ಆ್ಯಪ್ನಗರ

ದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಸ್ವರ್ಣವಲ್ಲೀ ಶ್ರೀ

ಯಲ್ಲಾಪುರ : ಯಜ್ಞದಲ್ಲಿ ಸಮರ್ಪಣೆ ಮಾಡಿರುವುದು, ಸಕಾಲದಲ್ಲಿ ಸತ್ಪಾತ್ರರಿಗೆ ದಾನ ಮಾಡಿರುವುದು ಎಂದೂ ವ್ಯರ್ಥವಾಗುವುದಿಲ್ಲ. ಇವು ದೀರ್ಘಕಾಲ ಫಲ ನೀಡಬಲ್ಲವು. ಪರ್ವಕಾಲದಲ್ಲಿ ಅರ್ಹರಿಗೆ ಮಾಡಿದ ದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

Vijaya Karnataka 15 Mar 2019, 5:00 am
ಯಲ್ಲಾಪುರ : ಯಜ್ಞದಲ್ಲಿ ಸಮರ್ಪಣೆ ಮಾಡಿರುವುದು, ಸಕಾಲದಲ್ಲಿ ಸತ್ಪಾತ್ರರಿಗೆ ದಾನ ಮಾಡಿರುವುದು ಎಂದೂ ವ್ಯರ್ಥವಾಗುವುದಿಲ್ಲ. ಇವು ದೀರ್ಘಕಾಲ ಫಲ ನೀಡಬಲ್ಲವು. ಪರ್ವಕಾಲದಲ್ಲಿ ಅರ್ಹರಿಗೆ ಮಾಡಿದ ದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
Vijaya Karnataka Web donation can not be constructed swarnavalli sri
ದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಸ್ವರ್ಣವಲ್ಲೀ ಶ್ರೀ


ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಾಲಯದ ಆವಾರದಲ್ಲಿ ಗುರುವಾರ ಸಂಜೆ ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲಿಕಾ ಗ್ರಂಥದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಮನುಷ್ಯನ ಜೀವನದಲ್ಲಿ ಯೌವನ, ಹಣ, ಆಯುಷ್ಯ ಅಶಾಶ್ವತವಾದವು. ಆದರೆ ವೈರಾಗ್ಯದಲ್ಲಿ ಯಾವುದೇ ಭಯ, ಆತಂಕ ಇರುವುದಿಲ್ಲ. ಭೋಗ ಜೀವನ ನಡೆಸುವವರಿಗೆ ರೋಗದ ಭಯ, ರೂಪಕ್ಕೆ ಯೌವ್ವನ ಭಯ, ದೇಹಕ್ಕೆ ಮರಣ ಭಯ ಇದ್ದೇ ಇದೆ. ಆದರೆ ಯೋಗಿಗಳಿಗೆ ಇವ್ಯಾವ ಭಯಗಳೂ ಇಲ್ಲ. ತ್ಯಾಗಿಗಳಿಗೆ ಎಲ್ಲ ದುಃಖಗಳನ್ನು ಗೆಲ್ಲುವ ಸಾಮರ್ಥ್ಯ‌ ಇದೆ. ಸತತವಾಗಿ ಸಂತುಷ್ಟನಾಗಿರುವ ಯೋಗಿಗಳು ಯಾವುದರ ಭಯವೂ ಇಲ್ಲದೇ ಇರಬಲ್ಲರು. ತ್ಯಾಗದಿಂದ ಅಮೃತತ್ವ ಪ್ರಾಪ್ತಿಯಾಗುತ್ತದೆ ಎಂದರು.

ಬೇರೆಯವರ ಅಧೀನರಾಗಿ ಬದುಕುವುದು ನರಕಕ್ಕೆ ಸಮಾನ. ಕೃಷಿ ನಿಜವಾದ, ಸ್ವತಂತ್ರವಾದ ಜೀವನವಾಗಿದೆ ಎಂದು ವಿವರಿಸಿದರು.

ಶ್ರೀಗಳ 108 ಪಾದಪೂಜೆ : ಗುರುಭವನ ಸಮರ್ಪಣೆ ಹಾಗೂ ಆದಿಶಂಕರರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಾಲಯದಲ್ಲಿ ಶ್ರೀಗಳ 108 ಪಾದಪೂಜೆ ನೆರವೇರಿಸಲಾಯಿತು. ಯಲ್ಲಾಪುರ, ಕುಳಿನಾಡು, ಗುಂದ, ಚಿನ್ನಾಪುರ ಸೀಮೆಯ ಭಕ್ತರು ಪಾದಪೂಜೆ ನೆರವೇರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ