ಆ್ಯಪ್ನಗರ

ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ

ಮುಂಡಗೋಡ : ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ನಡೆಸಲಾಯಿತು.

Vijaya Karnataka 1 Aug 2019, 5:00 am
ಮುಂಡಗೋಡ : ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ನಡೆಸಲಾಯಿತು.
Vijaya Karnataka Web KWR-31MND2


ಪಟ್ಟಣದ ಎಲ್‌ವಿಕೆ ಸಭಾ ಭವನದಲ್ಲಿ ಶಿಕ್ಷ ಣ ಇಲಾಖೆ, ಸಂಗಮ ಸೇವಾ ಸಂಸ್ಥೆ, ವೆಸ್ಟ ಕೋಸ್ಟ ಪೇಪರ್‌ ಮಿಲ್‌ ದಾಂಡೇಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರವಾರ ಇವರ ಸಹಯೋಗದೊಂದಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಚಿಗಳ್ಳಿ ಸರಕಾರಿ ಪ್ರೌಢ ಶಾಲೆಯ ಗಜೆಂದ್ರ ಮಾಣುಬಾಯಿ ಪ್ರಥಮ, ರೋಟರಿ ಪ್ರೌಢಶಾಲೆಯ ತೇಜು ಪಿ. ಕರಿಗಾರ ದ್ವಿತೀಯ, ಚಿಗಳ್ಳಿ ಸರಕಾರಿ ಪ್ರೌಢ ಶಾಲೆಯ ಸುದೀಪ ಕುಸೂರು ತೃತಿಯ ಹಾಗೂ ಪ್ರೋತ್ಸಾಹದಾಯಕ ಪ್ರಶಸ್ತಿಯನ್ನು ಅಂದಲಗಿ ಸರಕಾರಿ ಪ್ರೌಢಶಾಲೆ ರವಿ ಮಂಜುನಾಥ ಕಮ್ಮಾರ, ರೋಟರಿ ಪ್ರೌಢಶಾಲೆಯ ಆಕಾಶ ಲಚ್ಚಿ ಪಡೆದುಕೊಂಡರು. ನಿರ್ಣಾಯಕರಾಗಿ ಸೋಮಶೇಖರ್‌ ಲಮಾಣಿ, ರಾಮಚಂದ್ರ ಕಲಾಲ, ನಾಗರಾಜ ಕಳಲಕೊಂಡ ಆಗಮಿಸಿದ್ದರು. ಈ ವೇಳೆ ಕ್ಷೇತ್ರ ಶಿಕ್ಷ ಣಾಧಿಕಾರಿ ಡಿ.ಎಂ.ಬಸವರಾಜಪ್ಪ, ಎಂ.ಎನ್‌.ರಾಠೋಡ ರವೀಂದ್ರ ಶೆಟ್ಟಿ, ನರೇಶ ಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ