ಆ್ಯಪ್ನಗರ

ಮಳೆಗಾಲ ವೇಳೆಯಷ್ಟೇ ನೀರಿನ ಝರಿ, ಶಾಶ್ವತವಾಗಿಸುವ

ಕುಮಟಾ : ಖಂಡಗಾರದ ಗುತ್ತಲ ಗ್ರಾಮದಲ್ಲಿಯ ಈಜುಕೊಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಮನಮೋಹಕ ತಾಣವಾಗಿದೆ. ಮಿರ್ಜಾನ ಗ್ರಾ.ಪಂ. ವ್ಯಾಪ್ತಿಯ ಖಂಡಗಾರ-ಹೆಗಲೆ ಕ್ರಾಸ್‌ ಬಳಿ ಇರುವ ನೀರು ತುಂಬಿದ ಡ್ಯಾಮ್‌ ಯುವಕರನ್ನು ತನ್ನತ್ತ ಸೆಳೆಯುತ್ತಿದೆ.

Vijaya Karnataka 13 Jan 2020, 5:00 am
ಕುಮಟಾ : ಖಂಡಗಾರದ ಗುತ್ತಲ ಗ್ರಾಮದಲ್ಲಿಯ ಈಜುಕೊಳ ಪ್ರವಾಸಿಗರನ್ನು ಕೈಬೀಸಿ ಕರೆಯುವ ಮನಮೋಹಕ ತಾಣವಾಗಿದೆ. ಮಿರ್ಜಾನ ಗ್ರಾ.ಪಂ. ವ್ಯಾಪ್ತಿಯ ಖಂಡಗಾರ-ಹೆಗಲೆ ಕ್ರಾಸ್‌ ಬಳಿ ಇರುವ ನೀರು ತುಂಬಿದ ಡ್ಯಾಮ್‌ ಯುವಕರನ್ನು ತನ್ನತ್ತ ಸೆಳೆಯುತ್ತಿದೆ.
Vijaya Karnataka Web during the rainy season the water flows perpetuates
ಮಳೆಗಾಲ ವೇಳೆಯಷ್ಟೇ ನೀರಿನ ಝರಿ, ಶಾಶ್ವತವಾಗಿಸುವ


ಪಶ್ಚಿಮ ಘಟ್ಟದ ಹಸಿರು ಕಂಗೊಳಿಸುವ ಅರಣ್ಯದ ನಿಶ್ಯಬ್ಧ ವಾತಾವರಣದಲ್ಲಿದೆ ಪ್ರಕೃತಿ ಸೌಂದರ್ಯದ ಗಣಿ ಖಂಡಗಾರ ಗ್ರಾಮ. ಮಿರ್ಜಾನದ ರಾಷ್ಟ್ರೀಯ ಹೆದ್ದಾರಿ 66ರಿಂದ ಬಲಕ್ಕೆ 6 ಕಿ.ಮೀ. ದೂರದಲ್ಲಿಖಂಡಗಾರ ಕುಗ್ರಾಮ ರಸ್ತೆಯಿಂದ ಅಂಕುಡೊಂಕಾದ ರಸ್ತೆ ದಾಟುತ್ತಲೇ ಹೆಗಲೆ ಗುತ್ತಲ ಗ್ರಾಮ ಬರುತ್ತದೆ. ಇಲ್ಲಿಅರಣ್ಯ ಇಲಾಖೆ ಚಿಕ್ಕ ಡ್ಯಾಮ್‌ ನಿರ್ಮಿಸಿದೆ. ಮಳೆಗಾಲದಲ್ಲಿಅರಣ್ಯದಿಂದ ಹರಿದು ಬರುವ ನೀರು ಹಂಚಿ ಹೋಗಬಾರದೆಂದು ಡ್ಯಾಮ್‌ ಕಟ್ಟಲಾಗಿದೆ. ಹೀಗೆ ಅರಣ್ಯದಿಂದ ಹರಿದು ಬರುವ ನೀರು ಡ್ಯಾಂ ಕಟ್ಟಿರುವ ಪ್ರದೇಶದಲ್ಲಿಸಂಗ್ರಹವಾಗುತ್ತದೆ. ಅತಿಯಾದ ಮಳೆಯಿಂದ ಹರಿದು ಬರುವ ನೀರು ಡ್ಯಾಮಿನ ಮೇಲಂಚಿನಿಂದ ಹರಿದು ಬೀಳುವ ದೃಶ್ಯ ಚಿತ್ತ ಸೆಳೆಯುತ್ತದೆ. ಮಳೆಗಾಲದಲ್ಲಿಈಜು ಪ್ರಿಯರಿಗೆ ಈ ನೀರು ತಂಪಿನ ಅನುಭವ ನೀಡುತ್ತದೆ. ಹೀಗಾಗಿ ಜುಲೈ, ಆಗಸ್ಟ್‌ ತಿಂಗಳಲ್ಲಿಇಲ್ಲಿಗೆ ಬರುವ ಪ್ರವಾಸಿಗರು ಮೈಮರೆತು ಈಜಾಡುತ್ತಾರೆ.

ಮಳೆಗಾಲದಲ್ಲಿಹರಿದು ಹೋಗುತ್ತಿರುವ ನೀರಿಗೆ ಅಡ್ಡಲಾಗಿ ಕಟ್ಟಿದ ಡ್ಯಾಮ್‌ ನೀರು ನಿಯಮಿತ ಪ್ರಮಾಣದಲ್ಲಿಹರಿದು ಹೋಗಿ ಕೆಳಗಡೆ ಝರಿ-ಝರಿಯಾಗಿ ಬೀಳುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ನೀರಿನಲ್ಲಿಈಜಾಡಬಹುದು, ಈಜು ಕಲಿಯಬಹುದು. ಬೆಂಗಳೂರು ಮುಂತಾದ ದೂರದ ಊರುಗಳಿಂದ ಯುವಕರು ಇಲ್ಲಿಗೆ ಬರುತ್ತಾರೆ. ತಕ್ಕ ಮಟ್ಟಿಗೆ ರಸ್ತೆಗಳು ಚೆನ್ನಾಗಿದ್ದು, ನೀರು ಇರುವಾಗ ನಿತ್ಯ ಸುಮಾರು ನೂರಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಇಕೋ ಟೂರಿಸಮ್‌ ಮೂಲಕ ಇಲಾಖೆ ಸಹಯೋಗದಲ್ಲಿಪ್ರವಾಸೋದ್ಯಮ ಇಲಾಖೆ ದೊಡ್ಡ ಪ್ರಮಾಣದಲ್ಲಿಡ್ಯಾಮ್‌ ಕಟ್ಟಿ ನೀರು ಸಂಗ್ರಹಿಸಿದರೆ ವರ್ಷವಿಡೀ ಇಲ್ಲಿಪ್ರವಾಸಿಗರು ತಂಡೋಪ ತಂಡವಾಗಿ ಲಗ್ಗೆ ಇಡುವುದರಲ್ಲಿಸಂಶಯವಿಲ್ಲ. ಇಂತಹ ಪ್ರಕೃತಿಪೂರಕವಾದ ಪ್ರವಾಸಿ ತಾಣಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಾಗಿದೆ. ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಿಯಾಶೀಲಗೊಂಡರೆ ಇಂತಹ ಪ್ರವಾಸಿ ತಾಣಗಳು ಅಭಿವೃದ್ದಿಗೊಂಡು ಉದ್ಯೋಗಕ್ಕೂ ಕಾಯಕಲ್ಪ ನೀಡಿದಂತಾಗುತ್ತದೆ. ಮಳೆಗಾಲ ಮುಗಿದ ತಿಂಗಳೊಪ್ಪತ್ತು ಮಾತ್ರ ಇಲ್ಲಿನೀರು ಹರಿಯುತ್ತದೆ. ನಂತರ ಬತ್ತುತ್ತದೆ. ಹೀಗಾಗಿ ನೀರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿಕಾರ್ಯಯೋಜನೆ ರೂಪಿಸಬೇಕಾಗಿದೆ. ಅಲ್ಲದೇ ಡ್ಯಾಮಿನ ಸುತ್ತ ಮದ್ಯದ ಬಾಟಲಿ ಸೇರಿದಂತೆ ತ್ಯಾಜ್ಯ ವಸ್ತುಗಳು ಬಿದ್ದಿದ್ದು, ಇಲ್ಲಿಸ್ವಚ್ಛತೆ ಕಾಪಾಡುವುದು ಅಗತ್ಯವಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ