ಆ್ಯಪ್ನಗರ

ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ

ಅಂಕೋಲಾ : ಬದಲಾಗುತ್ತಿರುವ ಶಿಕ್ಷಣ ಪದ್ಧತಿಯಿಂದ ಎಲ್ಲರಂಗಗಳಲ್ಲಿಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರಕೋರೆ ಹೇಳಿದರು.

Vijaya Karnataka 23 Feb 2020, 5:00 am
ಅಂಕೋಲಾ : ಬದಲಾಗುತ್ತಿರುವ ಶಿಕ್ಷಣ ಪದ್ಧತಿಯಿಂದ ಎಲ್ಲರಂಗಗಳಲ್ಲಿಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರಕೋರೆ ಹೇಳಿದರು.
Vijaya Karnataka Web emphasis on qualitative education
ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ


ಅವರು ಪಟ್ಟಣದ ಕೆಎಲ್‌ಇ ಸಮೂಹ ಶಿಕ್ಷಣ ಸಂಸ್ಥೆಯಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿ ಇಂದಿನ ವಿದ್ಯಾರ್ಥಿ ಜಗತ್ತು ಆಂಗ್ಲಭಾಷಾ ಮಾಧ್ಯಮದ ಮೋಹದಿಂದ ನಮ್ಮ ಮಾತೃ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಆಂಗ್ಲಭಾಷೆ ಅನಿವಾರ್ಯವಿದೆ ನಿಜ. ಆದರೆ ಮೊದಲು ಮಾತೃ ಭಾಷೆಯಲ್ಲಿಕಲಿಯಬೇಕು ಎಂದರು.

ಈ ಸಂದರ್ಭದಲ್ಲಿಅಮೆರಿಕಾದ ಥಾಮಸ್‌ ಜೆಫರ್ಸನ್‌ ಯುನಿರ್ವಸಿಟಿಯಿಂದ ಗೌರವ ಡಾಕ್ಟರೇಟ್‌ ಪಡೆದ ಕಾರಣ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಡಾ. ಪ್ರಭಾಕರ್‌ಕೋರೆ ಅವರನ್ನು ಗೌರವಿಸಲಾಯಿತು.

ಕೆಎಲ್‌ಇ ಸ್ಥಳೀಯ ಕಾರ್ಯದರ್ಶಿ ಡಾ. ಡಿಎಲ್‌ಭಟ್ಕಳ್‌, ಸಂಯೋಜಕ ಆರ್‌ ನಟರಾಜ್‌, ಸದಸ್ಯೆ ಡಾ.ಮಿನಲ್‌ ನಾರ್ವೇಕರ್‌ ಮಾತನಾಡಿದರು.

ಈ ಸಂದರ್ಭದಲ್ಲಿಎನ್‌ಸಿಸಿ ಅಧಿಕಾರಿ ಗಿರಿಜಾ ತಳವಾರ, ಕ್ರೀಡಾ ಸಾಧಕ ವಿದ್ಯಾರ್ಥಿನಿ ಅಕ್ಷತಾಗೌಡ, ಕರಾಟೆ ಚಾಂಪಿಯನ್‌ ಪ್ರಮೋದ್‌ ನಾಯಕ, ಪಿಯುಸಿಯಲ್ಲಿಅತಿಹೆಚ್ಚು ಅಂಕಗಳಿಸಿದ ಅಕ್ಷತಾ ಗೌಡಅವರನ್ನು ಅಭಿನಂದಿಸಲಾಯಿತು. ಪ್ರಾಚಾರ್ಯೆ ಡಾ. ಸ್ಮಿತಾ ಪಾತರ್ಪೆಕರ್‌ ಸ್ವರಚಿತ ಕವನ ವಾಚಿಸಿದರು, ಪ್ರಾಚಾರ್ಯೆ ನಾಗಮ್ಮ ಮಮದಾಪುರ ವಂದಿಸಿದರು.

ಪ್ರಮುಖರಾದ ನ್ಯಾಯವಾದಿ ಸುಭಾಷ್‌ ನಾರ್ವೇಕರ್‌, ಬಿಜೆಪಿ ಮುಖಂಡ ಭಾಸ್ಕರ ನಾರ್ವೇಕರ್‌, ಪ್ರೊ.ಸಿದ್ದಲಿಂಗಯ್ಯ ಸ್ವಾಮಿ ವಸ್ತ್ರದ್‌ ಸಂಸ್ಥೆಯ ಎಲ್ಲಾಸಿಬ್ಬಂದಿ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ