ಆ್ಯಪ್ನಗರ

ಆರೋಗ್ಯವಂತ ಬದುಕಿಗಾಗಿ ಪೌಷ್ಠಿಕ ಆಹಾರ ಸೇವಿಸಿ

ಶಿರಸಿ : ನಗರದ ಕೆ.ಹೆಚ್‌.ಬಿ ಕಾಲೋನಿಯ ಗಣಪತಿ ಸಮುದಾಯ ಭವನದಲ್ಲಿಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಅರಿಶಿಣ ಕುಂಕುಮ ಹಾಗೂ ಪೌಷ್ಠಿಕ ಆಹಾರಮೇಳ ನಡೆಯಿತು.

Vijaya Karnataka 2 Sep 2019, 5:00 am
ಶಿರಸಿ : ನಗರದ ಕೆ.ಹೆಚ್‌.ಬಿ ಕಾಲೋನಿಯ ಗಣಪತಿ ಸಮುದಾಯ ಭವನದಲ್ಲಿಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಅರಿಶಿಣ ಕುಂಕುಮ ಹಾಗೂ ಪೌಷ್ಠಿಕ ಆಹಾರಮೇಳ ನಡೆಯಿತು.
Vijaya Karnataka Web SRS-1SRS5


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾನಿರ್ದೇಶಕ ಶೇಖರ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಯೊಬ್ಬ ಮಹಿಳೆಯು ಪೌಷ್ಠಿಕ ಆಹಾರ ಬಳಕೆ ಮಾಡಿ ಕುಟುಂಬ ಸದಸ್ಯರ ಆರೋಗ್ಯ ಕಾಪಾಡುವುದರ ಜತೆ ಮಕ್ಕಳಿಗೆ ಉತ್ತಮ ಆರೋಗ್ಯದೊಂದಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.

ಉಪನ್ಯಾಸಕಿ ಕೋಮಲಾ ಭಟ್‌ ಮಾತನಾಡಿ, ಮಹಿಳೆಯರು ಕುಟುಂಬ ನಿರ್ವಹಣೆಯೊಂದಿಗೆ ತಮ್ಮಲ್ಲಿರುವ ಕೌಶಲ್ಯ ಗುರುತಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವುರೊಂದಿಗೆ, ಆರೋಗ್ಯವಂತ ಬದುಕಿಗಾಗಿ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಸಮಾಜದಲ್ಲಿಮಹಿಳೆಯರು ಆತ್ಮಸ್ಥೆತ್ರೖರ್ಯದಿಂದ ಬದುಕಲು ಕಾರ್ಯಕ್ರಮ ನೆರವಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷೆ ಉಷಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಅನಿತಾ ಪರ್ವೇತ್‌ಕರ್‌ ಉಪಸ್ಥಿತರಿದ್ದರು. ಗೀತಾ ಎಸ್‌. ನಿರೂಪಿಸಿದರು. ದೀಪಾ ದೇವಳಿ ವಂದಿಸಿದರು. ಇದೇ ಸಂದರ್ಭದಲ್ಲಿಜ್ಞಾನವಿಕಾಸ ಕೇಂದ್ರದ ಮಹಿಳೆಯರಿಗೆ ಪೌಷ್ಠಿಕ ಆಹಾರ, ರಂಗೋಲಿ, ಅಲಂಕಾರಿಕ ವಸ್ತುಗಳ ತಯಾರಿ ಸ್ಪರ್ಧೆ ಆಯೋಜಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ