ಆ್ಯಪ್ನಗರ

ಮಕ್ಕಳಿಗೆ ಒತ್ತಡ ಹೇರಬೇಡಿ

ಹೊನ್ನಾವರ : ಮಕ್ಕಳಿಗೆ ಸಹಜವಾಗಿ ಏನು ಬೇಕು ಎನ್ನುವ ಚಿಂತನೆ ನಡೆಸದೇ, ಕೇವಲ ಅಂಕಗಳನ್ನು ತೆಗೆದುಕೊಳ್ಳುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು ಮತ್ತು ಯಾಂತ್ರೀಕೃತ ಬದುಕಿನಿಂದ ಹೊರ ಬರಲು ಸಹಾಯಕ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಎಚ್‌. ಪಾಟೀಲ್‌ ಹೇಳಿದರು.

Vijaya Karnataka 11 May 2019, 5:00 am
ಹೊನ್ನಾವರ : ಮಕ್ಕಳಿಗೆ ಸಹಜವಾಗಿ ಏನು ಬೇಕು ಎನ್ನುವ ಚಿಂತನೆ ನಡೆಸದೇ, ಕೇವಲ ಅಂಕಗಳನ್ನು ತೆಗೆದುಕೊಳ್ಳುವ ಯಂತ್ರಗಳನ್ನಾಗಿ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು ಮತ್ತು ಯಾಂತ್ರೀಕೃತ ಬದುಕಿನಿಂದ ಹೊರ ಬರಲು ಸಹಾಯಕ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ ಎಚ್‌. ಪಾಟೀಲ್‌ ಹೇಳಿದರು.
Vijaya Karnataka Web do not put pressure on children
ಮಕ್ಕಳಿಗೆ ಒತ್ತಡ ಹೇರಬೇಡಿ


ತಾಲೂಕಿನ ಕೆರೆಕೋಣದ ಡಾ. ದಿನಕರ ದೇಸಾಯಿ ಗ್ರಾ.ಪಂ.ಗ್ರಂಥಾಲಯದಲ್ಲಿ ಬೆಂಗಳೂರಿನ ಬಾಲಭವನ ಸೊಸಾಯಿಟಿ, ಹೊನ್ನಾವರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ, 10 ದಿನಗಳ ಕಾಲ ನಡೆಯುವ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷ ಣವೆಂದರೆ ಕೇವಲ ಮಾರ್ಕ್ಸ್‌ ಅಷ್ಟೇ ಅಲ್ಲ, ಎಲ್ಲ ರೀತಿಯಿಂದಲೂ ಸಂಸ್ಕಾರವನ್ನು ಹೊತ್ತು ಸಮಾಜದಲ್ಲಿ ಪ್ರಬುದ್ಧ ಮಗುವಾಗಿ ಬೆಳೆಯುವ ರೀತಿಯದ್ದಾಗಿರಬೇಕು. ಅದು ಬಿಟ್ಟು ಓದು-ಓದು ಎನ್ನುವ ಒತ್ತಡದಿಂದಾಗಿ ಓದಬೇಕಾದ ಅಪಾಯದಲ್ಲಿ ಮಗು ನೂಕಲ್ಪಡುವ ಸ್ಥಿತಿಯಾಗಬಾರದು ಎಂದರು.

ಅಧ್ಯಕ್ಷ ತೆ ವಹಿಸಿದ್ದ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ಆಸ್ತಿ ಮಾಡುವುದು ಬೇಡ. ಬದಲಾಗಿ ಮಗುವನ್ನೇ ಆಸ್ತಿಯನ್ನಾಗಿ ಮಾಡುವ ಹಾಗೆ ಪ್ರಯತ್ನ ಮಾಡಬೇಕು ಎಂದರು.

ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷ ಕರ ಪಾತ್ರ ಪ್ರಮುಖವಾದುದು. ಆ ನಿಟ್ಟಿನಲ್ಲಿ ಎಲ್ಲ ವಿಭಾಗದ ಶಿಕ್ಷ ಕರು ರೋಲ್‌ ಮಾಡೆಲ್‌ಗಳಾಗಬೇಕು. ಆಗಲೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಮಕ್ಕಳು ರೂಪುಗೊಳ್ಳುತ್ತಾರೆ. ಇದಕ್ಕೆಲ್ಲ ಶಿಬಿರ ಅನುವು ಮಾಡಿಕೊಡುತ್ತದೆ ಎಂದರು.

ನಿವೃತ್ತ ಶಿಕ್ಷ ಕ, ಕಲಾವಿದ ಬಿ.ವಿ. ಭಂಡಾರಿ, ಎಸ್‌.ಡಿ.ಎಮ್‌. ಪಿ.ಯು. ಕಾಲೇಜಿನ ಉಪನ್ಯಾಸಕ ಸಂಪನ್ಮೂಲ ವ್ಯಕ್ತಿ ವಿದ್ಯಾಧರ ನಾಯ್ಕ ಮತ್ತು ಯಕ್ಷ ಗಾನ ಕಲಾವಿದ ಮುಗ್ವಾ ಗಣೇಶ ನಾಯ್ಕ ಮಾತನಾಡಿದರು.

ಎಮ್‌ ಎಸ್‌ ಶೆಟ್ಟಿ ಸ್ವಾಗತಿಸಿದರು, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಪಟಗಾರ ವಂದಿಸಿದರು. ಮಹೇಶ ಭಂಡಾರಿ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ