ಆ್ಯಪ್ನಗರ

ವೃಥಾ ಆರೋಪಕ್ಕೆ ಕಿವಿಗೊಡಬೇಡಿ

ಕಾರವಾರ : ಒಂದು ಮನೆಯನ್ನು ಮುನ್ನಡೆಸಿಕೊಂಡು ಹೋಗುವ ಮಹಿಳೆ ಸಮಾಜವನ್ನು ಸಹ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬಲ್ಲಳು ಎಂಬುದು ಸಾಬೀತಾಗಿದೆ. ಆದರೂ ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಾನಾ ಕಾರಣಗಳಿಗೆ ಹಿಂಜರಿಯುವುದು ಕಂಡು ಬರುತ್ತದೆ. ಸಾಕಷ್ಟು ಉತ್ಸಾಹ, ಅರ್ಹತೆ ಇದ್ದವರೂ ಕೇವಲ ಮನಸ್ಸಿನಲ್ಲೇ ನೂರೆಂಟು ಕಲ್ಪನೆಗಳನ್ನು ಮಾಡಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ನಿಮಗೆ ಆಸಕ್ತಿ, ಅರ್ಹತೆ ಇದ್ದರೆ ತಂದೆ ತಾಯಿ ಅಥವಾ ಪತಿಗೆ ಮನವರಿಕೆ ಮಾಡಿಕೊಡಬೇಕು. ನಿಮ್ಮ ಅರ್ಹತೆ ಮತ್ತು ಆಸಕ್ತಿಯನ್ನು ಮೊದಲು ಅವರೇ ಗುರುತಿಸುತ್ತಾರೆ. ಕ್ಷೇತ್ರದಲ್ಲಿ ಕಾಲಿಟ್ಟ ಮೇಲೆ ವೃಥಾ ಆರೋಪಗಳಿಗೆ ಕಿವಿಗೊಡಬಾರದು. ಸಮಾಜ ಸೇವೆಯ ಮೂಲಕ ಸಿಗುವ ಸಂತೋಷವನ್ನು ಅನುಭವಿಸಬೇಕೇ ಹೊರತು, ಇಲ್ಲ ಸಲ್ಲದ ಮಾತಿಗೆ ಧೃತಿಗೆಡುವಂತಾಗಬಾರದು. ಒಮ್ಮೆ ಯಶಸ್ಸು ಸಿಕ್ಕ ಮೇಲೆ, ಆರೋಪ ಮಾಡಿದವರೂ ನಿಮಗೆ ತಲೆ ಬಾಗುತ್ತಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಗುರಿ ಹೊಂದಿರಬೇಕು.

Vijaya Karnataka 8 Mar 2019, 5:00 am
ಕಾರವಾರ : ಒಂದು ಮನೆಯನ್ನು ಮುನ್ನಡೆಸಿಕೊಂಡು ಹೋಗುವ ಮಹಿಳೆ ಸಮಾಜವನ್ನು ಸಹ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬಲ್ಲಳು ಎಂಬುದು ಸಾಬೀತಾಗಿದೆ. ಆದರೂ ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಾನಾ ಕಾರಣಗಳಿಗೆ ಹಿಂಜರಿಯುವುದು ಕಂಡು ಬರುತ್ತದೆ. ಸಾಕಷ್ಟು ಉತ್ಸಾಹ, ಅರ್ಹತೆ ಇದ್ದವರೂ ಕೇವಲ ಮನಸ್ಸಿನಲ್ಲೇ ನೂರೆಂಟು ಕಲ್ಪನೆಗಳನ್ನು ಮಾಡಿಕೊಂಡು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ನಿಮಗೆ ಆಸಕ್ತಿ, ಅರ್ಹತೆ ಇದ್ದರೆ ತಂದೆ ತಾಯಿ ಅಥವಾ ಪತಿಗೆ ಮನವರಿಕೆ ಮಾಡಿಕೊಡಬೇಕು. ನಿಮ್ಮ ಅರ್ಹತೆ ಮತ್ತು ಆಸಕ್ತಿಯನ್ನು ಮೊದಲು ಅವರೇ ಗುರುತಿಸುತ್ತಾರೆ. ಕ್ಷೇತ್ರದಲ್ಲಿ ಕಾಲಿಟ್ಟ ಮೇಲೆ ವೃಥಾ ಆರೋಪಗಳಿಗೆ ಕಿವಿಗೊಡಬಾರದು. ಸಮಾಜ ಸೇವೆಯ ಮೂಲಕ ಸಿಗುವ ಸಂತೋಷವನ್ನು ಅನುಭವಿಸಬೇಕೇ ಹೊರತು, ಇಲ್ಲ ಸಲ್ಲದ ಮಾತಿಗೆ ಧೃತಿಗೆಡುವಂತಾಗಬಾರದು. ಒಮ್ಮೆ ಯಶಸ್ಸು ಸಿಕ್ಕ ಮೇಲೆ, ಆರೋಪ ಮಾಡಿದವರೂ ನಿಮಗೆ ತಲೆ ಬಾಗುತ್ತಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಗುರಿ ಹೊಂದಿರಬೇಕು.
Vijaya Karnataka Web do not listen to scandal
ವೃಥಾ ಆರೋಪಕ್ಕೆ ಕಿವಿಗೊಡಬೇಡಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ