ಆ್ಯಪ್ನಗರ

ಮಹಾತ್ಮರ ಸಂದೇಶದಿಂದ ಸಂಶಯ ದೂರ

ಶಿರಸಿ : ಮಹಾತ್ಮರ ಚಿಂತನೆ, ಸಂದೇಶಗಳೇ ಮನಸ್ಸಿಗೆ ದಾರಿ ತೋರುತ್ತವೆ. ಮನಸ್ಸಿನ ಸಂಶಯ ದೂರ ಮಾಡುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

Vijaya Karnataka 26 Jan 2020, 5:00 am
ಶಿರಸಿ : ಮಹಾತ್ಮರ ಚಿಂತನೆ, ಸಂದೇಶಗಳೇ ಮನಸ್ಸಿಗೆ ದಾರಿ ತೋರುತ್ತವೆ. ಮನಸ್ಸಿನ ಸಂಶಯ ದೂರ ಮಾಡುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
Vijaya Karnataka Web doubt away from mahatmas message
ಮಹಾತ್ಮರ ಸಂದೇಶದಿಂದ ಸಂಶಯ ದೂರ


ನಗರದ ಯೋಗ ಮಂದಿರದಲ್ಲಿಪುರಂದರಾಚ್ಯುತ ಕಲಾ ಸಂಗಮ ಸಂಸ್ಥೆ ಶುಕ್ರವಾರ ಏರ್ಪಡಿಸಿದ್ದ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.

ಮನಸ್ಸಿನ ಸಂಶಯ ಎಂಬ ಪಿಶಾಚಿಗೆ ಒಳಗಾದರೆ ಹೊರಗೆ ಬರುವುದು ಕಷ್ಟ. ಬೇರೆಯವರ ವ್ಯವಹಾರದಲ್ಲಿಸಂಶಯ ಕೆಲವೊಮ್ಮೆ ಕಾಡುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲ. ದೇವರಲ್ಲಿಸಂಶಯ ಬಂದರೆ ಏಕಾಗ್ರತೆ ಬರುವುದಿಲ್ಲ.

ಮಹಾತ್ಮರ ಚಿಂತನೆ, ಸಂದೇಶಗಳು ಮನಸ್ಸಿನಲ್ಲಿಹುದುಗಿರುವ ಅನೇಕ ಸಂಶಯ ದೂರ ಮಾಡಿ ನೆಮ್ಮದಿ ನೀಡುತ್ತವೆ ಎಂದರು.

ದೇವರಲ್ಲಿಶ್ರದ್ಧೆಯನ್ನು ಇಟ್ಟುಕೊಳ್ಳಬೇಕು. ದೇವರ ಮೇಲಿನ ಭಕ್ತಿ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇವರ ವಿಷಯದಲ್ಲಿಸಂದಿಗ್ಧತೆ, ಸಂಶಯ ಇಟ್ಟುಕೊಳ್ಳಬಾರದು ಎಂದರು.

ವ್ಯಕ್ತಿಗೆ ಮೊದಲ ಹಂತ ಮೂರ್ತಿಯಲ್ಲಿದೇವರು, ಮನಸ್ಸಿನಲ್ಲಿದೇವರು ಎರಡನೇ ಹಂತ, ಎಲ್ಲರಲ್ಲೂದೇವರನ್ನು ಕಾಣುವುದು ಮೂರನೇ ಹಂತ. ಯಾರಿಗೆ ಶ್ರದ್ಧ ಗಟ್ಟಿಯಾಗಿದೆ, ಅವರು ಇನ್ನೊಬ್ಬರಲ್ಲಿಶ್ರದ್ಧೆ ಹುಟ್ಟಿಸುತ್ತಾನೆ. ಪ್ರಾತ:ಸ್ಮರಣೀಯರ, ಮಹಾತ್ಮರ ಸ್ಮರಣೆ ಕೂಡ ಶ್ರದ್ಧೆ ಹುಟ್ಟಿಸುತ್ತದೆ ಎಂದರು.

ಸಂಘಟಕ ಹರಿಕೀರ್ತನಾ ದಾಸ ಹೀಪನಳ್ಳಿ ನಾರಾಯಣ ದಾಸ್‌, ಏಳು ವರ್ಷಗಳಿಂದ ದಾಸರ ಆರಾಧನೆ ಮಾಡುತ್ತಿದ್ದೇವೆ. ಮಾತೃಮಂಡಳಿ ಪುರಂದರ ವಿಠಲಗಾನ ಕೂಡ ಮಾಡಿದ್ದೇವೆ ಎಂದರು. ಮಾತೃಮಂಡಳಿ, ಯೋಗ ಮಂದಿರದ ಪ್ರಮುಖರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ