ಆ್ಯಪ್ನಗರ

ಸಮುದ್ರ ತಡೆಗೋಡೆ ನಿರ್ಮಾಣಕ್ಕೆ ಚಾಲನೆ

ಕುಮಟಾ: ತಾಲೂಕಿನ ಕಾಗಲ ಗ್ರಾಮದ ಅಘ್ನಾಶಿನಿ ಕರಿಕಲ್‌ನಲ್ಲಿಎರಡು ಕೋಟಿ ರೂ. ವೆಚ್ಚದ ಕಡಲು ಪ್ರತಿಬಂಧಕ ತುರ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಸೋಮವಾರ ಚಾಲನೆ ನೀಡಿದರು.

Vijaya Karnataka 17 Dec 2019, 5:00 am
ಕುಮಟಾ: ತಾಲೂಕಿನ ಕಾಗಲ ಗ್ರಾಮದ ಅಘ್ನಾಶಿನಿ ಕರಿಕಲ್‌ನಲ್ಲಿಎರಡು ಕೋಟಿ ರೂ. ವೆಚ್ಚದ ಕಡಲು ಪ್ರತಿಬಂಧಕ ತುರ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಸೋಮವಾರ ಚಾಲನೆ ನೀಡಿದರು.
Vijaya Karnataka Web drive to the construction of the sea barrier
ಸಮುದ್ರ ತಡೆಗೋಡೆ ನಿರ್ಮಾಣಕ್ಕೆ ಚಾಲನೆ


ನಂತರ ಮಾತನಾಡಿದ ಅವರು, ಅಘ್ನಾಶಿನಿ ಭಾಗದಲ್ಲಿನಾನು ಮೊದಲಿನ ಶಾಸಕತ್ವ ಅಧಿಕಾರದಲ್ಲಿದ್ದಾಗನಿಂದಲೇ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇಲ್ಲಿಯ ಜನರ ಅನುಕೂಲಕ್ಕಾಗಿ ಈ ಕಾರ್ಯ ನಿರ್ವಹಿಸುತ್ತಿದ್ದೇನೆ. ಜನರು ಸರಕಾರ ನೀಡಿದ ಸೌಲಭ್ಯ ಪಡೆದು ಭವಿಷ್ಯದಲ್ಲಿಪುನಃ ತೊಂದರೆಗೆ ಒಳಗಾಗದೆ ಬೃಹತ್‌ ಕಾಮಗಾರಿಗಳನ್ನು ಸಂರಕ್ಷಿಸಿಕೊಂಡು ಹೋಗಬೇಕು. ಜನರ ಸಮಸ್ಯೆಗಳ ಪರಿಹಾರಕ್ಕೆ ನಾನು ಸದಾ ಸಿದ್ಧ ಎಂದರು. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ಜಿಲ್ಲಾಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ್‌ ನಾಯ್ಕ ಮಾತನಾಡಿ, ಮಳೆಗಾಲದಲ್ಲಿಅರಬ್ಬೀ ಸಮುದ್ರ ಉಕ್ಕಿದಾಗ ಇಲ್ಲಿಯ ಜನರಿಗೆ ಸಮಸ್ಯೆ ಸದಾ ಕಾಡುತ್ತಿತ್ತು. ಈ ಕಾಮಗಾರಿಯಿಂದ ಜನರ ಸಮಸ್ಯೆಗೆ ತೃಪ್ತಿದಾಯಕ ಪರಿಹಾರ ದೊರೆತಿದೆ ಎಂದರು. ತಾಪಂ ಸದಸ್ಯ ರತ್ನಾಕರ್‌ ನಾಯ್ಕ, ಗ್ರಾಪಂ ಅಧ್ಯಕ್ಷೆ ಸೀತಾ ಎಂ.ಆಗೇರ್‌, ಉಪಾಧ್ಯಕ್ಷ ರವಿ ಪಂಡಿತ್‌, ಗ್ರಾಪಂ ಸದಸ್ಯೆ ಓಮಿ ಹರಿಕಾಂತ್‌, ಲಂಬೋಧರ ನಾಯ್ಕ, ಶಶಿಕಾಂತ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ