ಆ್ಯಪ್ನಗರ

ಸಂಭ್ರಮದ ಈದ್‌ ಮಿಲಾದ್‌ ಆಚರಣೆ

ಕುಮಟಾ : ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಹತ್ತಿರದ ಚಂದಾವರದಲ್ಲಿಭಾನುವಾರ ಸಡಗರದಿಂದ ಆಚರಿಸಲಾಯಿತು.

Vijaya Karnataka 11 Nov 2019, 5:00 am
ಕುಮಟಾ : ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಹತ್ತಿರದ ಚಂದಾವರದಲ್ಲಿಭಾನುವಾರ ಸಡಗರದಿಂದ ಆಚರಿಸಲಾಯಿತು.
Vijaya Karnataka Web eid milad celebration
ಸಂಭ್ರಮದ ಈದ್‌ ಮಿಲಾದ್‌ ಆಚರಣೆ


ನೂರಾನಿ ಮಸೀದಿಯಿಂದ ಆರಂಭಗೊಂಡ ಬೃಹತ್‌ ಮೆರವಣಿಗೆ ಜೀಲಾನಿ ಮೊಹಲ್ಲಾ, ಭಟ್ಟರಗದ್ದೆ, ನಾಕಾ ವೃತ್ತ, ಸುಲ್ತಾನಿ ಮೊಹಲ್ಲಾದ ಮೂಲಕ ಪುನಃ ನೂರಾನಿ ಮೊಹಲ್ಲಾದಲ್ಲಿಸಮಾರೋಪಗೊಂಡು ಸಭೆಯಾಗಿ ಪರಿವರ್ತನೆಗೊಂಡಿತು.

ಬೃಹತ್‌ ಧ್ವಜ ಹಿಡಿದು ಭಾರಿ ಪ್ರಮಾಣದ ಧ್ವನಿ ವರ್ಧಕಗಳನ್ನು ಅಳವಡಿಸಿದ ವಾಹನಗಳು ಶೃಂಗಾರಗೊಂಡು ಮೆರವಣಿಗೆಯಲ್ಲಿಸಾಗಿದವು. ಮುಸ್ಲೀಮರೆಲ್ಲಪೈಗಂಬರ್‌ ಮೊಹಮ್ಮದರ ತತ್ತಆದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ತ$್ವ ಹಾಗೂ ಸನ್ಮಾರ್ಗಗಳ ಸಂದೇಶ ಹೊಂದಿದ ಹಾಡುಗಳನ್ನು ಹಾಡಿದರು.

ಮೆರವಣಿಗೆಯಲ್ಲಿಮೊದಲು ಬೃಹತ್‌ ಬೈಕ್‌ ಮತ್ತು ಕಾರ್‌ ರಾರ‍ಯಲಿ ನಡೆಯಿತು. ಯುವಕರು ಶ್ವೇತ ಬಣ್ಣದ ಬಟ್ಟೆ ಧರಿಸಿ ಪ್ರವಾದಿಯವರ ಸಂದೇಶವನ್ನು ಪರಿಪಾಲಿಸುವ ಸಂಕಲ್ಪ ಮಾಡಿದರು. ಅಲ್ಲದೇ ಸತ್ಯ, ಧರ್ಮದ ಸಂದೇಶವನ್ನು ಸಾರಿ ಹೇಳಲಾಯಿತು. ಪೈಗಂಬರರು ಲೋಕಕ್ಕೆ ಸಾರಿದ ಪ್ರೀತಿ, ವಿಶ್ವಾಸ, ಆತ್ಮೀಯತೆ, ಪರಧರ್ಮ ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡಿದರು. ಈ ವೇಳೆ ಎಲ್ಲಧರ್ಮದವರಿಗೂ ಲಘು ಪಾನೀಯ ಹಾಗೂ ಸಿಹಿ ತಿಂಡಿಗಳನ್ನು ಹಂಚಿ ಪರಸ್ಪರ ಶುಭ ಕೋರಿ ಆತ್ಮೀಯತೆ ಹಾಗೂ ಭಾವೈಕ್ಯತೆ ಮೆರೆದ ದೃಶ್ಯ ಕಂಡು ಬಂದಿತು.

ಜಾತಿ, ಧರ್ಮವೆನ್ನದೇ ಈ ಲೋಕದಲ್ಲಿಸಹಬಾಳ್ವೆ ನಡೆಸುವುದೇ ಇಸ್ಲಾಂ ಧರ್ಮದ ತತ್ತ$್ವ. ಪ್ರವಾದಿಯವರು ಲೋಕಕ್ಕೆ ಸಾರಿದ ಸಂದೇಶವನ್ನು ಮನುಷ್ಯನ ಬದುಕಿಗೆ ಸರಳ ಮಾರ್ಗವನ್ನು ಕಲ್ಪಿಸಿಕೊಟ್ಟಿದೆ. ದ್ವೇಷ, ಅಸೂಯೆ ಹೋಗಲಾಡಿಸಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸಹಬಾಳ್ವೆ ಬದುಕು ನಡೆಸಬೇಕು. ಉತ್ತಮ ನಡತೆಯಿಂದ ಎಲ್ಲರೂ ದೇವರ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಪೈಗಂಬರರು ಅಲ್ಲಾಹನ ಸಂದೇಶವನ್ನು ಸಾರಿ ಲೋಕ ಕಲ್ಯಾಣಗೊಳ್ಳಲು ತಮ್ಮ ಜೀವನದುದ್ದಕ್ಕೂ ಪ್ರಯತ್ನಿಸಿದ್ದರು. ಈ ಬಗ್ಗೆ ಮೆರವಣಿಗೆ ಸಮಾರೋಪ ಸಮಾರಂಭದಲ್ಲಿಮೌಲಾನಾ ಅಷ್ಫಾಕ್‌, ಮೌಲಾನಾ ಅಬ್ದುಸ್ಸಲಾಮ, ಮೌಲಾನಾ ನೂರ್‌ ಆಲಮ್‌ ಈದ್‌ ಮಿಲಾದುನ್ನಬಿ ಕುರಿತು ವಿವರಿಸಿದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪೈಗಂಬರರ ಜೀವನದ ಮೇಲೆ ಬೆಳಕು ಚೆಲ್ಲುವ ಭಾಷಣ ಸ್ಪರ್ಧೆಗಳು ನಡೆದವು. ಪ್ರಮುಖರಾದ ಎಂ.ಟಿ.ಕುಕ್ಕಳ್ಳಿ, ಗ್ರಾ.ಪಂ. ಸದಸ್ಯ ಶಫಿ ಮುಲ್ಲಾ, ಇಲಿಯಾಸ್‌ ಕುಕ್ಕಳ್ಳಿ, ಇರ್ಫಾನ್‌ ಗನಿ, ಜಕಾಉಲ್ಲಾಕೋಟೆಬಾಗಿಲ್‌, ಶಫೀಯುಲ್ಲಾಖಾಜಿ, ಅಸ್ಗರ್‌ ಅಲಿ ಕೋಟೆಬಾಗಿಲ್‌, ರಶೀದ್‌ ಗನಿ, ರಫೀಕ್‌ ಹೆಮ್ಮಕ್ಕಿ, ಮನ್ಸೂರ್‌ ಕೋಟೆಬಾಗಿಲ್‌, ಇಮ್ರಾನ್‌ ಖಾನ್‌, ಎಖ್ಲಾಖ್‌ ಖಾನ್‌, ಅಕ್ಬರ್‌ ಕೋಟೆಬಾಗಿಲ್‌, ಜಾಫರ್‌ ಶೇಖ ಮೊದಲಾದವವರು ಉಪಸ್ಥಿತರಿದ್ದರು. ಭಟ್ಕಳ ಎಎಸ್‌ಪಿ ನಿಖಿಲ್‌ ನೇತೃತ್ವದಲ್ಲಿಪೊಲೀಸರು ಬಂದೋಬಸ್‌್ತ ಏರ್ಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ