ಗೋಕರ್ಣ : ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಗೋಕರ್ಣ ಹಾಗೂ ಸುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ನಾಲ್ಕನೇ ವರ್ಷದ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಸಮೀಪದ ತಿಪ್ಪಸಗಿ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಡಳಿತ ಅಧಿಕಾರಿ ಜಿ.ಕೆ.ಹೆಗಡೆ ದೇವಾಲಯದ ವತಿಯಿಂದ ಜರುಗುತ್ತಿರುವ ಈ ಸಮಾಜಮುಖಿ ಯೋಜನೆಯ ಸದುಪಯೋಗ ಪಡೆಯುವಂತೆ ಕೋರಿದರು. ಈ ಸಂದರ್ಭದಲ್ಲಿ ಶಿವರಾಮ ಮಯ್ಯರ್, ಲಂಬೋದರ ಸಭಾಹಿತ, ಜಿ.ವಿ.ಹೆಗಡೆ ಹಾಗೂ ತಿಪ್ಪಸಗಿ, ಕಡಿಮೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮೀಪದ ತಿಪ್ಪಸಗಿ ಗ್ರಾಮದಲ್ಲಿ ನೀರು ವಿತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಡಳಿತ ಅಧಿಕಾರಿ ಜಿ.ಕೆ.ಹೆಗಡೆ ದೇವಾಲಯದ ವತಿಯಿಂದ ಜರುಗುತ್ತಿರುವ ಈ ಸಮಾಜಮುಖಿ ಯೋಜನೆಯ ಸದುಪಯೋಗ ಪಡೆಯುವಂತೆ ಕೋರಿದರು. ಈ ಸಂದರ್ಭದಲ್ಲಿ ಶಿವರಾಮ ಮಯ್ಯರ್, ಲಂಬೋದರ ಸಭಾಹಿತ, ಜಿ.ವಿ.ಹೆಗಡೆ ಹಾಗೂ ತಿಪ್ಪಸಗಿ, ಕಡಿಮೆ ಗ್ರಾಮಸ್ಥರು ಉಪಸ್ಥಿತರಿದ್ದರು.