ಆ್ಯಪ್ನಗರ

ಬತ್ತದ ಗದ್ದೆಗೆ ನುಗ್ಗಿದ ಆನೆಗಳು

ಕಾರವಾರ : ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಹಾಗೂ ಹಲಸಿನಕೊಪ್ಪ ಗ್ರಾಮಗಳ ಬತ್ತದ ಗದ್ದೆಗಳಿಗೆ ಸೋಮವಾರ ಕಾಡಾನೆಗಳು ನುಗ್ಗಿ ಪೈರನ್ನು ನಾಶಪಡಿಸಿವೆ.

Vijaya Karnataka 13 Nov 2019, 5:00 am
ಕಾರವಾರ : ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಹಾಗೂ ಹಲಸಿನಕೊಪ್ಪ ಗ್ರಾಮಗಳ ಬತ್ತದ ಗದ್ದೆಗಳಿಗೆ ಸೋಮವಾರ ಕಾಡಾನೆಗಳು ನುಗ್ಗಿ ಪೈರನ್ನು ನಾಶಪಡಿಸಿವೆ.
Vijaya Karnataka Web elephants rushed to the paddy field
ಬತ್ತದ ಗದ್ದೆಗೆ ನುಗ್ಗಿದ ಆನೆಗಳು


ಉಂಚಳ್ಳಿಯ ಕೃಷ್ಣ ಭಟ್‌, ಹಲಸಿನಕೊಪ್ಪದ ರಾಮಚಂದ್ರ ಶೇಟ್‌ ಅವರಿಗೆ ಸೇರಿದ ಬತ್ತದ ಗದ್ದೆಗೆ ಆನೆಗಳು ದಾಳಿ ನಡೆಸಿದ್ದು, ಎರಡೂ ಕಡೆ ಸೇರಿ ಅಂದಾಜು 3.5 ಎಕರೆ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಒಂದು ಮರಿ ಹಾಗೂ 3 ದೊಡ್ಡ ಆನೆಗಳ ಗುಂಪು ಫಸಲನ್ನು ನಾಶಪಡಿಸಿವೆ. ಅವು ಸೋಮವಾರ ಬೆಳಗ್ಗೆ ಬತ್ತದ ಗದ್ದೆಗೆ ಬಂದಿದ್ದವು. ಆನೆಯ ಕೂಗನ್ನು ಕೇಳಿದ ಗದ್ದೆಯ ಮಾಲಿಕರು ಸ್ಥಳಕ್ಕೆ ಹೋಗಿ ಆನೆಗಳನ್ನು ಓಡಿಸಿದ್ದಾರೆ. ಸಮೀಪದ ಅರಣ್ಯ ಸೇರಿಕೊಂಡಿದ್ದ ಆನೆಗಳು ಪುನಃ ಸಂಜೆ ವೇಳೆ ಗದ್ದೆಗಳತ್ತ ಬಂದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಪಟಾಕಿ ಸಿಡಿಸಿ ಆನೆಗಳನ್ನು ಕಾಡಿನತ್ತ ಹರಸಾಹಸಪಟ್ಟು ಓಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ