ಆ್ಯಪ್ನಗರ

ಮೊಸಳೆ ದಾಳಿಗೆ ಆನೆ ಬಲಿ

ದಾಂಡೇಲಿ : ಕುಳಗಿ ಭಾಗವತಿ ರಸ್ತೆಯ ಬೊಮ್ಮನಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮಂಗಳವಾರ ನೀರು ಕುಡಿಯಲು ಹೋದ ಹೆಣ್ಣಾನೆಯೊಂದು ಮೊಸಳೆಗಳ ದಾಳಿಯಿಂದ ಸಾವನ್ನಪ್ಪಿದೆ.

Vijaya Karnataka 23 May 2019, 5:00 am
ದಾಂಡೇಲಿ : ಕುಳಗಿ ಭಾಗವತಿ ರಸ್ತೆಯ ಬೊಮ್ಮನಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮಂಗಳವಾರ ನೀರು ಕುಡಿಯಲು ಹೋದ ಹೆಣ್ಣಾನೆಯೊಂದು ಮೊಸಳೆಗಳ ದಾಳಿಯಿಂದ ಸಾವನ್ನಪ್ಪಿದೆ.
Vijaya Karnataka Web elephant kills crocodile attack
ಮೊಸಳೆ ದಾಳಿಗೆ ಆನೆ ಬಲಿ


ವಿಷಯ ತಿಳಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೊಸಳೆಗಳನ್ನು ಓಡಿಸಿ ಆನೆ ಬದುಕಿಸುವ ಪ್ರಯತ್ನ ಮಾಡಿದರೂ ಆನೆ ಸಾವನ್ನಪ್ಪಿದೆ. ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ನದಾಫ್‌ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಹಿನ್ನಿರಿನ ಬದಿಯ ಅರಣ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸಿಎಫ್‌ಗಳಾದ ಕೆ.ಎಸ್‌.ಗೊರವರ, ಸಂತೋಷ ಕೆಂಚಪ್ಪನವರ, ಆರ್‌ಎಫ್‌ಒ ಸಂತೋಷ ಚವಾಣ, ಕೆಮ್‌ಸಿಂಗ್‌ ರಾಥೋಡ, ಗಿರೀಶ, ದೀಪಕ ನಾಯ್ಕ, ಅನಂತಕುಮಾರ ಪಾಕಿ ಇತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ