ಆ್ಯಪ್ನಗರ

ಸಸ್ಯ ಸಂಪತ್ತು ನಾಶ ಮಾಡದಿರಿ

ಹೊನ್ನಾವರ : ನಮ್ಮ ಸುತ್ತಮುತ್ತಲು ಕಂಡು ಬರುವ ಹಲವು ಸೊಪ್ಪಿನ ತರಕಾರಿಗಳನ್ನು ಅಡುಗೆ ತಯಾರಿಸಲು ಬಳಸಬಹುದಾಗಿದ್ದು ಇಂಥ ಪದಾರ್ಥ ನಾಲಿಗೆಗೆ ರುಚಿ ನೀಡುವ ಜತೆ ಆರೋಗ್ಯ ವರ್ಧನೆಗೆ ನೆರವಾಗುತ್ತವೆ ಎಂದು ಜಾನಪದ ತಜ್ಞೆ ಶಾಂತಿ ನಾಯಕ ಹೇಳಿದರು.

Vijaya Karnataka 10 Oct 2019, 5:00 am
ಹೊನ್ನಾವರ : ನಮ್ಮ ಸುತ್ತಮುತ್ತಲು ಕಂಡು ಬರುವ ಹಲವು ಸೊಪ್ಪಿನ ತರಕಾರಿಗಳನ್ನು ಅಡುಗೆ ತಯಾರಿಸಲು ಬಳಸಬಹುದಾಗಿದ್ದು ಇಂಥ ಪದಾರ್ಥ ನಾಲಿಗೆಗೆ ರುಚಿ ನೀಡುವ ಜತೆ ಆರೋಗ್ಯ ವರ್ಧನೆಗೆ ನೆರವಾಗುತ್ತವೆ ಎಂದು ಜಾನಪದ ತಜ್ಞೆ ಶಾಂತಿ ನಾಯಕ ಹೇಳಿದರು.
Vijaya Karnataka Web 37538 HNR 1_24


ತಾಲೂಕಿನ ಕಾಮಕೋಡಿನ ದೇವರಕಾಡಿನ ಮಧ್ಯದಲ್ಲಿರುವ ಶ್ರೀ ದುರ್ಗಮ್ಮ ದೇವಸ್ಥಾನದಲ್ಲಿಹೊನ್ನಾವರದ ಎಸ್‌ಡಿಂ ಕಾಲೇಜಿನ ಕನ್ನಡ ಸಂಘ ಕುಣಿಗಲ್‌ ತಾಲೂಕಿನ ಅವನಿ ಸಂಸ್ಥೆ, ಸ್ಥಳೀಯ ಪರಿಸರ ಕೂಟದ ಸಂಯುಕ್ತ ಆಶ್ರಯದಲ್ಲಿನಡೆದ ಸೊಪ್ಪೇ ಸಂಪತ್ತು ಕಾರ್ಯಕ್ರಮದಲ್ಲಿಅವರ ವಿಶೇಷ ಉಪನ್ಯಾಸ ನೀಡಿದರು.

ಹಿಂದಿನ ಕಾಲದಲ್ಲಿಅಡುಗೆ ಮನೆಯನ್ನು ಅಲಂಕರಿಸಿದ್ದ ಮನೆಯ ಹಿತ್ತಲಲ್ಲೇ ಸಿಗುವ ತರಹೇವಾರಿ ಸೊಪ್ಪು ಈಗಿನ ದಿನಗಳಲ್ಲಿಉಪೇಕ್ಷೆಗೊಳಗಾಗಿದೆ. ಮಾರುಕಟ್ಟೆಯ ರಾಸಾಯನಿಕ ಯುಕ್ತ ತರಕಾರಿ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಸುಲಭವಾಗಿ ಸಿಗಬಹುದಾದ ಬಸಲೆ, ಕೆಸು ಮೊದಲಾದ ಸೊಪ್ಪುಗಳನ್ನು ಅಡುಗೆಯಲ್ಲಿಬಳಸುವುದರಿಂದ ಹಣ ಉಳಿತಾಯವಾಗುವ ಜೊತೆಗೆ ಆರೋಗ್ಯ ಸಮಸ್ಯೆಗೂ ಪರಿಹಾರವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅವನಿ ಸಂಸ್ಥೆಯ ಅಧ್ಯಕ್ಷೆ ಡಾ. ಪಿ.ಚಂದ್ರಿಕಾ ಮಾತನಾಡಿ, ಮನುಷ್ಯನಿಗಿರುವಷ್ಟೇ ಹಕ್ಕು ಪರಿಸರದಲ್ಲಿಪ್ರಾಣಿ-ಪಕ್ಷಿ ಹಾಗೂ ಇತರ ಜೀವಿಗಳಿಗೂ ಇದೆ. ನಮಗೆ ನಿಸರ್ಗ ದಯಪಾಲಿಸಿರುವ ಸಸ್ಯ ಸಂಪತ್ತನ್ನು ನಾಶ ಮಾಡದೆ ಅವುಗಳ ಸಾಂಗತ್ಯದಲ್ಲಿನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಸಾಂಪ್ರದಾಯಿಕ ಅಡುಗೆಯಲ್ಲಿಬಳಸುತ್ತಿದ್ದ ಸೊಪ್ಪಿನ ಕುರಿತಂತೆ ಜನಸಾಮಾನ್ಯರಲ್ಲಿಅರಿವು ಮೂಡಿಸುವ ಪ್ರಯತ್ನವಾಗಿ ಅವನಿ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದೆ ಎಂದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಗಣೇಶ ನಾಯ್ಕ, ಅಭಿನವ ಪ್ರಕಾಶನದ ರವಿಕುಮಾರ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ನಾಗರಾಜ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿಷ್ಣು ನಾಯ್ಕ ಸ್ವಾಗತಿಸಿದರು. ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು. ಕಾಮಕೋಡ ಪರಿಸರ ಕೂಟದ ಸಂಚಾಲಕ ಪ್ರೊ. ಎಂ.ಜಿ.ಹೆಗಡೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ