, ಮೇಧಾ ಭಟ್ಟ, ಭಾವನಾ ಗಾಂವಕರ, ಪಾವನಿ ಅರ್ಜುನ ಗುರವ, ಕವಿತಾ ಬೋಳಗುಡ್ಡೆ, ಪ್ರೀತಿಕಾ ಮುಂತಾದ ಮಕ್ಕಳು ಕವನ ವಾಚನ ಮಾಡಲಿದ್ದಾರೆ.

ಮಧ್ಯಾಹ್ನ 4.30ಕ್ಕೆ ಕನ್ನಡ, ಕನ್ನಡ ಶಾಲೆ ಮತ್ತು ಕರ್ನಾಟಕ ಸರ್ಕಾರದ ನಿಲುವುಗಳು ಈ ವಿಷಯದ ಮೇಲೆ 2ನೇ ಗೋಷ್ಠಿ ನಡೆಯಲಿದ್ದು ಟಿ.ಜಿ.ಭಟ್ಟ ಹಾಸಣಗಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಎಂ.ಕೆ.ನಾಯ್ಕ ಹೊಸಳ್ಳಿ ಆಶಯ ಮಾತನಾಡಲಿದ್ದಾರೆ.

ಕಾವ್ಯ ಸವಿ ಗಾನ : ಸಂಜೆ 6 ಗಂಟೆಗೆ ಕವಿ ಕಾವ್ಯ ಸವಿ ಗಾನ ಕಾರ್ಯಕ್ರಮ ನಡೆಯಲಿದ್ದು ಈ ಗೋಷ್ಠಿಯ ಅಧ್ಯಕ್ಷ ತೆಯನ್ನು ಪ್ರೊ. ಮೋಹನ ಹಬ್ಬು ವಹಿಸಲಿದ್ದು, ಡಾ. ರಾಜು ಹೆಗಡೆ ಆಶಯ ಮಾತುಗಳನ್ನಾಡುವರು. ಸಮ್ಮೇಳನಾಧ್ಯಕ್ಷ ಡಾ. ಝಮೀರುಲ್ಲಾ ಷರೀಫ್‌, ಅರವಿಂದ ಕರ್ಕಿಕೋಡಿ, ಸುಬ್ರಾಯ ಭಟ್ಟ ಬಕ್ಕಳ, ಪ್ರಿಯಾ ಕಲ್ಲಬ್ಬೆ, ಗಣೇಶ ಪಿ.ನಾಡೋರ ಇವರು ವಾಚಿಸುವ ಕವನಗಳಿಗೆ ನಿನಾದ ಸಾಹಿತ್ಯ ಸಂಗೀತ ಸಂಚಯ ಸಂಘಟನೆಯ ಗಾಯಕ ಉಮೇಶ ಮುಂಡಳ್ಳಿ ಮತ್ತು ಸಂಧ್ಯಾ ಭಟ್ಟ ಇವರು ಹಾಡುವರು.

ಕವಿಗೋಷ್ಠಿ : ಡಿ.23 ರಂದು ಬೆಳಗ್ಗೆ 9.30ಕ್ಕೆ ನಡೆಯುವ ಕವಿಗೋಷ್ಠಿಯ ಅಧ್ಯಕ್ಷ ತೆಯನ್ನು ಗೀತಾ ವಸಂತ ವಹಿಸಲಿದ್ದು, ಆಶಯ ಭಾಷಣವನ್ನು ಪ್ರಜ್ಞಾ ಮತ್ತಿಹಳ್ಳಿ ಮಾಡಲಿದ್ದಾರೆ. ಜೆ.ಪ್ರೆಮಾನಂದ, ಶ್ರೀದೇವಿ ಕೆರೆಮನೆ, ಪಲ್ಲವಿ ಕಿರಣ, ರೇಷ್ಮಾ ಎ.ರೆಹೆಮಾನ್‌, ಸ್ಮಿತಾ ಭಟ್ಟ, ಈರಣ್ಣ ರಂಗಾಪುರ, ಪ್ರೇಮಾ ಟಿ.ಎಂ.ಆರ್‌., ಸುಬ್ರಾಯ ಬಿದ್ರಮನೆ, ಸುಕನ್ಯಾ ದೇಸಾಯಿ, ಶಿವಲೀಲಾ ಹುಣಸಗಿ, ಶ್ರೀಧರ ಶೇಟ್‌, ಎಂ.ಡಿ.ಪಕ್ಕಿ, ಸುಧಾರಾಣಿ ಆರ್‌.ನಾಯ್ಕ, ಪಿ.ಬಿ.ಗೌಡ, ಸೀತಾ ಹೆಗಡೆ, ಎನ್‌.ವಿ.ನಾಯಕ, ವಿ.ಆರ್‌.ಗೌಡ, ಎಂ.ಜಿ.ತಿಲೋತ್ತಮೆ, ಟಿ.ವಿ.ಕೋಮಾರ, ನರಸಿಂಹ ಹೆಗಡೆ, ಸುರೇಶ ಮುರ್ಡೇಶ್ವರ, ವೇದಾವತಿ ಹೆಗಡೆ, ಎಂ.ಎಸ್‌.ಹೆಗಡೆ ಸಿದ್ದಾಪುರ, ಮಾಸ್ತಿ ಗೌಡ, ನಾಗರಾಜ ಮಂಜುಗುಣಿ, ಗಾಯತ್ರಿ ರಾಘವೇಂದ್ರ, ದತ್ತಾತ್ರೇಯ ಹೆಗಡೆ ಕಣ್ಣೀಪಾಲ, ಲಕ್ಷ್ಮೀ ಹುಲಿದೇವರವಾಡ, ಎಂ.ವಿಠ್ಠಲ ಅವರಗುಪ್ಪ, ಕವನ ವಾಚನ ಮಾಡಲಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ