ಆ್ಯಪ್ನಗರ

ಸೇವಾ ಭಾವ ವೃದ್ಧಿಗೆ ಎನ್ನೆಸ್ಸೆಸ್‌ ಸಹಕಾರಿ

ಹೊನ್ನಾವರ : ಸೇವಾ ಮನೋಭಾವ ಬೆಳೆಯಲು ಎನ್‌ಎಸ್‌ಎಸ್‌ ಸಹಕಾರಿ ಎಂದು ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಹೇಳಿದರು.

Vijaya Karnataka 15 Mar 2019, 5:00 am
ಹೊನ್ನಾವರ : ಸೇವಾ ಮನೋಭಾವ ಬೆಳೆಯಲು ಎನ್‌ಎಸ್‌ಎಸ್‌ ಸಹಕಾರಿ ಎಂದು ಎಂ.ಪಿ.ಇ. ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಹೇಳಿದರು.
Vijaya Karnataka Web ennyssez is a collaborator for service development
ಸೇವಾ ಭಾವ ವೃದ್ಧಿಗೆ ಎನ್ನೆಸ್ಸೆಸ್‌ ಸಹಕಾರಿ


ತಾಲೂಕಿನ ವಂದೂರಿನಲ್ಲಿ ನಡೆದ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್‌ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಸಮಾಜ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಎಸ್‌.ಎಂ.ಭಟ್ಟ, ಗ್ರಾ.ಪಂ. ಸದಸ್ಯ ಗೋವಿಂದ ಗೌಡ ಪಾಲ್ಗೊಂಡಿದ್ದರು. ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ. ನಾಯ್ಕ ಅಧ್ಯಕ್ಷ ತೆ ವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಊರ್ಮಿಳಾ ಶೇಟ್‌ ಮತ್ತು ಮುಖ್ಯಾಧ್ಯಾಪಕಿ ಉಷಾ ನಾಯ್ಕ, ಪಾಲ್ಗೊಂಡಿದ್ದರು.

ರಚನಾತ್ಮಕ ಚಟುವಟಿಕೆಗಳು: 7 ದಿನಗಳ ಶಿಬಿರ ನಡೆದ ಶಿಬಿರದಲ್ಲಿ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಶಿಬಿರಾರ್ಥಿಗಳು ಬಹಳ ಕಾಲದಿಂದ ಮಣ್ಣಿನಿಂದ ಮುಚ್ಚಿಹೋಗಿ ನಿರುಪಯುಕ್ತವಾಗಿದ್ದ ಬೋರ್‌ವೆಲ್‌ ಮೇಲಿನ ಮಣ್ಣು ಕಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಿ ಉಪಯೋಗಕ್ಕೆ ಬರುವಂತೆ ಮಾಡಿದರು. ಚರಂಡಿಯಲ್ಲಿ ತುಂಬಿರುವ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಿದರು. ತೋಟದಲ್ಲಿ ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ಕೆರೆಯನ್ನು ಸ್ವಚ್ಛಗೊಳಿಸಿದರು. ಮನೆಮನೆಗೆ ತೆರಳಿ ಮತದಾನ ಜಾಗೃತಿ ಜಾಥಾ ನಡೆಸಿದರು.

ಪ್ರತಿದಿನ ಸಂಜೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾ.ಪಂ. ಸದಸ್ಯ ಎಂ.ಜಿ. ಹೆಗಡೆ ಅಧ್ಯಕ್ಷ ತೆಯಲ್ಲಿ ಸ್ವಉದ್ಯೋಗ ಮಾರ್ಗದರ್ಶನದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ.ವಿ.ಎಂ.ಭಂಡಾರಿ ಉಪನ್ಯಾಸ ನೀಡಿದರು.

ಪ್ರೊ.ಎಸ್‌.ಸುರೇಶ ಅಧ್ಯಕ್ಷ ತೆಯಲ್ಲಿ ಮತದಾರ ಜಾಗೃತಿ ಉಪನ್ಯಾಸ ನಡೆಯಿತು. ಡಾ.ಎಂ.ಆರ್‌. ನಾಯಕ ಮತದಾನದ ಮಹತ್ವ ಕುರಿತು ಹಾಗೂ ಜೀವಜಲ ಸಂರಕ್ಷ ಣೆಯ ಕುರಿತು ಪ್ರೊ.ಎಂ.ಜಿ.ಹೆಗಡೆ ಉಪನ್ಯಾಸ ನೀಡಿದರು. ತಾಲೂಕ ಪಂಚಾಯಿತಿ ವತಿಯಿಂದ ಮತದಾನ ಯಂತ್ರ ಖಾತ್ರಿ ಪ್ರಾತ್ಯಕ್ಷಿಕೆ ನಡೆಯಿತು.

ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಹೊಸಾಕುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಶೆಟ್ಟಿ ಉಪಸ್ಥಿತರಿದ್ದರು. ನಂತರ ಪರಂಪರೆ ಕೂಟದ ವತಿಯಿಂದ ಯಕ್ಷ ಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

ಜಾಗತಿಕ ತಾಪಮಾನದ ಅರಿವು ಕುರಿತು ಪ್ರೊ.ಆರ್‌.ವಿ.ಹೆಗಡೆ, ಘನತ್ಯಾಜ್ಯ ನಿರ್ವಹಣೆ ಕುರಿತು ಪ್ರೊ. ಎಚ್‌.ಟಿ.ಅರ್ವಾರೆ ಉಪನ್ಯಾಸ ನೀಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಎನ್‌ಎಸ್‌ಎಸ್‌ ಕೋಶದ ಸಂಯೋಜನಾಧಿಕಾರಿ ಡಾ.ಎಂ.ಬಿ.ದಳಪತಿ, ಜಿಲ್ಲಾ ನೋಡಲ್‌ ಅಧಿಕಾರಿ ಪ್ರೊ.ಜಿ.ಜಿ.ಭಟ್ಟ ಶಿಬಿರಕ್ಕೆ ಭೇಟಿ ನೀಡಿದರು.

ಆರೋಗ್ಯ ರಕ್ಷ ಣೆ ಕುರಿತು ಡಾ.ರಂಗನಾಥ ಪೂಜಾರಿ ಮಾಹಿತಿ ಹಕ್ಕು ಕಾಯ್ದೆಯ ಕುರಿತು ವಕೀಲ ಎಂ.ಎಸ್‌.ಭಟ್ಟ, ವ್ಯಕ್ತಿತ್ವ ವಿಕಸನದ ಕುರಿತು ಮಹೇಶ ಕಲ್ಯಾಣಪುರ ಉಪನ್ಯಾಸ ನೀಡಿದರು.

ಗ್ರಾಮೀಣ ಮಹಿಳೆಯರ ಸಬಲೀಕರಣದ ಕುರಿತು ನ್ಯಾಯವಾದಿ ಶರಾವತಿ ಹೆಗಡೆ ಉಪನ್ಯಾಸ ನೀಡಿದರು. ಪ್ರತಿದಿನ ಶಿಬಿರದಲ್ಲಿ ಮುಂಜಾನೆ ಧ್ವಜಾರೋಹಣ, ವ್ಯಾಯಾಮ ಮತ್ತು ಸಂಜೆ ಮನರಂಜನಾ ಕಾರ್ಯಕ್ರಮ ನಡೆದವು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ