ಆ್ಯಪ್ನಗರ

ಧೂಳುಮಯ ಮುಖ್ಯ ರಸ್ತೆ

ದಾಂಡೇಲಿ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಜೆ.ಎನ್‌. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಧೂಳುಮಯವಾಗಿದೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯು ಹೊಂಡಮಯವಾಗಿದೆ. ಹೊಂಡಮಯ ರಸ್ತೆಯಿಂದಾಗಿ ದಿನನಿತ್ಯ ಬೈಕ್‌ ಸವಾರರು ಸ್ಕಿಡ್‌ ಆಗಿ ಬೀಳುವುದಲ್ಲದೇ ಅಪಘಾತಕ್ಕೆ ಎಡೆಮಾಡಿಕೊಟ್ಟಂತಾಗಿದೆ. ದಿನನಿತ್ಯ ಇದೇ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಬಸ್‌ ಅಥವಾ ಲಾರಿಯಂತಹ ದೊಡ್ಡ ವಾಹನ ಒಮ್ಮೆ ಹಾದು ಹೋದರೆ ರಸ್ತೆ ಧೂಳಿನಿಂದ ಕಾಣದಂತಾಗುತ್ತದೆ. ಪಾದಚಾರಿಗಳಂತೂ ಮೂಗು ಮುಚ್ಚಿಕೊಂಡೇ ಸಾಗಬೇಕಾಗಿದೇ. ಧೂಳೆದ್ದಿರುವ ಈ ರಸ್ತೆಯಿಂದಾಗಿ ರಸ್ತೆ ಬದಿಯಲ್ಲಿರುವ ಅಂಗಡಿಕಾರರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆಗಳು ಗಮನ ಹರಿಸಿಲ್ಲ.

Vijaya Karnataka 24 Aug 2019, 5:00 am
ದಾಂಡೇಲಿ: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಜೆ.ಎನ್‌. ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಧೂಳುಮಯವಾಗಿದೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆಯು ಹೊಂಡಮಯವಾಗಿದೆ. ಹೊಂಡಮಯ ರಸ್ತೆಯಿಂದಾಗಿ ದಿನನಿತ್ಯ ಬೈಕ್‌ ಸವಾರರು ಸ್ಕಿಡ್‌ ಆಗಿ ಬೀಳುವುದಲ್ಲದೇ ಅಪಘಾತಕ್ಕೆ ಎಡೆಮಾಡಿಕೊಟ್ಟಂತಾಗಿದೆ. ದಿನನಿತ್ಯ ಇದೇ ರಸ್ತೆಯಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಬಸ್‌ ಅಥವಾ ಲಾರಿಯಂತಹ ದೊಡ್ಡ ವಾಹನ ಒಮ್ಮೆ ಹಾದು ಹೋದರೆ ರಸ್ತೆ ಧೂಳಿನಿಂದ ಕಾಣದಂತಾಗುತ್ತದೆ. ಪಾದಚಾರಿಗಳಂತೂ ಮೂಗು ಮುಚ್ಚಿಕೊಂಡೇ ಸಾಗಬೇಕಾಗಿದೇ. ಧೂಳೆದ್ದಿರುವ ಈ ರಸ್ತೆಯಿಂದಾಗಿ ರಸ್ತೆ ಬದಿಯಲ್ಲಿರುವ ಅಂಗಡಿಕಾರರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆಗಳು ಗಮನ ಹರಿಸಿಲ್ಲ.
Vijaya Karnataka Web dusty main road
ಧೂಳುಮಯ ಮುಖ್ಯ ರಸ್ತೆ


ರಸ್ತೆಯನ್ನು ದುರಸ್ತಿ ಮಾಡಿದರೂ, ತುರಾತುರಿಯಲ್ಲಿ ಮಾಡಿ ಸಮರ್ಪಕವಾಗಿ ಕಾಮಗಾರಿ ಮಾಡುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ. ಈ ರಸ್ತೆ ಯಾವಾಗ ನವೀಕರಣಗೊಳ್ಳುವುದೋ ಕಾದು ನೊಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ