ಆ್ಯಪ್ನಗರ

ಯಾಣ ಸಂರಕ್ಷಿತ ಪ್ರದೇಶವಾಗಿಸಲು ಪ್ರಯತ್ನ: ಅನಂತ ಹೆಗಡೆ ಆಶೀಸರ

ಮಲೆನಾಡಿನ ರೈತರ ತೋಟಗಳಿಗೆ ಮಂಗನ ಹಾವಳಿಯಿಂದ ಉಂಟಾಗುವ ನಷ್ಟ ಭರಿಸಲು ಸರಕಾರದ ಹಂತದಲ್ಲಿಕ್ರಮವಾಗಬೇಕಿದೆ. ಗದ್ದೆ ಹಾಗೂ ತೋಟಗಳಿಗೆ ನಿಗದಿತ ಕ್ರಿಮಿನಾಶಕ ಹಾಗೂ ರಸಗೊಬ್ಬರ ಬಳಕೆಗೆ ಕೃಷಿ ಇಲಾಖೆ ಮುಂದಾಗಬೇಕಿದೆ

Vijaya Karnataka 28 Nov 2020, 6:17 pm
ಕಾರವಾರ: ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಕುಮಟಾದ ಯಾಣಕ್ಕೆ ಜೀವ ವೈವಿಧ್ಯ ಸಂರಕ್ಷಿತ ಪ್ರದೇಶ ಎಂಬ ಮಾನ್ಯತೆ ನೀಡುವ ಬಗ್ಗೆ ಪ್ರಯತ್ನ ನಡೆಸಲಾಗಿದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
Vijaya Karnataka Web ಯಾಣ
ಯಾಣ


ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಶುಕ್ರವಾರ ಅವರು ಮಾತನಾಡಿದರು. ಮಲೆನಾಡಿನ ರೈತರ ತೋಟಗಳಿಗೆ ಮಂಗನ ಹಾವಳಿಯಿಂದ ಉಂಟಾಗುವ ನಷ್ಟ ಭರಿಸಲು ಸರಕಾರದ ಹಂತದಲ್ಲಿಕ್ರಮವಾಗಬೇಕಿದೆ. ಗದ್ದೆ ಹಾಗೂ ತೋಟಗಳಿಗೆ ನಿಗದಿತ ಕ್ರಿಮಿನಾಶಕ ಹಾಗೂ ರಸಗೊಬ್ಬರ ಬಳಕೆಗೆ ಕೃಷಿ ಇಲಾಖೆ ಮುಂದಾಗಬೇಕಿದೆ ಎಂದರು.

ಗೋಕರ್ಣ ಸಾಣಿಕಟ್ಟಾದ ಉಪ್ಪಿನ ಉತ್ಪಾದನೆಗೆ ವಿಶೇಷ ಮಾನ್ಯತೆ ನೀಡುವ ಬಗ್ಗೆ ಕ್ರಮವಾಗಬೇಕಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಕಾರವಾರ ಅಂಕೋಲಾ ನಡುವಿನ ಗುಡ್ಡವನ್ನು ಹಸಿರು ವಲಯ ಎಂದು ಘೋಷಿಸಿ, ಇದ್ದ ಪರಿಸರ ಕಾಪಾಡುವ ಕುರಿತು ಕ್ರಮವಾಗಬೇಕಿದೆ. ಕುಮಟಾದ ಕಗ್ಗ ಭತ್ತಕ್ಕೆ ಜಿಯೋ ಟ್ಯಾಗಿಂಗ್‌ ನೀಡುವ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಶೀಘ್ರದಲ್ಲಿ ಅದು ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಮಂಡಳಿ ಸದಸ್ಯ ಪ್ರಕಾಶ ಮೇಸ್ತ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್‌.ಕೆ. ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಉದಯ ನಾಯ್ಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ