ಆ್ಯಪ್ನಗರ

ರಕ್ತದಾನ ಮಾಡಿ ಜೀವ ಉಳಿಸಿ

ಹೊನ್ನಾವರ : ದೇಶದಲ್ಲಿ ಅಗತ್ಯವಿದ್ದವರಿಗೆ ಕೊಡಲು ಪ್ರತಿ ನಿಮಿಷಕ್ಕೆ 37 ಸಾವಿರ ಲೀ. ರಕ್ತದ ಅವಶ್ಯಕತೆಯಿದ್ದು ಯುವಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯದಲ್ಲಿಕೈ ಜೋಡಿಸಬೇಕು ಎಂದು ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಹೇಳಿದರು.

Vijaya Karnataka 20 Sep 2019, 5:00 am
ಹೊನ್ನಾವರ : ದೇಶದಲ್ಲಿ ಅಗತ್ಯವಿದ್ದವರಿಗೆ ಕೊಡಲು ಪ್ರತಿ ನಿಮಿಷಕ್ಕೆ 37 ಸಾವಿರ ಲೀ. ರಕ್ತದ ಅವಶ್ಯಕತೆಯಿದ್ದು ಯುವಕರು ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯದಲ್ಲಿಕೈ ಜೋಡಿಸಬೇಕು ಎಂದು ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಹೇಳಿದರು.
Vijaya Karnataka Web donate blood and save lives
ರಕ್ತದಾನ ಮಾಡಿ ಜೀವ ಉಳಿಸಿ


ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿಎಸ್‌.ಡಿ.ಎಂ. ಪದವಿ ಕಾಲೇಜಿನ ರೆಡ್‌ಕ್ರಾಸ್‌, ಎನ್‌ಎಸ್‌ಎಸ್‌, ಎನ್‌ಸಿಸಿ ಹಾಗೂ ಲಿಯೋ ಕ್ಲಬ್‌ ಘಟಕಗಳ ಸಹಯೋಗದಲ್ಲಿಬುಧವಾರ ನಡೆದ ರಕ್ತದಾನ ಶಿಬಿರದಲ್ಲಿಮಾತನಾಡಿದ ಅವರು ರಕ್ತದಾನದಿಂದ ಹಲವರ ಜೀವ ಉಳಿಯುತ್ತದೆ ಎಂದರು.

ಆಸ್ಪತ್ರೆಯ ಆಪ್ತ ಸಮಾಲೋಚಕ ವಿನಾಯಕ ಪಟಗಾರ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತು ಇನ್ನೊಂದಿಲ್ಲ. ದಾನಿಗಳು ನೀಡಿದ ರಕ್ತದಿಂದ ಹಲವು ಜನರಿಗೆ ಜೀವ ದಾನ ಸಿಗುತ್ತಿದೆ. ಪೌಷ್ಟಿಕ ಆಹಾರ ಸೇವನೆ ಮಾಡಿ ಯುವಕರು ತಮ್ಮ ರಕ್ತದಲ್ಲಿನ ಹಿಮೊಗ್ಲೋಬಿನ್‌ ಪ್ರಮಾಣ ಹೆಚ್ಚಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯೆ ಡಾ. ವಿಜಯಲಕ್ಷಿತ್ರ್ಮ ಎಂ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರೊ.ಎಂ.ಜಿ.ಹೆಗಡೆ, ಸುಮುಖ ಯಾಜಿ ಉಪಸ್ಥಿತರಿದ್ದರು. ಡಾ.ಡಿ.ಎಲ್‌.ಹೆಬ್ಬಾರ ಸ್ವಾಗತಿಸಿದರು. ಪ್ರೊ. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಜಿ.ಎಸ್‌.ಹೆಗಡೆ ವಂದಿಸಿದರು.

ನಂತರ ತಾಲೂಕು ಆಸ್ಪತ್ರೆಯಲ್ಲಿವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಪ್ರತಿ ವಿದ್ಯಾರ್ಥಿ 350 ಮಿ.ಲೀ.ನಂತೆ ಒಟ್ಟೂ 50 ವಿದ್ಯಾರ್ಥಿಗಳು 1750 ಮಿ.ಲೀ. ರಕ್ತದಾನ ಮಾಡಿದರು. ಡಾ. ರಿಜ್ವಾನ್‌ ನೇತೃತ್ವದಲ್ಲಿಶಿಬಿರ ನಡೆಯಿತು. ಸಿಬ್ಬಂದಿಗಳಾದ ಮಹಾಂತೇಶ, ಅರುಣ, ವಿದ್ಯಾ ರಕ್ತ ದಾನದಲ್ಲಿಸಹಕರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ