ಆ್ಯಪ್ನಗರ

ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ 12ಕ್ಕೆ

ಶಿರಸಿ : ಇಲ್ಲಿಯ ಕೋಟೆಗಲ್ಲಿವಿವೇಕಾನಂದ ವಿಶ್ವಕಲ್ಯಾಣ ಹಾಗೂ ಸಾಧನ ಕೇಂದ್ರವು ಉತ್ತರ ಕನ್ನಡ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿಜ.12ರ ಬೆಳಗ್ಗೆ 10ಕ್ಕೆ ಆಯೋಜಿಸಿದೆ. 5 ವಿಭಾಗಗಳಲ್ಲಿನಡೆಯುವ ಸ್ಪರ್ಧೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.

Vijaya Karnataka 2 Jan 2020, 5:00 am
ಶಿರಸಿ : ಇಲ್ಲಿಯ ಕೋಟೆಗಲ್ಲಿವಿವೇಕಾನಂದ ವಿಶ್ವಕಲ್ಯಾಣ ಹಾಗೂ ಸಾಧನ ಕೇಂದ್ರವು ಉತ್ತರ ಕನ್ನಡ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿಜ.12ರ ಬೆಳಗ್ಗೆ 10ಕ್ಕೆ ಆಯೋಜಿಸಿದೆ. 5 ವಿಭಾಗಗಳಲ್ಲಿನಡೆಯುವ ಸ್ಪರ್ಧೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.
Vijaya Karnataka Web district speech competition at 12 noon
ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ 12ಕ್ಕೆ


ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ನಿರ್ದಿಷ್ಟ ಶ್ಲೋಕಗಳ ಕಂಠಪಾಠ ಸ್ಪರ್ಧೆ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿಭಾಗಕ್ಕೆ ನಿಗದಿತ 5 ಶ್ಲೋಕದೊಂದಿಗೆ ಕಂಠಪಾಠ ಮತ್ತು ಅರ್ಥ ವಿವರಿಸುವ ಸ್ಪರ್ಧೆ ನಡೆಯಲಿದೆ.

ಪ್ರೌಢಶಾಲಾ ವಿಭಾಗಕ್ಕೆ ಸ್ವಾಮಿ ವಿವೇಕಾನಂದರು ನವ ಯುವಜನರ ಮೇಲೆ ಬೀರಿದ ಪ್ರಭಾವ ರಾಷ್ಟ್ರ ಪ್ರೇಮ, ವಿಶ್ವ ಬಂಧುತ್ವ ಬಗ್ಗೆ ಉದಾಹರಣೆ, ಕಾಲೇಜು ವಿಭಾಗದಲ್ಲಿಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ನಿರ್ಮಾಣದ ಶಿಲ್ಪಿಗಳಲ್ಲಿಒಬ್ಬರು ಎನ್ನುವ ವಿಷಯವಾಗಿ ಸ್ಪರ್ಧೆ ಏರ್ಪಾಟಾಗಿದೆ.

ಸಾರ್ವಜನಿಕ ವಿಭಾಗದಲ್ಲಿವಿವೇಕಾನಂದರು ಸ್ತ್ರೀ ಸಮೂಹದ ಮೇಲೆ ಬೀರಿದ ಪ್ರಭಾವಗಳೇನು ಅಥವಾ ಶಾರದಾಮಣಿಯವರ ಜೀವನ ಚರಿತ್ರೆ ಬಗ್ಗೆ ಭಾಷಣ ಸ್ಪರ್ಧೆ ನಡೆಯಲಿದೆ.

ಆಸಕ್ತರು ಜ.10ರೊಳಗೆ ಹೆಸರನ್ನು ನೋಂದಾಯಿಸಬೇಕು. ಕಳೆದ ಆಗಸ್ಟ್‌ನಲ್ಲಿಆವೆಮರಿಯಾ ಪ್ರೌಢಶಾಲೆಯ ಆವರಣದಲ್ಲಿನಡೆಸಿದ ಲೇಖನ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿಬಹುಮಾನಿತರಾದವರಿಗೆ ಇದೇ ಕಾರ್ಯಕ್ರಮದಲ್ಲಿಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ